Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನಸೇನಾನಿನ ಹಿಂಬಾಲಿಸುತ್ತಿರುವ ಅನುಮಾನಾಸ್ಪದ ವ್ಯಕ್ತಿಗಳು? ಝೆಡ್ ಪ್ಲಸ್ ಭದ್ರತೆಗೆ ಫ್ಯಾನ್ಸ್ ಆಗ್ರಹ!
ತೆಲುಗು ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಭದ್ರತೆಯ ಬಗ್ಗೆ ಅಭಿಮಾನಿಗಳು, ಜನಸೇನಾ ಕಾರ್ಯಕರ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜನಸೇನಾನಿಗೆ ಝೆಡ್ ಪ್ಲಸ್ ಭದ್ರತೆ ನೀಡಬೇಕು ಎಂದು ಕೇಂದ್ರ ಸರ್ಕಾರದ ಬಳಿ ಆಗ್ರಹಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಕೆಲ ಆಗಂತುಕರು ಪವನ್ ಕಲ್ಯಾಣ್ ಅವರನ್ನು ಹಿಂಬಾಲಿಸುತ್ತಿದ್ದಾರೆ. ಅವರ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂದು ಪವನ್ ಭದ್ರತಾ ಸಿಬ್ಬಂದಿ ಹೇಳುತ್ತಿದ್ದಾರೆ.
ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ಗೆ ಪ್ರಾಣಹಾನಿ ಇದೆ ಎಂದು ಆ ಪಕ್ಷ ಸಂಚಲನ ಆರೋಪ ಮಾಡಿದೆ. ಅನುಮಾನಾಸ್ಪದ ವಾಹನಗಳು ಕೆಲವು ದಿನಗಳಿಂದ ಪವನ್ ಕಲ್ಯಾಣ್ರನ್ನು ಅನುಸರಿಸುತ್ತಿದ್ದಾರೆ. ಹೈದರಾಬಾದ್ನಲ್ಲಿರುವ ಪವನ್ ನಿವಾಸದ ಸುತ್ತಾಮುತ್ತಾ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುವುದು ಹೆಚ್ಚಾಗಿದೆ ಎಂದು ಆರೋಪಿಸುತ್ತಿದ್ದಾರೆ. ಕೆಲವು ವ್ಯಕ್ತಿಗಳು ಪವರ್ ಸ್ಟಾರ್ ಭದ್ರತಾ ಸಿಬ್ಬಂದಿ ಜೊತೆ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ತೆಲಂಗಾಣ ಜನಸೇನಾ ಮುಖ್ಯಸ್ಥರು ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಗೆ ನೀಡಿದ್ದಾರೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕ ನಾದೆಂಡ್ಲ ಮನೋಹರ್ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ.
"ಜೀವನಾಂಶ ನೀಡಿ ಯಾರು ಎಷ್ಟು ಮದುವೆ ಆದರೂ ಆಗಬಹುದಾ?" ತಮ್ಮ ಹೇಳಿಕೆಗೆ ಕ್ಷಮೆ ಕೇಳುವಂತೆ ಪವನ್ ಕಲ್ಯಾಣ್ಗೆ ನೋಟೀಸ್
ವಿಶಾಪಟ್ಟಣದಲ್ಲಿ ನಡೆದ ಘಟನೆಯ ನಂತರ ಪವನ್ ಕಲ್ಯಾಣ್ ಮನೆ, ಪಕ್ಷದ ಕಚೇರಿ ಬಳಿ ಅನುಮಾನಾಸ್ಪದವಾಗಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ನಾದೆಂಡ್ಲ ಮನೋಹರ್ ಹೇಳುತ್ತಿದ್ದಾರೆ. ಪವನ್ ಮನೆಯಿಂದ ಹೊರ ಹೋಗುವಾಗ ಮತ್ತೆ ತಿರುಗಿ ಬರುವಾಗ ವಾಹನವನ್ನು ಅನುಸರಿಸಿ ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರು ಯಾರು ಅಭಿಮಾನಿಗಳಲ್ಲ!
ಕಾರಿನಲ್ಲಿ ಪವನ್ ಕಲ್ಯಾಣ್ ಅವರನ್ನು ಹಿಂಬಾಲಿಸುತ್ತಿರುವ ವ್ಯಕ್ತಿಗಳು ನಿಜವಾಗಿಯೂ ಪವನ್ ಕಲ್ಯಾನ್ ಚಲನವಲಗ ಗಮನಿಸುತ್ತಿದ್ದಾರೆ. ಅವರು ಪವರ್ ಸ್ಟಾರ್ ಅಭಿಮಾನಿಗಳು ಖಂಡಿತ ಅಲ್ಲ. ಅವರು ಕದಲಿಕೆ ಅನುಮಾನ ಮೂಡಿಸುತ್ತಿದೆ. ಮಂಗಳವಾರ ದ್ವಿಚಕ್ರ ವಾಹನದಲ್ಲಿ ಬುಧವಾರ ಕಾರಿನಲ್ಲಿ ಪವನ್ ಕಲ್ಯಾಣ್ ಅವರ ಕಾರನ್ನು ಅಪರಿತ ವ್ಯಕ್ತಿಗಳು ಹಿಂಬಾಲಿಸಿದ್ದಾರೆ ಎಂದು ನಾದೆಂಡ್ಲ ಮನೋಹರ್ ಆರೋಪಿಸಿದ್ದಾರೆ.
