Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾರ್ತೆಗಳು; ಓದುತ್ತಿರುವವರು ಶಂಕರ ಬಿದರಿ!
ಇದು ಬಿದರಿಯವರ ಹೈಟೆಕ್ ಪೊಲೀಸಿಂಗ್. ಜನವರಿ 1ರಂದು ಆಯೋಜಿಸಿದ್ದ ಔತಣಕೂಟದಲ್ಲಿ ನಗರ ಪೊಲೀಸರಿಗೆ ಇದು ತಂತ್ರಜ್ಞಾನದ ವರ್ಷ ಎಂದು ಸೂಚ್ಯ ವಾಗಿ ಹೇಳಿದ್ದ ಬಿದರಿ, ಈಗ ಟಿವಿ ವಾಹಿನಿ ಆರಂಭವನ್ನು ಬುಧವಾರ ಬಹಿರಂಗೊಳಿಸಿದ ಅವರು, 'ದೇಶದಲ್ಲೇ ಮೊದಲ ಬಾರಿಗೆ ಪೊಲೀಸ್ ಇಲಾಖೆಗಾಗಿ ಟಿವಿ ಚಾನೆಲ್ ಆರಂಭಿಸಲು ನಿರ್ಧರಿಸಲಾಗಿದೆ. ಪರವಾನಗಿ ಪಡೆಯಲು ಕೇಂದ್ರ ಸರಕಾರಕ್ಕೆ ಹಾಗೂ ಹಣಕಾಸು ನೆರವಿಗಾಗಿ ರಾಜ್ಯ ಸರಕಾರಕ್ಕೆ ಮನವಿ ಪತ್ರ ಬರೆಯಲಾಗುವುದು" ಎಂದಿದ್ದಾರೆ.
ಫೆ.10ರ ಹೊತ್ತಿಗೆ ಟಿವಿ ಚಾನೆಲ್ನ ಫ್ರೇಮ್ ವರ್ಕ್ ಮುಕ್ತಾಯಗೊಳ್ಳುತ್ತದೆ. ಸುಮಾರು 15 ಕೋಟಿ ರೂ. ವೆಚ್ಚ ತಗಲುವ ನಿರೀಕ್ಷೆ ಇದ್ದು, ಪೊಲೀಸ್ ಆಧುನೀಕರಣ ಯೋಜನೆಯಲ್ಲಿ ಹಣಮಂಜೂರು ಮಾಡುವಂತೆ ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದರು.
ಈ ಚಾನ್ಲ್ಅನ್ನು ಪೊಲೀಸ್ ಕಂಟ್ರೋಲ್ ರೂಂ ಜತೆ ಸಮನ್ವಯಗೊಳಿಸಲಾಗುವುದು. ಜತೆಗೆ ಎಫ್ಎಂ ಚಾನೆಲ್ನಲ್ಲೂ ಪ್ರಸಾರ ಮಾಡಲಾಗುವುದು. ಶೇ.25ರಷ್ಟು ಇಲಾಖೆ ಸಿಬ್ಬಂದಿ ಚಾನೆಲ್ ಗೆ ಕೆಲಸ ಮಾಡುತ್ತಾರೆ. ಇನ್ನುಳಿದವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು. ಚಂದನ ಕೇಂದ್ರ ಸರಕಾರಕ್ಕೆ ಸೇರಿದ ಪ್ರಾದೇಶಿಕ ಚಾನೆಲ್. ಇದು ರಾಜ್ಯ ಸರಕಾರಕ್ಕೆ ಸಂಬಂಧಿಸಿದ್ದು, ಸದ್ಯದಲ್ಲೇ ವಾಹಿನಿಗೆ ಸೂಕ್ತ ಹೆಸರು ಇಡಲಾಗುವುದು ಎಂದರು. (ಸ್ನೇಹಸೇತು: ವಿಜಯ ಕರ್ನಾಟಕ)