Just In
Don't Miss!
- News
ಕರ್ನಾಟಕದಲ್ಲಿ 573 ಕೊರೊನಾ ಸೋಂಕಿತರು ಪತ್ತೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂಬರೀಶ್ ಗೆ ಸಿಕ್ಕ ಗೌರವ ರಾಜ್ ಗೆ ಸಿಗಲಿಲ್ಲ?
ಮಾಧ್ಯಮಗಳಲ್ಲಿ ಸುದ್ದಿ ಕೇಳಿದ್ದ ಚಿತ್ರಪ್ರೇಮಿಗಳಿಗೆ, ರಾಜ್ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಯಾಕಂದ್ರೆ ವೇದಿಕೆಯಲ್ಲಿ ಮತ್ತೆ ಅಭಿಮಾನಿಗಳ ಆಸೆಗೆ ತಣ್ಣೀರೆರೆಚಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.
ವೇದಿಕೆಯ ಮೇಲೆ ಮಾಡೆಲ್ ಗಳಂತೆ ಬಂದ ಈ ಇಬ್ಬರೂ ಸೂಪರ್ ಸ್ಟಾರ್ ಗಳು ಮತ್ತೊಮ್ಮೆ ಡಬ್ಬಿಂಗ್ ವಿರೋಧಿ ಆಂದೋಲನದಲ್ಲಿ ನಾಮ್ ಕೆ ವಾಸ್ತೇ ಬಂದು ಹೋದಂತೆ ಇಲ್ಲೂ ಬಂದು ಹೋದ್ರು. ಇದು ಅಭಿಮಾನಿಗಳಿಗೆ ನಿರಾಶೆಯ ಜೊತೆ ನೋವುಂಟುಮಾಡ್ತು. [ಅಣ್ಣಾವ್ರ ನೆನಪಲ್ಲಿ ಮನರಂಜನಾ ಮಹಾಪೂರ]
ಕೆಲವರು ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ರೆ ಮತ್ತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗ ಜಾಡಿಸ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಸರಿನಂತಿರೋ ರಾಜ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ನಾಲ್ಕು ಹೆಜ್ಜೆ ಹಾಕಿ ರಂಜಿಸಬಹುದಿತ್ತು. ಯಾಕಂದ್ರೆ ಇದೇ ಕಿಚ್ಚ ದಚ್ಚು ರೆಬೆಲ್ ಸ್ಟಾರ್ ಅಂಬಿಗೆ 60 ವರ್ಷವಾದ ಸಂಭ್ರಮದ ಕಾರ್ಯಕ್ರಮದಲ್ಲಿ ಕುಚಿಕೂ ಕುಚಿಕೂ ಹಾಡಿಗೆ ಕುಣಿದು ಹುಚ್ಚೆಬ್ಬಿಸಿದ್ರು.
ಪಾಪ ಅಂಬಿಗೆ ಸಿಕ್ಕ ಗೌರವ ರಾಜ್ ಗೆ ಸಿಗ್ಲಿಲ್ವಾ ಅಂತೀರಾ ಖಂಡಿತಾ ಅಲ್ಲ. ರಾಜ್ ಕಾರ್ಯಕ್ರಮದಲ್ಲಿ ಹೆಜ್ಜೆಹಾಕಿದ್ರು ಅವ್ರ ಗೌರವ ಹೆಚ್ಚಾಗ್ತಿತ್ತು. ಇವ್ರು ಕುಣಿದು ರಾಜ್ ಗೆ ಗೌರವ ಕೊಡ್ಬೇಕಾಗಿಲ್ಲ ಅಂತಿದ್ದಾರೆ ರಾಜ್ ಅಭಿಮಾನಿಗಳು.