Don't Miss!
- News ಡಿ ಕೆ ಶಿವಕುಮಾರ್ 9 ವರ್ಷದ ಬಾಲಕಿಯನ್ನು ಕೂಡಿ ಹಾಕಿ ಆಸ್ತಿ ಬರೆಸಿಕೊಂಡವ್ರೆ ; ಹಿಂದಿನ ಸತ್ಯ ಬಿಚ್ಚಿಟ್ಟ ದೇವೇಗೌಡ್ರು
- Finance Lok Sabha Election 2024: ಡಿಜಿಲಾಕರ್ಗಾಗಿ ಡಿಜಿಟಲ್ ವೋಟರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ
- Technology Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- Lifestyle ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಮಾಕ್ಕೆ ಜಾರಿದ ವರ್ಮಾ ಗರಡಿಯಲ್ಲಿ ಬೆಳೆದ ಹಾಸ್ಯನಟ
ತೆಲುಗು ಚಿತ್ರರಂಗ ಜನಪ್ರಿಯ ಹಾಸ್ಯನಟ ನರಸಿಂಗ್ ಯಾದವ್ ಕೋಮಾಕ್ಕೆ ಜಾರಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ನಡುವೆ ನರಸಿಂಗ್ ತಲೆಗೆ ಪೆಟ್ಟು ಬಿದ್ದಿದ್ದರಿಂದ ಕೋಮಾಕ್ಕೆ ಜಾರಿದ್ದಾರೆ ಎಂಬ ಸುದ್ದಿಯನ್ನು ಅವರ ಪತ್ನಿ ಅಲ್ಲಗೆಳೆದಿದ್ದು ದಯವಿಟ್ಟು ಇಲ್ಲಸಲ್ಲದ ಸುದ್ದಿಯನ್ನು ಹಬ್ಬಿಸಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.
Recommended Video
ಹಾಸ್ಯನಟ ನರ್ಸಿಂಗ್ ಯಾದವ್ ಅವರ ಆರೋಗ್ಯ ಸ್ಥಿತಿ ಇನ್ನೂ ಆತಂಕಕಾರಿಯಾಗಿದೆ ಎಂದು ಸೋಮಾಜಿಗುಡದ ಯಶೋಧಾ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ. ನರಸಿಂಗ್ ಆರೋಗ್ಯದ ಬಗ್ಗೆ ಅಭಿಮಾನಿಗಳು, ಆಪ್ತರು ಮತ್ತು ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು 48ಗಂಟೆಗಳ ಕಾಲ ದೇಹ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ನೋಡಿ ಮುಂದಿನ ಚಿಕಿತ್ಸೆ ಕ್ರಮ ತಿಳಿಸಲಾಗುವುದು ಡಾಕ್ಟರ್ ಹೇಳಿದ್ದಾರೆ.
ಕಳೆದ ಗುರುವಾರದಂದು ಕಿಡ್ನಿ ಡಯಾಲಿಸೀಸ್ ಮಾಡಿಸಲು ಆಸ್ಪತ್ರೆಗೆ ಬಂದಿದ್ದ ನರಸಿಂಗ್ ಅವರು ಅಸ್ವಸ್ಥರಾಗಿದ್ದಾರೆ. ನರಸಿಂಗ್ ಅವರ ದೇಹದಲ್ಲಿರುವ ಸಕ್ಕರೆ ಅಂಶ, ರಕ್ತದೊತ್ತಡದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಇದು ವಿಷಯ ಸ್ಥಿತಿಗೆ ತಲುಪಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಂತಾಗಿದೆ. ಈ ಹಿಂದೆ ಕೂಡಾ ಮೆದುಳಿನಲ್ಲಿ ಬ್ಲಾಕೇಜ್ ಇದೆ ಎಂದು ವೈದ್ಯರು ತಿಳಿಸಿದ್ದರು.
