Don't Miss!
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- News Zero Shadow Day: ನಾಳೆ ಬುಧವಾರ ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ; ಸಮಯ, ವಿವರ
- Sports David Warner: ಊಟನೂ ಬೇಡ, ಹುಡುಗಿನೂ ಬೇಡ; ಆಧಾರ್ ಕಾರ್ಡ್ ಬೇಕೆಂದ ಡೇವಿಡ್ ವಾರ್ನರ್!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭದ್ರತೆ ನೀಡಿ: ಮುರಳೀಧರನ್ ಜೀವನ ಕುರಿತ ಸಿನಿಮಾ ನಿರ್ದೇಶಕನ ಮನವಿ
ಕ್ರಿಕೆಟಿಗ ಮುರಳೀಧರನ್ ಜೀವನ ಕುರಿತ ಸಿನಿಮಾ ಘೋಷಣೆಯಾದ ಬೆನ್ನಲ್ಲೇ ಸಾಕಷ್ಟು ವಿವಾದಗಳು ಸಿನಿಮಾವನ್ನು ಸುತ್ತಿಕೊಂಡಿವೆ.
ಮುರಳೀಧರನ್ ಜೀವನ ಕುರಿತ ಸಿನಿಮಾಕ್ಕೆ 800 ಎಂದು ಹೆಸರಿಟ್ಟು ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ. ಸಿನಿಮಾಕ್ಕೆ ವಿಜಯ್ ಸೇತುಪತಿ ನಾಯಕ ಎಂದು ಘೋಷಣೆ ಸಹ ಮಾಡಲಾಗಿತ್ತು. ಆದರೆ ಹಲವರು ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಕೊನೆಗೆ ಮುರಳೀಧರನ್ ಮನವಿ ಮೇರೆಗೆ ವಿಜಯ್ ಸೇತುಪತಿ 800 ಸಿನಿಮಾದಿಂದ ಹಿಂದೆ ಸರಿದರು. ನಂತರ ಅವರ ಮಗಳಿಗೆ ಅತ್ಯಾಚಾರ ಬೆದರಿಕೆಗಳನ್ನು ಹಾಕಲಾಯಿತು. ಈಗ 800 ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದ ಸೀನು ರಾಮಸ್ವಾಮಿ ಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ.
ಸೀನು ರಾಮಸ್ವಾಮಿಗೆ ಬೆದರಿಕೆ ಕರೆಗಳು
800 ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದ ಸೀನು ರಾಮಸ್ವಾಮಿಗೆ ಹಲವಾರು ಬೆದರಿಕೆ ಕರೆಗಳು ಬರುತ್ತಿವೆಂತೆ. ಹಾಗಾಗಿ ಅವರು ತಮಿಳುನಾಡು ಮುಖ್ಯಮಂತ್ರಿಗೆ ತಮಗೆ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
ನನ್ನ ಜೀವ ಅಪಾಯದಲ್ಲಿದೆ: ಸೀನು ರಾಮಸ್ವಾಮಿ
'ನನ್ನ ಜೀವ ಅಪಾಯದಲ್ಲಿದೆ, ನನಗೆ ಸತತ ಬೆದರಿಕೆ ಕರೆಗಳು ಬರುತ್ತೀವೆ, ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ದಯವಿಟ್ಟು ನನಗೆ ಭದ್ರತೆ ನೀಡಿ' ಎಂದು ಸೀನು ರಾಮಸ್ವಾಮಿ ತಮಿಳುನಾಡು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಚೆನ್ನೈ ಪೊಲೀಸರಿಗೆ ದೂರು ನೀಡಲಿರುವ ರಾಮಸ್ವಾಮಿ
ಬೆದರಿಕೆ ಕರೆಗಳ ಕುರಿತಂತೆ ಚೆನ್ನೈ ಪೋಲೀಸರಿಗೆ ದೂರು ಸಹ ನೀಡಲಿದ್ದಾರಂತೆ ರಾಮಸ್ವಾಮಿ. 800 ಸಿನಿಮಾದಿಂದ ಹಿಂದೆ ಸರಿವಂತೆ ವಿಜಯ್ ಸೇತುಪತಿಗೆ ಸಹ ಬೆದರಿಕೆಗಳು ಬಂದಿದ್ದವು. ಸಿನಿಮಾದಿಂದ ಹಿಂದೆ ಸರಿದ ಬಳಿಕವೂ ಸಹ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆಗಳು ಬಂದಿದ್ದವು. ಆದರೆ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಶ್ರೀಲಂಕಾ ವ್ಯಕ್ತಿಯನ್ನು ಬಂಧಿಸಲಾಗಿದೆ.
Recommended Video
ಅಡಕತ್ತರಿಯಲ್ಲಿ 800 ಸಿನಿಮಾ
800 ಸಿನಿಮಾವು ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಜೀವನ ಕುರಿತದ್ದಾಗಿತ್ತು. ಆದರೆ ಮುರಳೀಧರನ್, ಲಂಕಾದ ತಮಿಳರ ಪರ ನಿಲವು ಹೊಂದಿರಲಿಲ್ಲ ಎಂಬ ಕಾರಣಕ್ಕೆ ಸಿನಿಮಾವನ್ನು ಕೆಲವು ತಮಿಳರು ವಿರೋಧಿಸಿದರು. 800 ಸಿನಿಮಾವು ಈಗ ಅಡಕತ್ತರಿಯಲ್ಲಿದೆ.