Don't Miss!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- News Karnataka Rain: ರಾಜ್ಯಕ್ಕೆ ಶೇ.20ರಷ್ಟು ಮಳೆ ಕೊರತೆ: ಏಪ್ರಿಲ್ 25 ದಿನದಲ್ಲಿ ಸುರಿದ ಮಳೆ ವರದಿ ಇಲ್ಲಿದೆ
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ
ಪಟ ಪಟ ಅಂತ ಮಾತಲ್ಲೇ ಪಟಾಕಿ ಸಿಡಿಸುವ ಗೋಲ್ಡನ್ ಸ್ಟಾರ್ ಗಣೇಶ್....ಏನು ಮಾತನಾಡುತ್ತಿದ್ದಾರೆ ಅಂತ ಅರ್ಥ ಮಾಡಿಕೊಳ್ಳುವುದಕ್ಕೆ ತಲೆ ಕೆರ್ಕೊಬೇಕು! ಹಾಗೆ 'ಯಬಡ ತಬಡ' ಮಾತನಾಡುವ ಭಟ್ರು. ಈ ಇಬ್ಬರು ಭಿನ್ನ ವಿಭಿನ್ನ ಪ್ರತಿಭೆಗಳು ಸೇರಿ ಕೊಟ್ಟ ಮನಮಿಡಿಯುವ ಚಿತ್ರವೇ 'ಮುಂಗಾರು ಮಳೆ'.
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಈ ಜೋಡಿ, 'ಮುಂಗಾರು ಮಳೆ' ಮತ್ತು 'ಗಾಳಿಪಟ' ಚಿತ್ರಗಳ ನಂತ್ರ ಮೂರನೇ ಬಾರಿ ಒಂದಾಗ್ತಿದ್ದಾರೆ. ಅಯ್ಯೋ...ಇದು ಹಳೇ ಸುದ್ದಿ ಅಲ್ಲವೇ...ಅಂತ ಮೂಗು ಮುರಿಯಬೇಡಿ. ಇಲ್ಲಿವರೆಗೂ ಮಾತುಕತೆ ಹಂತದಲ್ಲಿದ್ದ ಗಣೇಶ್-ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಇದೀಗ ಪಕ್ಕಾ ಆಗಿದೆ. [ಮತ್ತೆ 'ಮಳೆ'ಯಲ್ಲಿ ನೆನೆಯುತ್ತಾರಾ ಗಣಿ, ಭಟ್ರು..?]
ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬರುತ್ತಿರುವ 'ಮೀಡಿಯಾ ಹೌಸ್' ಲಾಂಛನದಲ್ಲಿ ಬಿ.ಸುರೇಶ್ ಮತ್ತು ಶೈಲಜಾ ನಾಗ್ ಗಣಿ ಮತ್ತು ಭಟ್ಟರ ಕಾಂಬಿನೇಷನ್ ನ ಮೂರನೇ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದಾರೆ.
ಈ ಹಿಂದೆ ಗಣೇಶ್ ಅಭಿನಯದ 'ಸಕ್ಕರೆ' ಚಿತ್ರಕ್ಕೆ ಬಿ.ಸುರೇಶ್ ನಿರ್ಮಾಣದ ಹೊಣೆ ಹೊತ್ತಿದ್ದರು. ಹೇಳಿ ಕೇಳಿ ಗಣಿ ಮತ್ತು ಭಟ್ರಿಗೆ ಬಿ.ಸುರೇಶ್ ಆಪ್ತರು. ಹೀಗಾಗಿ ಈ ಚಿತ್ರಕ್ಕೂ ಅವರೇ ಬಂಡವಾಳ ಹಾಕುವುದಕ್ಕೆ ಮುಂದೆ ಬಂದಿದ್ದಾರೆ. [ಸದ್ದಿಲ್ಲದೇ ಶುರುವಾಯ್ತು 'ಮುಂಗಾರು ಮಳೆ' ಅಬ್ಬರ]
ಗಣೇಶ್ ಗಾಗಿ ಸ್ಪೆಷಲ್ಲಾಗಿ ಕಥೆ-ಚಿತ್ರಕಥೆ ಬರೆಯುವ ಕೆಲಸಕ್ಕೆ ಯೋಗರಾಜ್ ಭಟ್ ಚಾಲನೆ ನೀಡಿದ್ದಾರಂತೆ. ಹಳೇ ಕಾಮಿಡಿ ಟೈಮ್ ಗಣೇಶನನ್ನ ತಲೆಯಲ್ಲಿಟ್ಟುಕೊಂಡು ಕಥೆ ಯೋಚಿಸುತ್ತಿರುವ ಭಟ್ರು, ಚಿತ್ರಕ್ಕಿನ್ನೂ ನಾಯಕಿಯನ್ನ ಸೆಲೆಕ್ಟ್ ಮಾಡಿಲ್ಲ. ಹಾಗೆ ಟೈಟಲ್ ಕೂಡ ಫೈನಲ್ ಆಗಿಲ್ಲ.
'ಮುಂಗಾರು ಮಳೆ' ಮತ್ತು 'ಗಾಳಿಪಟ'ದಲ್ಲಿ ಮಳೆಯ ಅಬ್ಬರವಿದ್ದರಿಂದ, ಈ ಬಾರಿಯೂ ಗಣಿ ಮಳೆಯಲ್ಲಿ ನೆನೆಯುತ್ತಾರಾ ಅನ್ನೋದು ನಮಗಂತೂ ಗೊತ್ತಿಲ್ಲ. ಅದನ್ನ ಭಟ್ರು ಇನ್ನೂ ನಿರ್ಧಾರ ಮಾಡಿಲ್ಲ. ಆದ್ರೆ, ಚಿತ್ರಕ್ಕೆ ಸಂಗೀತ ನೀಡುವುದಕ್ಕೆ ವಿ.ಹರಿಕೃಷ್ಣ ಮಾತ್ರ ತಯಾರಾಗಿದ್ದಾರೆ. ಏಪ್ರಿಲ್ ನಲ್ಲಿ ಈ ಚಿತ್ರಕ್ಕೆ ಚಾಲನೆ ಸಿಗಲಿದೆ. ಅಲ್ಲಿಗೆ, ಬೇಸಿಗೆ ರಜದಲ್ಲಿ ಗಣಿ ಅಭಿಮಾನಿಗಳಿಗೆ ಮಜಾ ಗ್ಯಾರೆಂಟಿ ಆದ್ಹಾಗೆ. (ಫಿಲ್ಮಿಬೀಟ್ ಕನ್ನಡ)