Don't Miss!
- Sports
ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
'ಬೆಣ್ಣೆ ದೋಸೆ'ಯಲ್ಲಿ ಡಿಸ್ಕವರಿ ಮಾಡೋಕೆ ಹೊರಟ 'ವಾಸ್ಕೋಡಿಗಾಮ'
ನಿರ್ದೇಶಕ ಮಧುಚಂದ್ರ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬಂದಿದ್ದ 'ವಾಸ್ಕೋಡಿಗಾಮ' ಟೀಮ್ 'ಬೆಂಗಳೂರು ಬೆಣ್ಣೆ ದೋಸೆ'ಯಲ್ಲಿ ಮಸ್ತ್ ಮಜಾ ಮಾಡಿ ಕುಣಿದು ಕುಪ್ಪಳಿಸಿದರು. ಈ ವಿಭಿನ್ನ ರೀತಿಯ ರಿಯಾಲಿಟಿ ಶೋ ನಲ್ಲಿ ಈ ಸಂಚಿಕೆ ಬಹಳಷ್ಟು ಮಜಾ ಕೊಡಲಿದೆ.
ಪೋರ್ಚುಗೀಸ್ ದೊರೆ 'ವಾಸ್ಕೋಡಗಾಮ' ದೇಶವನ್ನು ಪತ್ತೆ ಹಚ್ಚಲು ಹೋದರೆ, ಈ 'ವಾಸ್ಕೋಡಿಗಾಮ' ತಂಡ ಕುಂಬಳಕಾಯಿಯನ್ನು ಪತ್ತೆಹಚ್ಚಲು ಹೋಗುತ್ತಾರೆ. ಡಿಸ್ಕವರಿ ಮಾಡಲು ಹೊರಟ ನಟಿ ಪಾರ್ವತಿ ಅವರ ಕೈಗೆ ಸಿಕ್ಕ ಹಾವನ್ನು ನೋಡಿ ಎಲ್ಲರೂ ಹೌಹಾರಿದ ಕಾಮಿಡಿ ಘಟನೆ ಈ ವಾರದ 'ಬೆಣ್ಣೆದೋಸೆ' ಸಂಚಿಕೆಯಲ್ಲಿ ಮೂಡಿಬಂದಿದೆ.['ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ಮಾಲಾಶ್ರೀ ಆಟೋ ಸವಾರಿ]
ಈಗಾಗಲೇ ಜನರ ಪ್ರೀತಿ ಹಾಗೂ ಮೆಚ್ಚುಗೆಯನ್ನು ಗಳಿಸಿರುವ ನಟ ಕಿಶೋರ್ ಅವರು ವಿವಿಧ ರೀತಿಯ ಡೈಲಾಗ್ ಹೊಡೆದು ಈ ವಿಭಿನ್ನ ಶೋ ನ ಗಮನ ಸೆಳೆದರು. ವಿಶೇಷವಾಗಿ 'ಮುಂಗಾರು ಮಳೆ' ಚಿತ್ರದ ಸಂಭಾಷಣೆಯನ್ನು ಕಿಶೋರ್ ಅವರು 'ಬೆಣ್ಣೆದೋಸೆ' ವೇದಿಕೆ ತಂದಿದ್ದರು, ಜೊತೆಗೆ ನಟಿ ಪಾರ್ವತಿ ನಾಯರ್ ಅವರು 'ಶರಪಂಜರ' ಚಿತ್ರದ ಕಲ್ಪನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ಚಿತ್ರದ ನಿರ್ದೇಶಕ ಮಧುಚಂದ್ರ ಅವರು 'ಬೆಂಗ್ಳೂರ್ ಬೆಣ್ಣೆದೋಸೆ'ಯಲ್ಲಿ ಸಖತ್ ಸ್ಟೆಪ್ ಹಾಕಿ ಎಲ್ಲರ ಮನರಂಜಿಸಿದ್ದಾರೆ.[ಬೆಣ್ಣೆ ದೋಸೆ ತಿರಸ್ಕರಿಸಿದ 'ಪೂಜಾರಿ' ಬೆಡಗಿ ]

ಬಹುಭಾಷಾ ನಟ ಕಿಶೋರ್ ಹಾಗೂ ನಟಿ ಪಾರ್ವತಿ ಅವರ ಡಬ್ ಸ್ಮಾಷ್ ಹಾಗೂ 'ವಾಸ್ಕೋಡಿಗಾಮ' ಚಿತ್ರತಂಡ, ಬೆಣ್ಣೆದೋಸೆ ಶೋನ ರೂವಾರಿ ನಟ ಅರುಣ್ ಸಾಗರ್ ಜೊತೆ ಮಾಡಿದ ಮೋಜು-ಮಸ್ತಿ ನೋಡಲು ಈ ವಾರದ (ನವೆಂಬರ್ 1, ರಾತ್ರಿ 9ಕ್ಕೆ) 'ಬೆಣ್ಣೆದೋಸೆ' ಮಿಸ್ ಮಾಡ್ಕೋಬೇಡಿ