Don't Miss!
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- News ಗೃಹ ಸಚಿವ ಡಾ. ಜಿ ಪರಮೇಶ್ವರ್ ರಾಜೀನಾಮೆಗೆ ಆಗ್ರಹ: ಕಾರಣವೇನು?
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಲ್ಮಾನ್ ಖಾನ್ ಗೆ ಶ್ರೀಲಂಕಾದ ನಟ ಎಚ್ಚರಿಕೆ ನೀಡಿದ್ದು ಯಾಕೆ?
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದಾ ಸುದ್ದಿಯಲ್ಲಿರುವುದು ಹೊಸದೇನಲ್ಲ. ನಟಿಯರ ಕಾಲೆಳೆಯುವುದರಲ್ಲಿ ನಿಸ್ಸೀಮರಾಗಿರುವ ಸಲ್ಲು, ಈಗ ಶ್ರೀಲಂಕಾದ ನಟರೊಬ್ಬರ ಕೆಂಗಣ್ಣಿಗೆ ಗುರಿಯಾಗಿರುವುದು ವಿಶೇಷ.
ಹಾಗಂತ ಸಲ್ಲು ಲಂಕಾದ ನಟಿಯರ ತಂಟೆಗೆ ಏನಾದ್ರೂ ಹೋದ್ರಾ ಎಂದು ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ. ವಿಷಯ ಏನಂದರೆ ಸದ್ಯ ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ.
ಶ್ರೀಲಂಕಾದ ಹಾಲಿ ಅಧ್ಯಕ್ಷ ಮಹೇಂದ್ರ ರಾಜಪಕ್ಷೆ ಮತ್ತೆ ಅದೇ ಸ್ಥಾನದ ಆಕಾಂಕ್ಷಿ. ರಾಜಪಕ್ಷೆ ಪರವಾಗಿ ಸಲ್ಮಾನ್ ಖಾನ್ ಶ್ರೀಲಂಕಾದಲ್ಲಿ ಪ್ರಚಾರಕ್ಕೆ ಒಪ್ಪಿಕೊಂಡಿರುವುದು ಸಿಂಹಳೀಯ ನಟನ ಕೋಪಕ್ಕೆ ಕಾರಣವಾಗಿರುವುದು.
ನೀವು ಒಬ್ಬ ಒಳ್ಳೆಯ ನಟ, ನಾನೂ ಕೂಡಾ ನಿಮ್ಮ ಅಭಿಮಾನಿ. ಭ್ರಷ್ಟ ರಾಜಕಾರಣಿಗಳಿಗಾಗಿ ನಿಮ್ಮನ್ನು ನೀವು ಮಾರಿಕೊಳ್ಳಬೇಡಿ ಎಂದು ಲಂಕಾದ ಖ್ಯಾತ ನಟ ಕಮ್ ರಾಜಪಕ್ಷೆ ವಿರೋಧಿ ಬಣದ ರಾಮನಾಯಕೆ, ಸಲ್ಮಾನ್ ಖಾನಿಗೆ ಎಚ್ಚರಿಕೆ ಮಿಶ್ರಿತ ಮನವಿ ಮಾಡಿದ್ದಾರೆ.
ನೀವು ಶ್ರೀಲಂಕಾದಲ್ಲೂ ಜನಪ್ರಿಯ ನಟರು, ನಿಮ್ಮ ಅಭಿಮಾನಿ ಬಳಗದಲ್ಲಿ ನಾನೂ ಒಬ್ಬ. ನೀವು ಪ್ರಚಾರ ಮಾಡಲು ಬಂದ ಪಕ್ಷ ಮತ್ತು ಅದರ ಮುಖಂಡರು ಭ್ರಷ್ಟರು, ದಯವಿಟ್ಟು ನೀವು ಭಾರತಕ್ಕೆ ವಾಪಸ್ ಹೋಗಿ ಎಂದು ರಾಮನಾಯಕೆ, ಸಲ್ಮಾನ್ ಖಾನ್ ಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಸಲ್ಮಾನ್ ವಿರುದ್ದ ತಮಿಳು ಮುಖಂಡ ವೈಕೋ ಕೆಂಡಾಮಂಡಲ. ಮುಂದೆ ಓದಿ..
ರಾಜಪಕ್ಷೆ ಅವರ ಪುತ್ರ ನಮಲ್ ರಾಜಪಕ್ಷ
ಅಧ್ಯಕ್ಷ ರಾಜಪಕ್ಷೆ ಅವರ ಪುತ್ರ ನಮಲ್ ರಾಜಪಕ್ಷ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸಲ್ಮಾನ್ ಖಾನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇತ್ತೀಚೆಗೆ ಶ್ರೀಲಂಕಾಕ್ಕೆ ಆಗಮಿಸಿದ್ದರು.