ಪವನ್ ಮನೆ ಎದುರು ಗಲಾಟೆ
ಇನ್ನು ಸೋಮವಾರ ಮಧ್ಯರಾತ್ರಿ ಮೂವರು ವ್ಯಕ್ತಿಗಳು ಪವನ್ ಕಲ್ಯಾಣ್ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪವನ್ ಮನೆ ಮುಂದೆ ಬಂದು ಅವರು ಕಾರು ನಿಲ್ಲಿಸಿದ್ದಾರೆ. ಅಲ್ಲಿಂದ ಹೊರಟು ಹೋಗುವಂತೆ ಪವನ್ ಭದ್ರತಾ ಸಿಬ್ಬಂದಿ ಹೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು, ಪವನ್ ಕಲ್ಯಾಣ್ನ ಕೂಡ ಬೈಯುತ್ತಾ ಗಲಾಟೆ ಮಾಡಿದರು. ಭದ್ರತಾ ಸಿಬ್ಬಂದಿಯನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ, ಆದರೂ ಸಿಬ್ಬಂದಿ ಸಂಯಮ ಪಾಲಿಸಿದ್ದಾರೆ ಎಂದರು. ಈ ಘಟನೆ ಬಗ್ಗೆ ತೆಲಂಗಾಣದ ಜನಸೇನಾ ಮುಖ್ಯಸ್ಥ ಶಂಕರ್ ಗೌಡ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಝೆಡ್ ಪ್ಲಸ್ ಭದ್ರತೆ ನೀಡುವಂತೆ ಮನವಿ
ಈ ಘಟನೆಗಳ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಭದ್ರತೆ ಬಗ್ಗೆ ಅವರ ಅಭಿಮಾನಿಗಳು, ಜನಸೇನಾ ಕಾರ್ಯಕರ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ಝಡ್ ಪ್ಲಸ್ ಭದ್ರತೆ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಪವನ್ ಕಲ್ಯಾಣ್ ವಿರುದ್ಧ ವೈಸಿಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಜನಸೇನಾ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸುತ್ತಿರುವ ನೆಟ್ಟಿಗರು #APNeedsPawanKalyan ಹಾಗೂ #ZplusSecurityForPawanKalyanni ಹ್ಯಾಷ್ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ.
ಚಿತ್ರರಂಗ, ಪಾಲಿಟಿಕ್ಸ್ನಲ್ಲಿ ಪವನ್ ಬ್ಯುಸಿ
ಪವನ್ ಸ್ಟಾರ್ ಪವನ್ ಕಲ್ಯಾಣ್ ಆಂಧ್ರ ರಾಜಕೀಯರಂಗದಲ್ಲಿ ಪರ್ಯಾಯ ಶಕ್ತಿಯಾಗಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಪವನ್ ಹೀನಾಯವಾಗಿ ಸೋತಿದ್ದರು. ಆದರೂ ಕೂಡ ಛಲ ಬಿಡದೇ ಮುಂದಿನ ಚುನಾವಣೆಗಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ವಿರುದ್ಧ ಸದಾ ಸಂಘರ್ಷಕ್ಕೆ ಇಳಿಯುತ್ತಿದ್ದಾರೆ. ಪಾಲಿಟಿಕ್ಸ್ ಜೊತೆ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. 'ಹರಿಹರ ವೀರಮಲ್ಲು' ಹಾಗೂ 'ಭವದೀಯುಡು ಭಗತ್ ಸಿಂಗ್' ಎನ್ನುವ ಎರಡು ಸಿನಿಮಾಗಳಲ್ಲಿ ಸದ್ಯ ನಟಿಸುತ್ತಿದ್ದಾರೆ.
ಗಳಿಸಿದ್ದೆಷ್ಟು? ತೆರಿಗೆ ಕಟ್ಟಿದ್ದೆಷ್ಟು? ಪಕ್ಷಕ್ಕೆ ಕೊಟ್ಟಿದ್ದೆಷ್ಟು? ಎಲ್ಲ ಲೆಕ್ಕ ತೆರೆದಿಟ್ಟ ಪವನ್ ಕಲ್ಯಾಣ್