Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪವಾಡ ಆಗಲಿ, ಆ ದೇವರು ವಿಜಿನಾ ನಮಗೆ ಕೊಟ್ಬಿಡ್ಲಿ: ವಿಜಯಲಕ್ಷ್ಮಿ ಭಾವುಕ
ಸಂಚಾರಿ ವಿಜಯ್ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ವಿಜಯಲಕ್ಷ್ಮಿ 'ಪವಾಡ ಏನಾದರೂ ಆಗಲಿ, ಉಳಿಸಿಕೊಳ್ಳಲು ಸಾಧ್ಯವಾದರೆ ದಯವಿಟ್ಟು ನಮ್ಮ ವಿಜಿ ಬ್ರೋನ ವಾಪಸ್ ಕೊಟ್ಬಿಡು ದೇವರೇ' ಎಂದು ಕೇಳಿಕೊಂಡಿದ್ದಾರೆ.
Recommended Video
ಸಂಚಾರಿ ವಿಜಯ್ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ ವಿಜಯಲಕ್ಷ್ಮಿ 'ಕಳೆದ ವರ್ಷ ನಾನು ಮಲ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಮಯದಲ್ಲಿ ಸಂಚಾರಿ ವಿಜಯ್ ಮತ್ತು ಕಾರುಣ್ಯ ರಾಮ್ ನನ್ನ ಯೋಗಕ್ಷೇಮ ವಿಚಾರಿಸಿದವರಲ್ಲಿ ಮೊದಲಿಗರು. ತುಂಬಾ ಪ್ರೀತಿಯಿಂದ, ತುಂಬಾ ಆತ್ಮೀಯತೆಯಿಂದ ನನ್ನ ಭೇಟಿ ಮಾಡಿದರು. ವಿಜಯ್ ಭೇಟಿ ಬಳಿಕ ನನಗೊಬ್ಬ ಸಹೋದರ ಸಿಕ್ಕಿದ್ದರು. ವಿಜಯ್ ಬ್ರೋ ಎಂದು ಕರೆಯುತ್ತಿದ್ದೆ. ಈ ಸುದ್ದಿ ಕೇಳಿದಾಗನಿಂದಲೂ ಇದು ನಿಜ ಆಗಿರಬಾರದು ಅನಿಸುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾರು
ಮಾರಿ
ಜನರಿಗೆ
ಸೇವೆ
ಮಾಡೋಣ
ಎಂದಿದ್ದ
ಸಂಚಾರಿ
ವಿಜಯ್:
ಜಗ್ಗೇಶ್
'ವಿಜಿಗೆ ಹೀಗಾಗಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ವಿಜಿ ಬ್ರೋ ನಮ್ಮನ್ನು ಬಿಟ್ಟು ಹೋಗ್ಬೇಕು ಅಂತ ಏಕೆ ಅನಿಸಿತು. ಬಹಳ ಶೋಕದಲ್ಲಿದ್ದೇವೆ. ಪ್ರತಿಭಾನ್ವಿತ ನಟ ಜೊತೆಗೆ ಒಳ್ಳೆಯ ಮನುಷ್ಯ. ಕಲಾವಿದರು ಈ ರೀತಿ ದುರಂತ ಎದುರಿಸುವುದು ಬಹಳ ನೋವು ಉಂಟು ಮಾಡುತ್ತಿದೆ' ಎಂದು ಭಾವುಕರಾದರು.
'ದಯವಿಟ್ಟು ವಿಜಿ ಅವರಿಗೆ ಏನಾದರು ಪವಾಡ ಆಗಬಾರದೇ? ದೇವರೇ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾದರೆ ವಿಜಿನಾ ಕೊಟ್ಬಿಡು. ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಈ ಸುದ್ದಿ ನೋಡಲು ಸಹ ಸಾಧ್ಯವಾಗ್ತಿಲ್ಲ' ಎಂದು ನಟಿ ವಿಜಯಲಕ್ಷ್ಮಿ ವಿನಂತಿಸಿದರು.
ಅಂದ್ಹಾಗೆ, ವಿಜಯಲಕ್ಷ್ಮಿ ಇತ್ತೀಚಿಗಷ್ಟೆ ತಮ್ಮ ಸಹೋದರಿಗೆ ಸಹಾಯ ಕೋರಿ ವಿಡಿಯೋ ಮಾಡಿದ್ದರು. ಅದಕ್ಕೂ ಮುಂಚೆ ತಮಗೆ ಆರೋಗ್ಯ ಸರಿಯಿಲ್ಲ ಆರ್ಥಿಕ ಸಹಾಯ ಮಾಡಿದ್ದರು ಎಂದು ಅಂಗಲಾಚಿದ್ದರು. ಆ ಸಮಯದಲ್ಲಿ ಸಂಚಾರಿ ವಿಜಯ್, ಕಾರುಣ್ಯ ರಾಮ್ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು.