Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ಮುಂದೆ ನಾನು ಸಾಮಾಜಿಕ ಜಾಲತಾಣದಲ್ಲಿ ಇರಲ್ಲ: ಸ್ಟಾರ್ ನಿರ್ದೇಶಕ
ತೆಲುಗು ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಸಾಮಾಜಿಕ ಜಾಲತಾಣದಿಂದ ಹೊರಬಂದಿದ್ದಾರೆ. ಈ ಕುರಿತು ಸ್ವತಃ ಕೊರಟಾಲ ಶಿವ ಪ್ರಕಟಣೆ ಮಾಡಿದ್ದು, ಸೂಕ್ತ ಕಾರಣ ತಿಳಿಸಿಲ್ಲ.
''ನಾನು ಸಾಮಾಜಿಕ ಜಾಲತಾಣದಿಂದ ಹೊರಬರುತ್ತಿದ್ದೇನೆ ಎಂದು ಎಲ್ಲರಿಗೂ ತಿಳಿಸುತ್ತಿದ್ದೇನೆ. ಸೋಶಿಯಲ್ ಮೀಡಿಯಾ ಜೊತೆ ಸಾಕಷ್ಟು ನೆನಪಿದೆ. ಆದರೆ ಇದರಿಂದ ದೂರ ಸರಿಯುವ ಸಮಯ ಬಂದಿದೆ. ಮಾಧ್ಯಮಗಳ ಮೂಲಕ ನಾನು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತೇನೆ. ಮಾತುಕತೆ ಮುಂದುವರಿಸೋಣ, ಮಾಧ್ಯಮ ಬದಲಾಗಬಹುದು, ಬಂಧನ ಬದಲಾಗಲ್ಲ'' ಎಂದು ತಿಳಿಸಿದರು.
'ರಾಧೆ-ಶ್ಯಾಮ್' ಸಿನಿಮಾ ಸೆಟ್ ಖರ್ಚಾಗಿದ್ದು ಎಷ್ಟು ಕೋಟಿ?
ನಿರ್ದೇಶಕ ಕೊರಟಾಲ ಶಿವ ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಿಂದ ಹೊರಗೆ ಬಂದಿದ್ದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ನಿರ್ದೇಶಕರ ಈ ನಿರ್ಧಾರ ಹಿಂಬಾಲಕರಿಗೆ ಬೇಸರ ಮೂಡಿಸಿದೆ.
ಆಚಾರ್ಯ ಚಿತ್ರ ನಿರ್ದೇಶಿಸುತ್ತಿರುವ ಕೊರಟಾಲ ಶಿವ
ಕೊರಟಾಲ ಶಿವ ಪ್ರಸ್ತುತ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 'ಆಚಾರ್ಯ' ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಕಾಜಲ್ ಅಗರ್ವಾಲ್, ಸೋನು ಸೂದ್, ರಾಮ್ ಚರಣ್ ತೇಜ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಮೇ 13, 2021ರಂದು 'ಆಚಾರ್ಯ' ಸಿನಿಮಾ ತೆರೆಗೆ ಬರುವುದಾಗಿ ಘೋಷಿಸಿದ್ದರು. ಆದರೆ, ಕೋವಿಡ್ ಎರಡನೇ ಅಲೆ ಹಿನ್ನೆಲೆ ಬಿಡುಗಡೆ ದಿನಾಂಕ ಮುಂದೂಡಲಾಯಿತು. ಕೊನೆಯ ಹಂತದ ಚಿತ್ರೀಕರಣ ಬಾಕಿ ಉಳಿದಿದ್ದು, ಅಕ್ಟೋಬರ್ನಲ್ಲಿ ಮತ್ತೆ ಶೂಟಿಂಗ್ ಶುರು ಮಾಡುವ ನಿರ್ಧಾರ ಮಾಡಲಾಗಿದೆ.
ಆಚಾರ್ಯ ಸಿನಿಮಾ ಮುಗಿದ ಬಳಿಕ ಜೂನಿಯರ್ ಎನ್ಟಿಆರ್ ಜೊತೆ ಹೊಸ ಪ್ರಾಜೆಕ್ಟ್ ಆರಂಭಿಸಲಿದ್ದಾರೆ.
Recommended Video
ಕೊರಟಾಲ ಶಿವ ಇದುವರೆಗೂ ಮಾಡಿರುವುದು ಕೇವಲ ನಾಲ್ಕು ಸಿನಿಮಾ ಮಾತ್ರ. ಎಲ್ಲವೂ ಬ್ಲಾಕ್ ಬಸ್ಟರ್. ಪ್ರಭಾಸ್ ಜೊತೆ 'ಮಿರ್ಚಿ', ಮಹೇಶ್ ಬಾಬು ಜೊತೆ 'ಶ್ರೀಮಂತಡು', ಎನ್ಟಿಆರ್ ಜೊತೆ 'ಜನತಾ ಗ್ಯಾರೇಜ್', ಮತ್ತೆ ಮಹೇಶ್ ಬಾಬು ಜೊತೆ 'ಭರತ್ ಅನೇ ನೇನು' ನಿರ್ದೇಶಿಸಿದ್ದರು.