Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿವಾದಕ್ಕೆ ಸಿಲುಕಿದ್ದ ಪದವಿ ಪೂರ್ವ: ಸನ್ ನೆಟ್ವರ್ಕ್ಗೆ ಭಾರೀ ಮೊತ್ತಕ್ಕೆ ಟಿವಿ, ಡಿಜಿಟಲ್ ಹಕ್ಕುಗಳು ಸೇಲ್
ಯೋಗರಾಜ್ ಭಟ್ ಹಾಗೂ ರವಿ ಶಾಮನೂರ್ ಜಂಟಿಯಾಗಿ ನಿರ್ಮಿಸಿದ್ದ 'ಪದವಿ ಪೂರ್ವ'. ಈ ಸಿನಿಮಾ ಬಿಡುಗಡೆಗೂ ಮುನ್ನ ಸ್ಯಾಟಲೈಟ್ ಹಾಗೂ ಓಟಿಟಿ ಖರೀದಿ ವಿಚಾರವಾಗಿ ವಿವಾದಕ್ಕೆ ಸಿಲುಕಿತ್ತು. ಇದೇ ವಿಚಾರ ಯೋಗರಾಜ್ ಭಟ್ ಹಾಗೂ ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ನಡುವೆ ವೈಮಸ್ಸಿಗೂ ಕಾರಣವಾಗಿತ್ತು.
ಈ ಸಂಬಂಧ ಯೋಗರಾಜ್ ಭಟ್ ಆಡಿಯೋ ಲೀಕ್ ಆಗಿ ವೈರಲ್ ಆಗಿತ್ತು. ಈ ಆಡಿಯೋದಲ್ಲಿ 'ಪದವಿ ಪೂರ್ವ' ಸಿನಿಮಾದ ಸ್ಯಾಟಲೈಟ್ ಖರೀದಿಯಿಂದ ಹಿಂದೆ ಸರಿದಿದ್ದಾರೆಂದು ರಾಘವೇಂದ್ರ ಹುಣಸೂರು ವಿರುದ್ಧ ಗರಂ ಆಗಿದ್ದರು. ಈಗ ಇದೇ ಸಿನಿಮಾವನ್ನು ಬೇರೆ ಮನರಂಜನಾ ವಾಹಿನಿ ಖರೀದಿ ಮಾಡಿದೆ.
ಯೋಗರಾಜ್
ಭಟ್ರ
'ಗರಡಿ'
ಮುಕ್ತಾಯ:
ಇನ್ನೇನಿದ್ರೂ
ಥಿಯೇಟರ್ನಲ್ಲೇ
ಆಟ!
'ಪದವಿ ಪೂರ್ವ' ಸಿನಿಮಾ ಯೂತ್ ಸ್ಟೋರಿ, ನಿರ್ದೇಶನ, ಛಾಯಾಗ್ರಹಣ, ಹಾಡುಗಳಿಂದ ಸದ್ದು ಮಾಡಿತ್ತು. ಅಲ್ಲದೆ ಹೊಸ ಪ್ರತಿಭೆಗಳ ನಟನೆಯಿಂದಾನೂ ಹದಿಹರೆಯದ ವಯಸ್ಸಿನ ಹುಡುಗ ಹುಡುಗಿಯರ ಮನಸ್ಸು ಗೆದ್ದಿದ್ದರು. ಸದ್ಯ ಈ ಸಿನಿಮಾ ಥಿಯೇಟರ್ಗಳಲ್ಲಿ ಮೂರನೇ ವಾರ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಸಿನಿಮಾದ ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳು ಮಾರಾಟ ಆಗಿದೆ.
'ಪದವಿ ಪೂರ್ವ' ಸಿನಿಮಾದ ಕನ್ನಡ ಭಾಷೆಯ ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳನ್ನು ಒಂದೊಳ್ಳೆ ಮೊತ್ತಕ್ಕೆ ಖರೀದಿಯಾಗಿದೆ. ಉದಯ ಟಿವಿ ಮತ್ತು ಸನ್ನೆಕ್ಸ್ಟ್ ಟಿವಿ ಹಾಗೂ ಓಟಿಟಿ ಹಕ್ಕುಗಳನ್ನು ಖರೀದಿ ಮಾಡಿದೆ. ಹೊಸಬರ ಸಿನಿಮಾ ಸುಮಾರು 2 ಕೋಟಿ ರೂ. ಆಸುಪಾಸಿನಲ್ಲಿ ಸೇಲ್ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರ ಹಾಕಿಲ್ಲ. ಇದರೊಂದಿಗೆ ಕನ್ನಡ ಬಿಟ್ಟು ಬೇರೆ ಭಾಷೆಯ ಡಬ್ಬಿಂಗ್ ಮತ್ತು ರೀಮೇಕ್ ಹಕ್ಕುಗಳು ತಂಡದ ಬಳಿಯೇ ಇವೆ.
ಈ ಸಿನಿಮಾದಲ್ಲಿ ಹೀರೊ ಆಗಿ ಪೃಥ್ವಿ ಶಾಮನೂರ್, ಹೀರೊಯಿನ್ ಆಗಿ ಅಂಜಲಿ ಅನಿಶ್ ಮತ್ತು ಯಶ ಶಿವಕುಮಾರ್ ನಟಿಸಿದ್ದಾರೆ. ಇವರೊಂದಿಗೆ ಶರತ್ ಲೋಹಿತಾಶ್ವ, ರಂಗಾಯಣ ರಘು, ಯೋಗರಾಜ್ ಭಟ್, ಅದಿತಿ ಪ್ರಭುದೇವ, ದಿವ್ಯ ಉರುಡುಗ, ಪ್ರಭು ಮುಂದ್ಕುರ್, ಶ್ರೀ ಮಹಾದೇವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಪದವಿ ಪೂರ್ವ' ಸಿನಿಮಾವನ್ನು ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿರುವ ಹರಿಪ್ರಸಾದ್ ಜಯಣ್ಣ ಚೊಚ್ಚಲ ಬಾರಿ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಯೋಗರಾಜ್ ಭಟ್ ಸಾಹಿತ್ಯದಿಂದ ಸಂಗೀತ ಪ್ರಿಯರ ಮನಗೆದ್ದಿವೆ. ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಈ ಸಿನಿಮಾಗಿದೆ.