Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಕ್ಡೌನ್ನಲ್ಲಿ ತರಕಾರಿ ಮಾರಿದ್ದ ಜನಪ್ರಿಯ ಹಾಸ್ಯನಟನಿಂದ ಈಗ ಮದ್ಯ ಮಾರಾಟ!
ಹಾಸ್ಯ ನಟ ರಘು ಹೆಸರು ತೆಲುಗು ಚಿತ್ರರಂಗದಲ್ಲಿ ಜನಪ್ರಿಯ. 2002 ರಲ್ಲಿ ಬಿಡುಗಡೆ ಆದ ಜೂ ಎನ್ಟಿಆರ್ ನಟಿಸಿದ ಸೂಪರ್ ಡೂಪರ್ ಹಿಟ್ 'ಆದಿ' ಸಿನಿಮಾದಿಂದ ನಟನೆ ಆರಂಭಿಸಿದ ರಘು ಹಾಸ್ಯ ನಟನಾಗಿ, ವಿಲನ್ ಆಗಿ ಈವರೆಗೆ 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಜನಪ್ರಿಯ ನಟನಾಗಿದ್ದರೂ ಸಹ ಲಾಕ್ಡೌನ್ ಅವಧಿಯಲ್ಲಿ ಕೆಲಸವಿಲ್ಲದೆ ಕಷ್ಟಗಳಿಗೆ ಸಿಲುಕಿದ್ದ ರಘು ತನ್ನ ಊರಿನಲ್ಲಿ ಮನೆಯ ಸುತ್ತ ತರಕಾರಿ ಬೆಳೆದು ಅವನ್ನು ಮಾರಾಟ ಮಾಡುವ ಕಾರ್ಯ ಪ್ರಾರಂಭಿಸಿದ್ದರು. ನಂತರ ಲಾಕ್ಡೌನ್ ಮುಂದುವರೆದಂತೆ ಜಮೀನು ಭೋಗ್ಯಕ್ಕೆ ಪಡೆದು ಅದೇ ಕಾರ್ಯ ಮುಂದುವರೆಸಿದರು. ಈಗ ಮದ್ಯ ಮಾರಾಟ ಪ್ರಾರಂಭ ಮಾಡಿದ್ದಾರೆ.
ಆರ್ಗ್ಯಾನಿಕ್ ತರಕಾರಿ ಬೆಳೆದು ಅದರಲ್ಲಿ ಒಳ್ಳೆಯ ಆದಾಯ ಗಳಿಸಿದ ರಘು ಅದರಲ್ಲಿ ಬಂದ ಹಣವನ್ನು ಮದ್ಯದ ಅಂಗಡಿ ತೆರೆಯಲು ವಿನಿಯೋಗಿಸಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಇತ್ತೀಚೆಗೆ ಮದ್ಯದ ಅಂಗಡಿ ಪರವಾನಗಿಗಳಿಗೆ ಹರಾಜು ಕರೆದಿತ್ತು. ಹರಾಜಿನಲ್ಲಿ ಭಾಗವಹಿಸಿದ್ದ ರಘು ಮತ್ತು ಗೆಳೆಯರು ಸಹ ಟೆಂಡರ್ ಹಾಕಿದ್ದರು. ಅದರಲ್ಲಿ ಎರಡು ಟೆಂಡರ್ ರಘು ಅವರಿಗೆ ದೊರೆತಿದೆ.
ಪರವಾನಗಿ ಸಿಕ್ಕ ಕೂಡಲೇ ಕಾರ್ಯಪ್ರವೃತ್ತರಾದ ರಘು, ನಲ್ಲಂಕೊಡ ಜಿಲ್ಲೆಯ ಗಡಿಭಾಗದಲ್ಲಿರುವ ಮರ್ರೆಗೂಡ ಬೈಪಾಸ್ ರಸ್ತೆಯಲ್ಲಿ ಎರಡು ಅಂಗಡಿಗಳನ್ನು ತೆಗೆದುಕೊಂಡು ಮದ್ಯದ ಅಂಗಡಿ ಇಟ್ಟಿದ್ದಾರೆ. ರಘು ಸ್ವತಃ ಅಂಗಡಿ ನೋಡಿಕೊಳ್ಳುತ್ತಿದ್ದು, ರಘು ಮದ್ಯ ಮಾರಾಟ ಮಾಡುತ್ತಿರುವ ವಿಡಿಯೋಗಳು ಇದೀಗ ವೈರಲ್ ಆಗಿವೆ. ರಘು ಕೆಲಸಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೂ.ಎನ್ಟಿಆರ್, ಮಹೇಶ್ ಬಾಬು, ಅಲ್ಲು ಅರ್ಜುನ್, ಅಲ್ಲರಿ ನರೇಶ್ ಸೇರಿದಂತೆ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ಮುಖ್ಯ ಹಾಸ್ಯ ನಟನಾಗಿ, ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಜೊತೆಗೆ ತೆಲುಗು ಟಿವಿ ಉದ್ಯಮದ ನಂಬರ್ 1 ಶೋ ಜಬರ್ದಸ್ತ್ನಲ್ಲಿಯೂ ಭಾಗವಹಿಸಿ ಅಲ್ಲಿಯೂ ಸೂಪರ್ ಹಿಟ್ ಆಗಿದ್ದರು. ಆದರೆ ಲಾಕ್ಡೌನ್ ನಲ್ಲಿ ಬಂದ ಕಷ್ಟಗಳನ್ನು ವ್ಯಾಪಾರದ ಮೂಲಕ ಎದುರಿಸಿದ ರಘು ಇನ್ನು ಮುಂದೆಯೂ ವ್ಯಾಪಾರದಲ್ಲಿಯೇ ಮುಂದುವರೆಯುವ ನಿರ್ಣಯ ಮಾಡಿದ್ದಾರೆ.
ಕೊರೊನಾವು ಚಿತ್ರರಂಗವನ್ನು ಇನ್ನಿಲ್ಲದಂತೆ ಕಾಡಿದೆ. ರಘು ಅಂಥ ಅನೇಕ ನಟರು, ತಂತ್ರಜ್ಞರು, ಚಿತ್ರರಂಗದ ದಿನಗೂಲಿ ನೌಕರರು ಕೊರೊನಾ ಲಾಕ್ಡೌನ್ನಿಂದ ಹೈರಾಣಾಗಿದ್ದಾರೆ. ಕೆಲವರು ರಘು ರೀತಿಯಲ್ಲಿ ಪರ್ಯಾಯ ಆರ್ಥಿಕ ಮೂಲವನ್ನು ಸೃಷ್ಟಿಸಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ. ಸಿನಿಮಾ ರಂಗದ ಅನಿಶ್ಚಿತ ವೃತ್ತಿಯಲ್ಲಿರುವವರು ರಘು ರೀತಿ ಪರ್ಯಾಯ ಆದಾಯ ಮೂಲ ಸೃಷ್ಟಿಸಿಕೊಳ್ಳುವುದು ಅಗತ್ಯವೂ ಆಗಿದೆ.