ಯಶೋದಾ ಆಸ್ಪತ್ರೆಗೆ ಬರುವ ತನಕ ಯಾವುದೇ ಸಮಸ್ಯೆ ಇರಲಿಲ್ಲ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ನೋಡಿದ್ದು, "ಅಂದಿನಿಂದ ಅವರ ಸ್ಥಿತಿ ಹಾಗೇ ಇದೆ", ಆದರೆ, ಎಂದು ಅವರ ಪತ್ನಿ ಚಿತ್ರ ಯಾದವ್ ಹೇಳಿದ್ದಾರೆ. ಪ್ರಸ್ತುತ ಅವರು ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಲ್ಲಿ ಕುಸಿದು ಬಿದ್ದರು ಎಂಬುದು ಸುಳ್ಳು
ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರಿಗೆ ಕಿಡ್ನಿ ಸಮಸ್ಯೆ(Chronic Kidney disease)ಇದೆ, ಗುರುವಾರದಂದು ಡಯಾಲಿಸಿಸ್ ವೇಳೆ ರಕ್ತದೊತ್ತಡ ಕುಸಿದಿದೆ, ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಆದರೆ, ಮನೆಯ ಬಾತ್ ರೂಮ್ ನಲ್ಲಿ ಬಿದ್ದು ತಲೆಗೆ ಪೆಟ್ಟು ಬಿದ್ದಿದೆ ಎಂಬ ವದಂತಿಗಳನ್ನು ನಂಬಬೇಡಿ. ಅವರ ತಲೆಗೆ ಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಸುದ್ದಿ ಬಂದಿರುವುದು ತಿಳಿದು ನೋವಾಗಿದೆ ಎಂದು ಹೇಳಿದರು.
400ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ
ಜನಪ್ರಿಯ ನಿರ್ದೇಶಕ ರಂಗೋಪಾಲ್ ವರ್ಮಾ ನಿರ್ಮಿಸಿದ ಹಲವಾರು ಚಿತ್ರಗಳು ಸೇರಿ ಸುಮಾರು 400 ಪ್ಲಸ್ ಚಿತ್ರಗಳಲ್ಲಿ ನರಸಿಂಗ್ ಯಾದವ್ ನಟಿಸಿದ್ದಾರೆ. ಅವರ ಸಂಭಾಷಣೆ ವಿತರಣೆ, ಮೂಲ ಹೈದರಾಬಾದಿ ತೆಲುಗು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ವಿಲನ್ ಪಾತ್ರದಲ್ಲೂ ಹಾಸ್ಯಭರಿತ ಡೈಲಾಗ್ ಹೊಡೆಯುತ್ತಿದ್ದ ನರಸಿಂಗ್ ಈಗ ಸೈಲಂಟ್ ಆಗಿರುವುದು ಅಭಿಮಾನಿಗಳಿಗೂ ನೋವು ತಂದಿದೆ.
ಕೆಲ ಸಮಯದಿಂದ ಚಿತ್ರರಂಗದಿಂದ ದೂರವಿದ್ದರು
ಅನಾರೋಗ್ಯದಿಂದಾಗಿ ಅವರು ಕೆಲವು ಸಮಯದಿಂದ ಚಲನಚಿತ್ರಗಳಿಂದ ದೂರವಾಗಿದ್ದರು. ದೇಹ ಪರಿಸ್ಥಿತಿ ನೋಡಿಕೊಂಡು ವಾರಕ್ಕೆ ಎರಡು ಮೂರು ಸಲ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗಿತ್ತು. ಮೆದುಳಿನಲ್ಲಿ ಬ್ಲಾಕೇಜ್ ಇರುವುದು ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡಲು ಕಾರಣ ಎನ್ನಲಾಗಿದೆ.
ಪೋಕರಿ, ಟ್ಯಾಗೋರ್ ಹೆಸರು ತಂದುಕೊಟ್ಟ ಚಿತ್ರ
ರಾಮ್ ಗೋಪಾಲ್ ವರ್ಮಾ ಅವರ ಕ್ಷಣಂ ಕ್ಷಣಂ ಚಿತ್ರದಲ್ಲಿ ವೆಂಕಟೇಶ್, ಶ್ರೀದೇವಿ ಜೊತೆ ನಟಿಸಿ ಸೈ ಎನಿಸಿಕೊಂಡ ನರಸಿಂಗ್ ಮತ್ತೆ ತಿರುಗಿ ನೋಡಲಿಲ್ಲ. ಐತೆ, ಮಾಸ್, ಶಂಕರ್ ದಾದಾ ಎಂಬಿಬಿಎಸ್, ನುವ್ವೊಸ್ತಾನಂಟೆ ನೆನೊದ್ದಂಟಾನಾ, ಬೊಮ್ಮರಿಲ್ಲು, ಕಿಲಾಡಿ 150 ಹೀಗೆ ಹಲವು ಚಿತ್ರಗಳಲ್ಲಿ ಗಮನ ಸೆಳೆದಿದ್ದಾರೆ. ಚಿರಂಜೀವಿ ಅವರ ಟ್ಯಾಗೋರ್ ಮತ್ತು ಮಹೇಶ್ ಬಾಬು ಅವರ ಪೋಕಿರಿ ಚಿತ್ರ ಜನಪ್ರಿಯತೆ ಹೆಚ್ಚಿಸಿದ್ದವು.