Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಗ್ಗೇಶ್ ಬಾಡಿಗಾರ್ಡ್ ಸಿನಿಮಾ ವಿಮರ್ಶೆ
ಕನ್ನಡದ 'ಬಾಡಿಗಾರ್ಡ್' ಸಿನಿಮಾ, 2010 ರಲ್ಲಿ ಬಿಡುಗಡೆಯಾದ ಇದೇ ಹೆಸರಿನ ಮಲೆಯಾಳಂ ಚಿತ್ರದ ರೀಮೇಕ್. ಹಿಂದಿಯ ನಂತರ ಇದೀಗ ಕನ್ನಡಕ್ಕೆ ಬಂದಿದೆ ಬಾಡಿಗಾರ್ಡ್. ಸಾಕಷ್ಟು ಜನರಿಗೆ ಈಗಾಗಲೇ ಕಥೆ ಗೊತ್ತಿರುವುದರಿಂದ 'ಶಾರ್ಟ್'ಆಗಿ ಹೇಳಿದರೆ ಸಾಕು, ಅದನ್ನು ಕನ್ನಡ ನೇಟಿವಿಟಿಗೆ ಹೇಗೆ ಮಾಡಿದ್ದಾರೆ ಎಂಬುದಷ್ಟೇ ಬೇಕು.
ಕಾನೂನು ಕೈಗೆ ತೆಗೆದುಕೊಳ್ಳುವುದೇ ಅನ್ಯಾಯದ ವಿರುದ್ಧ ಇರುವ ಏಕೈಕ ಅಸ್ತ್ರ ಎಂದು ನಂಬಿರುವ ನಾಯಕ ಜಯಕೃಷ್ಣ. ಅಗ್ರಹಾರದಲ್ಲಿ ನಡೆಯುವ ಡಾನ್ ಮೇಲಿನ ದಾಳಿಯಲ್ಲಿ ಡಾನ್ ಮಗಳು ಹಾಗೂ ಚಿತ್ರದ ನಾಯಕಿ ಅಮ್ಮು ಮತ್ತು ಅವಳ ತಾಯಿಯನ್ನು ರಕ್ಷಿಸುವ ಜಯಕೃಷ್ಣ, ಅವರ ಪಾಲಿಗೆ ದೇವರಾಗುತ್ತಾನೆ. ನಂತರ ಅಮ್ಮುವಿನ ಜೊತೆಯಲ್ಲೇ ಅರ್ಧಕ್ಕೇ ಬಿಟ್ಟಿದ್ದ ಪದವಿ ಪರೀಕ್ಷೆ ಮುಗಿಸುತ್ತಾನೆ.
ಎಂಟು ವರ್ಷದ ನಂತರ ತನ್ನ ಮಗನೊಡನೆ ಮತ್ತೆ ಭೇಟಿಯಾಗುವ ಡಾನ್ ಮಾತಿನ ಪ್ರಕಾರ, ನಾಯಕಿ ಅಮ್ಮು ಹಾಗೂ ನಾಯಕ ಜಯಕೃಷ್ಣನ ನಡುವೆ ಏನಾಗುತ್ತದೆ? ಸಿದ್ದಾರ್ಥನ ಡೈರಿಯಿಂದ ಜಯಕೃಷ್ಣನಿಗೆ ಯಾವ ಪ್ರಯೋಜನವಾಗುತ್ತದೆ. ನಾಯಕ ಜಯಕೃಷ್ಣ ಹೇಗೆ ಸಿನಿಮಾ ಶೀರ್ಷಿಕೆ ಬಾಡಿಗಾರ್ಡ್ ಗೆ ಸರಿ ಹೊಂದುತ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಿ ಆನಂದಿಸಿ.
ಪಾತ್ರಧಾರಿಗಳ ನಟನೆ ವಿಷಯಕ್ಕೆ ಬಂದರೆ, ಜಗ್ಗೇಶ್ ಬಾಡಿಗಾರ್ಡ್ ಎಂಬ ಪದಕ್ಕೆ ಸೂಟ್ ಆಗುವುದಿಲ್ಲ. ಹಿಂದಿಯಲ್ಲಿ ಸಲ್ಮಾನ್ ಖಾನ್ ನನ್ನು ಬಾಡಿಗಾರ್ಡ್ ಪಾತ್ರದಲ್ಲಿ ನೋಡಿರುವ ಜನರಿಗೆ ಜಗ್ಗೇಶ್ 'ಬಾಡಿ' ಕಾಮಿಡಿ ಎನಿಸುತ್ತದೆ. ಅಭಿನಯ ಓಕೆ. ಸೆಂಟಿಮೆಂಟ್ ದೃಶ್ಯಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ಜಗ್ಗೇಶ್ ಗಿಂತ ಎತ್ತರವಿರುವ ನಟಿ ಡೈಸಿ ಷಾ, ದಪ್ಪಕ್ಕೂ ಇದ್ದು ಜಗ್ಗೇಶ್ ಜೊತೆ ಸ್ಪರ್ಧೆಗೆ ಬಿದ್ದಂತಿದೆ. ಅಭಿನಯ ಸಾಮಾನ್ಯ. ಸ್ಪೂರ್ತಿಗೆ ಹೆಚ್ಚಿನ ಅವಕಾಶ ಇಲ್ಲ. ಗುರುದತ್ ಸೂಪರ್. ಸಾಧುಕೋಕಿಲಾ ಹಾಗೂ ಜಗ್ಗೇಶ್ ಹಾಸ್ಯಸನ್ನಿವೇಶ ಪ್ರೇಕ್ಷಕರಿಗೆ ಕಚಗುಳಿ. ಉಳಿದ ಪೋಷಕ ಕಲಾವಿದರೂ ಕೂಡ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ.
ಜಗ್ಗೇಶ್ ದಂಪತಿಗಳ ನಿರ್ಮಾಣದಲ್ಲಿ ಮೂಡಿಬಂದಿರುವ ಚಿತ್ರ ಬಾಡಿಗಾರ್ಡ್, ಕನ್ನಡ ಕಲಾವಿದನೊಬ್ಬನ ಕನಸು ನನಸಾದ ಸಮಯ. ಕನ್ನಡಿಗರು, ಅದರಲ್ಲೂ ಜಗ್ಗೇಶ್ ಅಬಿಮಾನಿಗಳಿಗೆ ಈ ಚಿತ್ರ ಖಂಡಿತ ಇಷ್ಟವಾಗುವಂತಿದೆ. ಟಿ. ಎ. ಆನಂದ್ ನಿರ್ದೇಶನ, ರಾಜೇಂದ್ರ ಕಾರಂತ್ ಸಂಭಾಷಣೆ ಚೆನ್ನಾಗಿದೆ. ಸಂಕಲನ ಹಾಗೂ ಸಂಗೀತ ಕೂಡ ಗಮನಸೆಳೆಯುತ್ತದೆ.
ಚಿತ್ರ: ಬಾಡಿಗಾರ್ಡ್
ಬ್ಯಾನರ್: ಗುರುರಾಜ್ ಫಿಲಂಸ್
ತಾರಾಗಣ: ಜಗ್ಗೇಶ್, ಡೈಸಿ ಷಾ, ಸ್ಫೂರ್ತಿ, ಗುರುದತ್, ಸಾಧುಕೋಕಿಲ, ಬ್ಯಾಂಕ್ ಜನಾರ್ಧನ್, ಜೀವನ್ ಮುಂತಾದವರು
ಸಂಗೀತ: ವಿನಯ್ ಚಂದ್ರ
ಛಾಯಾಗ್ರಹಣ: ಅಶೋಕ್ ವಿ ರಾಮನ್
ನಿರ್ಮಾಪಕರ: ಶ್ರೀಮತಿ ಪರಿಮಳಾ ಜಗ್ಗೇಶ್, ಜಗ್ಗೇಶ್
ನಿರ್ದೇಶನ: ಟಿ. ಎ. ಆನಂದ್