Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನಸು ಕಣ್ಣು ತೆರೆದಾಗ' ಚಿತ್ರದ ಟ್ರೈಲರ್ ಔಟ್
ಸ್ಯಾಂಡಲ್ ವುಡ್ ನಲ್ಲಿ 'ರಂಗಿತರಂಗ' ಕಮಾಲ್ ಮಾಡಿದ್ದನ್ನು ನೀವೆಲ್ಲರೂ ನೋಡಿದ್ದೀರಾ, ಕೇಳಿದ್ದೀರಾ, ಅಲ್ವಾ. ಎಲ್ಲಾ ಹೊಸಬರನ್ನು ಹಾಕಿಕೊಂಡು ಮಾಡಿದ ಸಿನೆಮಾ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಅದೇನೆ ಇರಲಿ ಇದೀಗ ಅದೇ ಸಾಲಿಗೆ ಇನ್ನೊಂದು ಹೊಸ ಸಿನೆಮಾ ಸೇರ್ಪಡೆ ಆಗುತ್ತಿದೆ. ಕರಾವಳಿ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಸಂತೋಷ್ ಶೆಟ್ಟಿ ಕಟೀಲ್ ನಿರ್ದೇಶನ ಮಾಡುತ್ತಿರುವ 'ಕನಸು ಕಣ್ಣು ತೆರೆದಾಗ' ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ.
ಮೇಲ್ನೊಟಕ್ಕೆ ಪೂರ್ತಿ ಮಕ್ಕಳಿಗೆ ಸಂಬಂಧಪಟ್ಟಂತೆ ತೋರುವ 'ಕನಸು ಕಣ್ಣು ತೆರೆದಾಗ' ಚಿತ್ರದ ಬಿಡುಗಡೆಯಾಗಿರುವ ಟ್ರೈಲರ್ ನೀವೇ ನೋಡಿ.
ಗಾನ ಸಿರಿ ಕ್ರಿಯೇಷನ್ಸ್, ಮಾಣಿಕ್ಯ ಕಂಬೈನ್ಸ್ ಅರ್ಪಿಸುವ 'ಕನಸು ಕಣ್ಣು ತೆರೆದಾಗ' ಚಿತ್ರದಲ್ಲಿ ನೀವು ಪ್ರೊಫೆಸರ್ 'ಹುಚ್ಚ' ಅನ್ನುವವರನ್ನು ಭೇಟಿ ಮಾಡಲಿದ್ದೀರಿ. ಎರಡು ಜನ ಹುಡುಗರ ಫ್ರೆಂಡ್ ಶಿಪ್ ಕಥೆಯನ್ನಾಧರಿಸಿದ ಚಿತ್ರದಲ್ಲಿ ಎಲ್ಲಾ ಹೊಸೊಬ್ಬರೇ ಇದ್ದಾರೆ.
'ಕನಸು ಕಾಣೋದಕ್ಕೂ ಒಂದು ಮಿತಿ ಇರಬೇಕು ಕಣೋ' 'ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಇಂತಹ ಅವಮಾನಗಳನ್ನು ಸಹಿಸಲೇಬೇಕು' ಹೀಗೆ ಪಂಚ್ ಡೈಲಾಗ್ ಇರುವ 'ಕನಸು ಕಣ್ಣು ತೆರೆದಾಗ' ಚಿತ್ರಕ್ಕೆ ಯಶವಂತ್ ಉಡುಪಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಸ್ವಲ್ಪ ಡ್ರಾಮಾ, ಕಾಮಿಡಿ, ಆಕ್ಷನ್ ಇರುವ 'ಕನಸು ಕಣ್ಣು ತೆರೆದಾಗ' ಚಿತ್ರದಲ್ಲಿ ಗಂಗಾಧರ್ ಬೆಳ್ಳಾರೆ, ತಮನ್ನಾ ಶೆಟ್ಟಿ, ಬಾಲ ನಟರಾದ ಜಗದೀಶ, ಟಿ ಮತ್ತು ಪವನ್ ಬೆಳ್ಳಾರೆ, ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. 'ರಂಗಿತರಂಗ' ಹಿಟ್ ಆದಂತೆ 'ಕನಸು ಕಣ್ಣು ತೆರೆದಾಗ' ಚಿತ್ರನೂ ಕಮಾಲ್ ಮಾಡುತ್ತಾ ಅನ್ನೋದನ್ನ ನೋಡಲು, ಚಿತ್ರ ತೆರೆಗೆ ಬರುವವರೆಗೂ ನೀವು ಕಾಯಲೇ ಬೇಕು.