ಅಯ್ಯಯ್ಯೋ... ನಟ, ನಿರ್ದೇಶಕ ನಾಗಶೇಖರ್ ಗೆ ಇದೇನಾಯ್ತು.?
Recommended Video
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವವರು ನಾಗಶೇಖರ್. 'ಮೈನಾ', 'ಸಂಜು ವೆಡ್ಸ್ ಗೀತಾ', 'ಅರಮನೆ' ಮುಂತಾದ ಚಿತ್ರಗಳಿಗೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ನಟಿಸಿದ ಚೊಚ್ಚಲ ಚಿತ್ರ 'ಅಮರ್'ಗೂ ಇದೇ ನಾಗಶೇಖರ್ ಡೈರೆಕ್ಟರ್. ಅಸಲಿಗೆ, 'ಅಮರ್' ಚಿತ್ರದ ಬಳಿಕ ನಾಗಶೇಖರ್ ಗಾಂಧಿನಗರ ಅಷ್ಟಾಗಿ ಕಾಣಿಸಿಕೊಂಡಿಲ್ಲ.
ನಾಗಶೇಖರ್ ಮುಂದಿನ ಚಿತ್ರದ ಬಗ್ಗೆಯೂ ಸುದ್ದಿ ಕೇಳಿಬಂದಿಲ್ಲ. ಹೀಗಿರುವಾಗಲೇ, ನಾಗಶೇಖರ್ ರವರ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾವುದು ಆ ಫೋಟೋ ಅಂತೀರಾ.? ನೀವೇ ನೋಡಿ...

ಇದೇ ನೋಡಿ ಆ ಫೋಟೋ
ಸೀಳಾಗಿರುವ ತುಟಿ, ಒಡೆದ ಹಲ್ಲು, ಕೊಂಚ ಊದಿರುವ ಮುಖ.. ನಾಗಶೇಖರ್ ರವರ ಈ ಫೋಟೋ ನೋಡಿದ ಕೂಡಲೆ ತಲೆಯಲ್ಲಿ ಹತ್ತಾರು ಅನುಮಾನಗಳು ಮೂಡುವುದು ಸಹಜ. ಆದ್ರೆ, ವಾಸ್ತವವೇ ಬೇರೆ ಇದೆ.

ಮೇಕಪ್ ಅಷ್ಟೇ.!
ಮುಖಕ್ಕೆ ಪೆಟ್ಟಾಗಿರುವ ರೀತಿ ನಾಗಶೇಖರ್ ಕಾಣಿಸಿಕೊಂಡಿರುವುದು ಸಿನಿಮಾಗಾಗಿ.! ಹೌದು, ನಾಗಶೇಖರ್ ಗೆ ರಿಯಲ್ ಲೈಫ್ ನಲ್ಲಿ ಮುಖಕ್ಕೆ ಏಟು ಬಿದ್ದಿಲ್ಲ. ಹೊಸ ಚಿತ್ರವೊಂದಕ್ಕಾಗಿ ಆ ರೀತಿ ಮೇಕಪ್ ಮಾಡಿಕೊಂಡಿದ್ದಾರೆ ಅಷ್ಟೆ.!

ಕಾಲಿವುಡ್ ನಲ್ಲಿ ನಾಗಶೇಖರ್.!
ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಾಗಶೇಖರ್ ಇದೀಗ ಕಾಲಿವುಡ್ ನತ್ತ ಹೆಜ್ಜೆ ಇಟ್ಟಿದ್ದಾರೆ. 'ನವೆಂಬರ್ ಮಳೈಯಿಲ್ ನಾನುಂ ಅವಳುಂ' ಎಂಬ ತಮಿಳು ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದಾರೆ. ಇದೇ ಚಿತ್ರದ ಪಾತ್ರವೊಂದಕ್ಕಾಗಿ ಬಣ್ಣ ಹಚ್ಚಿರುವ ನಾಗಶೇಖರ್ ಸೀಳು ತುಟಿ ಹೊಂದಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ ಕಥೆ.?
ಅಂದ್ಹಾಗೆ, ಕನ್ನಡದಲ್ಲಿ 'ನವೆಂಬರ್ ನಲ್ಲಿ ನಾನು ಅವಳು' ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದರು. ಇದೇ ಚಿತ್ರದಲ್ಲಿ ರವಿಚಂದ್ರನ್ ಪುತ್ರ ವಿಕ್ರಮ್ ನಟಿಸುತ್ತಿದ್ದರು. ಈ ಚಿತ್ರ ನಿಂತು ಹೋಗಿದೆ ಎಂಬ ಮಾತು ಗಾಂಧಿನಗರದಲ್ಲಿದೆ. ಆದ್ರೀಗ, ಇದೇ ಚಿತ್ರದ ಕಥೆಯನ್ನು ಇಟ್ಟುಕೊಂಡು ತಮಿಳಿನಲ್ಲಿ ನಾಗಶೇಖರ್ ನಿರ್ದೇಶನ ಮಾಡುತ್ತಿರುವ ಹಾಗಿದೆ. ತಮಿಳಿನ 'ನವೆಂಬರ್ ಮಳೈಯಿಲ್ ನಾನುಂ ಅವಳುಂ' ಚಿತ್ರದ ನಾಯಕ-ನಾಯಕಿ ಯಾರು ಎಂಬುದು ತಿಳಿದು ಬಂದಿಲ್ಲ.


Click it and Unblock the Notifications