ಜಾಕ್ಲಿನ್ ಜೊತೆ ಸಲ್ಲು
ಕಾರ್ಯಕ್ರಮದಲ್ಲಿ ಸಲ್ಮಾನ್, ಶ್ರೀಲಂಕಾ ಮೂಲದ ನಟಿ ಜಾಕ್ಲಿನ್ ಫೆರ್ನಾಂಡಿಸ್ ಜೊತೆ ಆಗಮಿಸಿದ್ದರು. ಜಾಕ್ಲಿನ್ ಮತ್ತು ಅಧ್ಯಕ್ಷ ರಾಜಪಕ್ಷೆ ಪುತ್ರ ನಮಲ್ ರಾಜಪಕ್ಷೆ ಒಳ್ಳೆಯ ಸ್ನೇಹಿತರು. ಜಾಕ್ಲಿನ್ ಮೂಲಕ ಸಲ್ಮಾನ್ ಖಾನ್ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆತರುವ ಪ್ರಯತ್ನ ರಾಜಪಕ್ಷೆ ಅವರದ್ದಾಗಿದೆ, ಇದಕ್ಕೆ ಸಲ್ಮಾನ್ ಒಪ್ಪಿಗೆ ಸೂಚಿಸಿರುವುದೇ ವಿವಾದಕ್ಕೆ ಮೂಲ ಕಾರಣ.
ಆಡಳಿತ ಪಕ್ಷ ಆಯೋಜಿಸಿದ ಕಾರ್ಯಕ್ರಮ
ಶ್ರೀಲಂಕಾದ ಆಡಳಿತ ಪಕ್ಷದ ಯುವ ಘಟಕ ಕಣ್ಣು ಸಂಬಂಧಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಘಟಕದ ಮುಖ್ಯಸ್ಥ ನಮಲ್ ರಾಜಪಕ್ಷೆ. ಈ ಕಾರ್ಯಕ್ರಮವನ್ನು ಲಂಕಾದ ಯುವ ಘಟಕದ ಜೊತೆ ಸಲ್ಮಾನ್ ಖಾನ್ ಅವರ Being Human Foundation ಜಂಟಿಯಾಗಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್, ಲಂಕಾದ ಅಧ್ಯಕ್ಷ ರಾಜಪಕ್ಷೆ ಅವರನ್ನು ಹಾಡಿ ಹೊಗಳಿದ್ದರು.
ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ
ಇದೇ ಜನವರಿ ಎಂಟರಂದು ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ನಿಗದಿತ ಅವಧಿಗಿಂತ ಎರಡು ವರ್ಷ ಮೊದಲು ಅಧ್ಯಕ್ಷ ರಾಜಪಕ್ಷೆ ಜನಾದೇಶ ಪಡೆಯಲು ಮುಂದಾಗಿರುವುದು ವಿಶೇಷ. ಸಲ್ಮಾನ್ ಈಗ ರಾಜಪಕ್ಷೆ ಪರವಾಗಿ ಮತಯಾಚನೆಗೆ ಒಪ್ಪಿಕೊಂಡಿರುವುದು ವಿಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ. ಒಂದು ವೇಳೆ ಸಲ್ಮಾನ್ ಚುನಾವಣಾ ಪ್ರಚಾರಕ್ಕೆ ತೆರಳಿದರೆ ಅಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೊದಲ ಬಾಲಿವುಡ್ ನಟರಾಗುತ್ತಾರೆ.
ವೈಕೋ ಕೆಂಡಾಮಂಡಲ
ಸಲ್ಮಾನ್ ಶ್ರೀಲಂಕಾದಲ್ಲಿ ಚುನಾವಣಾ ಪ್ರಚಾರಕ್ಕೆ ಒಪ್ಪಿಕೊಂಡಿರುವುದಕ್ಕೆ ಎಂಡಿಎಂಕೆ ಮುಖ್ಯಸ್ಥ ವೈಕೋ ಸಲ್ಮಾನ್ ವಿರುದ್ದ ಹರಿಹಾಯ್ದಿದ್ದಾರೆ. ಸಲ್ಮಾನ್ ಒಬ್ಬ ದ್ರೋಹಿ ಎಂದು ಜರಿದಿದ್ದಾರೆ. ಡಿಎಂಕೆ ನಾಯಕ ಇಳಂಗೋವನ್, ಸಲ್ಮಾನ್ ಅವರ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ.