Don't Miss!
- News
Rayanna- Bose Statue: ಸರ್ಕಾರಿ ಕಾಲೇಜುಗಳಲ್ಲಿ ರಾಯಣ್ಣ-ಬೋಸ್ ಪ್ರತಿಮೆ ಸ್ಥಾಪನೆಗೆ ಆದೇಶ: ಬೊಮ್ಮಾಯಿ
- Finance
Kisan Credit Card: ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿದರ, ಅರ್ಜಿ ಪ್ರಕ್ರಿಯೆ ಮೊದಲಾದ ಮಾಹಿತಿ
- Sports
ICC Men's Test Cricketer of 2022: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬೆನ್ ಸ್ಟೋಕ್ಸ್
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಜಯ್ ಸೇತುಪತಿ ಸಿನಿಮಾ ಶೂಟಿಂಗ್ ವೇಳೆ ಸ್ಟಂಟ್ಮನ್ ಸಾವು: ವೆಟ್ರಿಮಾರನ್ ವಿರುದ್ಧ ಪ್ರಕರಣ
ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವೆಟ್ರಿಮಾನ್ ಚಿತ್ರೀಕರಿಸುತ್ತಿದ್ದ ಸಿನಿಮಾ ಸೆಟ್ನಲ್ಲಿ ಅವಘಡ ಸಂಭವಿಸಿದ್ದು ಸ್ಟಂಟ್ಮ್ಯಾನ್ ಒಬ್ಬರು ಜೀವ ಕಳೆದುಕೊಂಡಿದ್ದಾರೆ.
'ವಿಡುದಲೈ' ಹೆಸರಿನ ಸಿನಿಮಾವನ್ನು ವೆಟ್ರಿಮಾರನ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಚೆನ್ನೈನ ವಂಧಲೂರ್ ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು.
68ನೇ
ರಾಷ್ಟ್ರಪ್ರಶಸ್ತಿ
ಪ್ರದಾನ
ಮಾಡಿದ
ರಾಷ್ಟ್ರಪತಿ
ದ್ರೌಪದಿ
ಮುರ್ಮು!
ಸಿನಿಮಾಕ್ಕಾಗಿ ಆಕ್ಷನ್ ದೃಶ್ಯವೊಂದರ ಚಿತ್ರೀಕರಣ ಮಾಡುವಾಗ ಸ್ಟಂಟ್ಮ್ಯಾನ್ ಸುರೇಶ್ ಎಂಬಾತ ಸ್ಟಂಟ್ ಮಾಡುವಾಗ ಬಿದ್ದು ಅಸುನೀಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.
ರೈಲು ಅಪಘಾತದ ದೃಶ್ಯವೊಂದರ ಚಿತ್ರೀಕರಣವನ್ನು ವೆಟ್ರಿಮಾರನ್ ಹಾಗೂ ತಂಡ ಚಿತ್ರೀಕರಣ ಮಾಡುತ್ತಿತ್ತು. ರೈಲೊಂದು ಸೇತುವೆಯ ಮೇಲೆ ಅಪಘಾತವಾದಾಗ ಅದರಲ್ಲಿನ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಯತ್ನಿಸುವ, ನಾಯಕ ನಟ ಕೆಲವರನ್ನು ಕಾಪಾಡುವ ದೃಶ್ಯದ ಚಿತ್ರೀಕರಣ ಮಾಡಲಾಗುತ್ತಿತ್ತು.
ಇದೀಗ ನಿಧನ ಹೊಂದಿರುವ ಸುರೇಶ್ ಸೇರಿದಂತೆ ಇನ್ನು ಕೆಲವರಿಗೆ ರೋಪ್ ಕಟ್ಟಿ ಆ ಹಗ್ಗದ ಮತ್ತೊಂದು ತುದಿಯನ್ನು ಕ್ರೈನ್ಗಳಿಗೆ ಕಟ್ಟಿ ಅಪಘಾತವಾದ ರೈಲಿನ ಮೇಲೆ ಓಡಿಸಲಾಗಿತ್ತು, ಹಾಗೆ ಓಡಿ ರೈಲಿನಿಂದ ಕೆಳಗೆ ಹಾರುವ ಸನ್ನಿವೇಶದ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿತ್ತು. ರೋಪ್ ಕಟ್ಟಿಕೊಂಡಿದ್ದ ಸುರೇಶ್ ರೈಲಿನ ಮೇಲೆ ಓಡಿ ಅಲ್ಲಿಂದ ಕೆಳಗೆ ಹಾರಿದಾಗ ಕಟ್ಟಿಕೊಂಡಿದ್ದ ಹಗ್ಗ ತುಂಡಾದ ಪರಿಣಾಮ ಸುಮಾರು 20 ಅಡಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಅವರನ್ನು ಪರೀಕ್ಷಿಸಿದ ವೈದ್ಯರು ಮೃತ ಎಂದು ಘೋಷಿಸಿದ್ದಾರೆ. ಈ ಘಟನೆ ಬಗ್ಗೆ ನಿರ್ದೇಶಕ ವೆಟ್ರಿಮಾರನ್ ಆಗಲಿ, ನಟರಾದ ವಿಜಯ್ ಸೇತುಪತಿ ಹಾಗೂ ಸೂರಿ ಆಗಲಿ ಯಾವುದೇ ಅಧಿಕೃತ ಹೇಳಿಕೆ ಈವರೆಗೆ ಬಿಡುಗಡೆ ಮಾಡಿಲ್ಲ. ಆದರೆ ಸ್ಥಳೀಯ ಪೊಲೀಸರು ನಿರ್ದೇಶಕ ವೆಟ್ರಿಮಾರ್ ಹಾಗೂ ಸ್ಟಂಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೆಟ್ರಿಮಾರನ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಸೂರಿ, ವಿಜಯ್ ಸೇತುಪತಿ, ಪ್ರಕಾಶ್ ರೈ, ಗೌತಮ್ ವಾಸುದೇವ್ ಮೆನನ್ ಇನ್ನಿತರ ಪ್ರಮುಖ ನಟರು ನಟಿಸುತ್ತಿದ್ದಾರೆ. ಈ ಸಿನಿಮಾವು 'ತುನೈವನ್' ಹೆಸರಿನ ಸಣ್ಣ ಕತೆಯಾಧಾರಿತ ಸಿನಿಮಾ ಆಗಿದೆ. ವೆಟ್ರಿಮಾರನ್, 'ಅಸುರನ್', 'ವಡಾ ಚೆನ್ನೈ', 'ವಿಸಾರನೈ' ಅಂಥಹಾ ಸಿನಿಮಾಗಳಿಂದ ಖ್ಯಾತಿ ಗಳಿಸಿದ ನಿರ್ದೇಶಕ, ಇವರ 'ವಿಸಾರನೈ' ಸಿನಿಮಾ ಆಸ್ಕರ್ಗೆ ಅಧಿಕೃತವಾಗಿ ಆಯ್ಕೆ ಆಗಿತ್ತು. ಆದರೆ ಪ್ರಶಸ್ತಿ ಗಳಿಸುವಲ್ಲಿ ವಿಫಲವಾಗಿತ್ತು.