Don't Miss!
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗನ್ನಲ್ಲೇ ಗುನ್ನ.. ಹರೀಶ್ ರಾಜ್ ಹಂಗಾಮಾ...
ಅವಳ ಸಾವಿನ ನಂತರ ಈತ ಕುಡುಕನಾಗಿ, ಮೂಲೆ ಸೇರಿರುತ್ತಾನೆ. ಇಷ್ಟಾದರೆ ಗನ್ ಇಂದ ಬುಲೆಟ್ ಹೊರಬರುವುದಿಲ್ಲ. ಅಲ್ಲಿಂದ ಕತೆಯ ತಿರುವು ಮಂತ್ರ ಶುರುವಾಗುತ್ತದೆ. ಇನ್ನೊಬ್ಬಾಕೆಯ ಎಂಟ್ರಿ. ಅವಳು ಪತ್ರಕರ್ತೆ. ಅವಳಿಗೆ ನಾಯಕನ ಬಗ್ಗೆ ಪ್ರೀತಿ, ಪ್ರೇಮ ಮೊದಲಾದ ಮಾಮೂಲಿ ಬದನೇಕಾಯಿ. ಕೊನೆಗೆ ಅವಳ ಭುಜವೂ ಗನ್ನಿನ ಬುಲೆಟ್ಗೆ ಬಲಿಯಾಗುತ್ತದೆ. ಅಲ್ಲಿಂದ ನಾಯಕ ತಿರುಗಿಬೀಳುತ್ತಾನೆ. ಆ ಗನ್ ಹಿಡಿದವನ ಬೆನ್ನು ಮುರಿಯುತ್ತಾನೆ. ಇಲ್ಲಿಗೆ ನಿಮಗೆ ಇಡೀ ಕತೆಯ ವಿಶೇಷತೆ ಗೊತ್ತಾಗಿದೆ ಎನ್ನುತ್ತಾ..
ಹರೀಶ್ರಾಜ್ ಒದ್ದಾಟ ಪ್ರತೀ ಫ್ರೇಮ್ನಲ್ಲೂ ಗೊತ್ತಾಗುತ್ತದೆ. ಅವರು ಕತೆ, ಚಿತ್ರಕತೆ ಇತ್ಯಾದಿಗಳನ್ನೂ ಮಾಡಿ, ನಟನೆಯನ್ನೂ ಮಾಡುವ ಬದಲು ಒಂದಷ್ಟು ಜವಾಬ್ದಾರಿಗಳನ್ನು ಬೇರೆಯವರಿಗೆ ವಹಿಸಿದ್ದರೆ ಕ್ವಾಲಿಟಿ ಇನ್ನೂ ಸೂಪರ್ ಆಗಿರುತ್ತಿತ್ತು.
ನಿಖಿತಾ ಎಂದಿನಂತೇ ಮಾಮೂಲಿ ನಟನೆ. ಮಲ್ಲಿಕಾ ಕಪೂರ್ ಪತ್ರಕರ್ತೆ ಎಂದು ಹಣೆಗೆ ಬೋರ್ಡ್ ಅಂಟಿಸಿಕೊಂಡಿದ್ದರೆ ಅದು ರಿಜಿಸ್ಟರ್ ಆಗುತ್ತಿತ್ತು. ರಂಗಾಯಣ ರಘು, ಪಿಎನ್ ಸತ್ಯ, ಮೋಹನ್ ಜುನೇಜಾ ಮೊದಲಾದವರನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ ಹರೀಶ್ರಾಜ್.
ಎಚ್ಎಮ್ ರಾಮಚಂದ್ರ/ವಿಷ್ಣುವರ್ಧನ್ ಇಬ್ಬರೂ ಸೇರಿ ಕ್ಯಾಮೆರಾ ಕೆಲಸ ಮಾಡಿರುವುದರಿಂದ ಅದರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಸಂಗೀತದಲ್ಲಿ ಐಟಂ ಸಾಂಗ್ ಓಕೆ. ಉಳಿದದ್ದು ಅಷ್ಟಕ್ಕಷ್ಟೇ. ಒಟ್ಟಾರೆ ಗನ್ ಒಂದು ಪರಿಪೂರ್ಣ ಕಮರ್ಷಿಯಲ್ ಚಿತ್ರ. ಹರೀಶ್ ರಾಜ್ ಕೊಂಚ ಉದ್ದವಾಗಿ, ಅಗಲವಾಗಿ, ದಷ್ಟವಾಗಿ, ಪುಷ್ಟವಾಗಿ, ಇಷ್ಟವಾಗುವ ಹಾಗೆ ಇದ್ದಿದ್ದರೆ ಗನ್ ಪವರ್ರು ಎಕೆ 47ಗಿಂದ ಒಂದಂಕಿ ಜಾಸ್ತಿ ಇರುತ್ತಿತ್ತು!