Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ಯದಲ್ಲೆ ಕನ್ನಡಕ್ಕೆ 24/7 ನ್ಯೂಸ್, ಎಂಟರ್ಟೈನ್ಮೆಂಟ್ ಚಾನಲ್
ಕನ್ನಡದಲ್ಲಿ ಚಾನಲ್ಗಳು ತಿಂಗಳಿಗೊಂದು ಹುಟ್ಟಿಕೊಳ್ಳುತ್ತಿವೆ. ಒಂದಷ್ಟು ತಂತ್ರಜ್ಞರಿಗೆ ಕೆಲಸಕ್ಕೇನೂ ಕೊರತೆಯಿಲ್ಲ. ಸುದ್ದಿವಾಹಿನಿಗಳು ಬರುತ್ತಲೇ ಇವೆ. ಜನಶ್ರೀ ನ್ಯೂಸ್ ಎಲ್ಲೆಡೆ ಸುದ್ದಿಮಾಡಿದೆ ಮತ್ತೆ ಸುದ್ದಿ ಮಾಡುತ್ತಿದೆ. ಅದೇ ರೀತಿ ಕುಮಾರಸ್ವಾಮಿಯವರ ಎಂಟರ್ಟೈನ್ಮೆಂಟ್ ಚಾನೆಲ್ ಹೋಗಿ 24 ಗಂಟೆಯ ಸುದ್ದಿವಾಹಿನಿಯಾಗಿ ಬದಲಾಗುತ್ತಿದೆ.
ಇದೀಗ ಬಂದಿರುವ ಸುದ್ದಿಯಪ್ರಕಾರ ರಾಜ್ ಮ್ಯೂಸಿಕ್ ಕೂಡ ಬರುವ ತರಾತುರಿಯಲ್ಲಿದೆ. ಉದಯಟೀವಿಯ ಹಳೇ ಆಫೀಸ್ ಇದ್ದ ಜಾಗದಲ್ಲಿ(ವಸಂತನಗರ) ರಾಜ್ ಮ್ಯೂಸಿಕ್ ಆಫೀಸ್ ಓಪನ್ ಆಗಿದೆ. ಅದಕ್ಕೆ ಹೆಡ್ ಆಗಿ ಯಾರು ಕೂರಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಉದಯ ಮತ್ತು ಕಸ್ತೂರಿ ವಾಹಿನಿಯಲ್ಲಿ ಒಂದಷ್ಟು ವರ್ಷ ಇದ್ದು, ಹೆಸರು, ದುಡ್ಡು ಮತ್ತು ಸುದ್ದಿ ಮಾಡಿರುವ ಬಾಲಾಜಿ ಅಲಿಯಾಸ್ ಮಾರ್ಕ್ ಬಾಲಾಜಿ ಅವರು ಮುಖ್ಯಸ್ಥರಾಗುವುದು ಬಹುತೇಕ ಖಚಿತವಾಗಿದೆ.
ಕೆ. ಮಂಜು ಜೊತೆ ಸೇರಿ ಕಿಚ್ಚ ಹುಚ್ಚ, ಒಲವೇ ಜೀವನ ಲೆಕ್ಕಾಚಾರ ಚಿತ್ರಗಳನ್ನು ನಿರ್ಮಿಸಿರುವ ಬಾಲಾಜಿ ಅವರ ಜೊತೆ ಹೆಚ್ಚಿನ ಮಾತುಕತೆ ನಡೆದಿದ್ದು, ಈಗಾಗಲೇ ಕೆಲಸಗಾರರ ನೇಮಕ ನಡೆಯುವ ಹಂತ ತಲುಪಿದೆ. ರಾಜ್ ಮ್ಯೂಸಿಕ್ ಈ ಹಿಂದೆ ಪೂರ್ಣ ಪ್ರಮಾಣದಲ್ಲಿ ಆನ್ ಏರ್ ಆಗಬೇಕಿತ್ತು.
ಆದರೆ, ಅದು ಇಲ್ಲಿಯವರೆಗೆ ಸುದ್ದಿ ಹಂತಕ್ಕಷ್ಟೇ ಇತ್ತು. ಅದೇ ರಾಜ್ ಈಗ ಪೂರ್ಣಪ್ರಮಾಣದಲ್ಲಿ ಲಾಂಚ್ ಆಗಲು ಸಿದ್ಧತೆ ನಡೆಸುತ್ತಿದೆ. ಒಂದರ ಬೆನ್ನಲ್ಲೇ ನ್ಯೂಸ್ ಹಾಗೂ ಎಂಟರ್ಟೈನ್ಮೆಂಟ್ ಚಾನಲ್ ಕೂಡ ಬರುಲಿದೆ ಎಂಬ ಸುದ್ದಿಯೂ ಇದೆ!ಅದೇನೇ ಇದ್ದರೂ ಮೀಡಿಯಾ ಮಂದಿಗಂತೂ ಕೈತುಂಬಾ ಕೆಲಸ, ಹೊಟ್ಟೆ ತುಂಬಾ ಸಂಬಳ ಗ್ಯಾರಂಟಿ!