ಪೈಪೋಟಿಯೇ ಇಲ್ಲದೆ ಜ್ಯೂ.ಎನ್ಟಿಆರ್ ಚಿತ್ರ ರಾಜ್ಯದಲ್ಲಿ ತೆರೆಗೆ

ಭಾರೀ ನಿರೀಕ್ಷೆಯ ಎರಡು ಕನ್ನಡ ಚಿತ್ರಗಳಾದ ಅಣ್ಣಾಬಾಂಡ್ ಮತ್ತು ಕಠಾರಿವೀರ ಸುರಸುಂದರಾಂಗಿ ಅದೇ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗಬೇಕಿತ್ತು. ಆದರೆ ಎರಡೂ ಚಿತ್ರಗಳಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿಳಂಬವಾಗಿ ಮೇ ಮೊದಲವಾರಕ್ಕೆ ಮುಂದಕ್ಕೆ ಹೋಗಿರುವುದರಿಂದ ಮತ್ತೊಮ್ಮೆ ಮಗುದೊಮ್ಮೆ ತೆಲುಗು ಚಿತ್ರಗಳು ರಾಜ್ಯದ ಸಿನಿಮಾ ಮಂದಿರಗಳಲ್ಲಿ ಅಪ್ಪಳಿಸಲಿವೆ.
ಬೋಯಪಾಟಿ ಶ್ರೀನು ನಿರ್ದೇಶನದ , ಸುಮಾರು 34 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜ್ಯೂ.ಎನ್ಟಿಆರ್, ತ್ರಿಶಾ ಕೃಷ್ಣನ್ ಅಭಿನಯದ ದಮ್ಮು ಚಿತ್ರಕ್ಕೆ ಮುಂಬೈ ಕರ್ನಾಟಕ ಭಾಗಕ್ಕೆ ರಾಘವೇಂದ್ರ ಎಂಟರ್ಪ್ರೈಸಸ್, ರಾಜ್ಯದ ಉಳಿದ ಭಾಗಕ್ಕೆ ಕುಬೇರನ್ ಪಿಚ್ಚರ್ಸ್, ಸಮರತ ಫಿಲಂಸ್, ಬಳ್ಳಾರಿ ಸಾಯಿ ಹಂಚಿಕೆದಾರರು.
ಒಂದು ಮೂಲಗಳ ಪ್ರಕಾರ ಈ ಚಿತ್ರ ರಾಜ್ಯದ 100ಕ್ಕೂ ಹೆಚ್ಚು ಮಂದಿರಗಳಲ್ಲಿ ದಮ್ಮು ಚಿತ್ರ ಬಿಡುಗಡೆಯಾಗಲಿದೆ. ಒಂದು ವೇಳೆ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾದರೆ ಕನ್ನಡೇತರ ಚಿತ್ರವೊಂದು ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎನ್ನುವ ದಾಖಲೆ ದಮ್ಮು ಚಿತ್ರ ಬರೆಯಲಿದೆ.


Click it and Unblock the Notifications











