Related Articles
ಅಂತೂ ಇಂತೂ ಬಂಪರ್ ಆಫರ್ ಗಿಟ್ಟಿಸಿದ 'ಬಿಗ್ ಬಾಸ್' ದಿವಾಕರ್!
'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ ಕೃಷಿ ರಿಜೆಕ್ಟ್ ಮಾಡಿದ ಚಿತ್ರಗಳೆಷ್ಟು?
ಚಂದನ್ ಶೆಟ್ಟಿ ಹೊಸ ಹೇರ್ ಸ್ಟೈಲ್ ಗೆ ಮಾರು ಹೋದ ಶೃತಿ ಹರಿಹರನ್
ಅಧಿಕೃತವಾಗಿ 'ಕಮಲ' ಪಕ್ಷ ಸೇರಿದ ಬಿಗ್ ಬಾಸ್ ಕನ್ನಡ ಸ್ಪರ್ಧಿ
ನಿಜಕ್ಕೂ '3-ಪೆಗ್' ಸಾಂಗ್ ಯಾರದ್ದು.? 'ಇತಿಹಾಸ' ಬಿಚ್ಚಿಟ್ಟ ಚಂದನ್ ಶೆಟ್ಟಿ
ಇಂದು ಬೆಂಕಿಗೆ ಆಹುತಿಯಾದ 'ಬಿಗ್ ಬಾಸ್' ಮನೆ ಅಂದು ಹೇಗಿತ್ತು ನೆನಪಿದ್ಯಾ.?
'ಬಿಗ್ ಬಾಸ್' ಮನೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಹೇಗೆ.? ಕಾರಣ ಏನು.?
'ಬಿಗ್ ಬಾಸ್' ಮನೆ ಭಸ್ಮ: ಶಾಕ್ ಆದ ಸ್ಪರ್ಧಿಗಳು.!
'ಬಿಗ್ ಬಾಸ್' ಮನೆ ಬೆಂಗಳೂರಿಗೆ ಶಿಫ್ಟ್ ಆಗಿದ್ದೇ 'ಕಿಚ್ಚ'ನಿಂದ: ಈಗದೇ ಮನೆಗೆ ಕಿಚ್ಚು ಬಿತ್ತಲ್ಲ.!
ಅಗ್ನಿ ದುರಂತ: ಧಗಧಗ ಉರಿದು ಸುಟ್ಟು ಕರಕಲಾದ 'ಬಿಗ್ ಬಾಸ್' ಮನೆ
ದಿವಾಕರ್ ಮನೆಗೆ ಹೋಗಿ ಸರ್ಪ್ರೈಸ್ ನೀಡಿದ ಗೆಳೆಯ ಚಂದನ್ ಶೆಟ್ಟಿ
ಚಂದನ್ ಶೆಟ್ಟಿಗೆ ಬಂಪರ್ ಆಫರ್ ಕೊಟ್ಟ ನಿರ್ಮಾಪಕ ಮುನಿರತ್ನ
ಮೋದಿಯನ್ನು ಭೇಟಿಯಾಗಲು ಹೊರಟ 'ಬಿಗ್ ಬಾಸ್' ಸ್ಪರ್ಧಿ ಸಮೀರ್ ಆಚಾರ್ಯ! ಕಾರಣ ಏನು.?
ಮಾತಾಡಿದ್ರೆ ಕಣ್ಣು ಕೆಂಪಗೆ ಮಾಡಿಕೊಳ್ಳುವ, ವಯಸ್ಸಿನಲ್ಲಿ ದೊಡ್ಡವರು ಎಂಬ ಪ್ರಜ್ಞೆ ಇಲ್ಲದೆ ದೊಡ್ಡದಾಗಿ ಕಣ್ಣು ಬಿಡುವ, ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದೆ ಕೂಗಾಡುವ ಜಗನ್ನಾಥ್ ಕಂಡ್ರೆ ಮೊದಲ ದಿನದಿಂದಲೂ ವೀಕ್ಷಕರಿಗೆ ಬೇಸರ ಇದ್ದೇ ಇದೆ.
ಜಗನ್ ಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿಮಾತು ಹೇಳಿದ ಕಿಚ್ಚ ಸುದೀಪ್.!
ವೀಕ್ಷಕರಿಗೆ ಇದ್ದ ಬೇಸರ ಇದೀಗ 'ಕಾಲರ್ ಆಫ್ ದಿ ವೀಕ್' ಮುಖಾಂತರ ಜಗನ್ನಾಥ್ ಚಂದ್ರಶೇಖರ್ ಕಿವಿಗೆ ಬಿದ್ದಿದೆ.
ಹೆಮ್ಮೆಯ ಕನ್ನಡ ಭಾಷೆಗೆ ಅವಮಾನ ಮಾಡಿದ್ರಾ 'ಗಾಂಧಾರಿ' ಜಗನ್ನಾಥ್.?
''ಐ ಡೋಂಟ್ ಲೈಕ್ ಎನಿಬಡಿ ಶೌಟಿಂಗ್ ಅಟ್ ಮಿ (ನನ್ನ ಮೇಲೆ ಯಾರೂ ಸಹ ಕೂಗಾಡುವುದು ನನಗೆ ಇಷ್ಟ ಆಗಲ್ಲ)'' ಅಂತ ಏರುದನಿಯಲ್ಲಿ ಹೇಳುವ ಜಗನ್ನಾಥ್ ವರ್ತನೆ ಬಗ್ಗೆ ಬೇಸರಗೊಂಡು ಮೈಸೂರಿನ ಅಮೃತಾ ಎಂಬುವರು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಜಗನ್ ಗೆ ಪ್ರಶ್ನೆ ಮಾಡಿದರು. ಮುಂದೆ ಓದಿರಿ....
'ಕಾಲರ್ ಆಫ್ ದಿ ವೀಕ್' ಕೇಳಿದ ಪ್ರಶ್ನೆ ಏನು.?
''ಕಬ್ಬಿನ ಜ್ಯೂಸ್ ಟಾಸ್ಕ್ ನಡೆಯುವ ಸಂದರ್ಭದಲ್ಲಿ ವಾದ, ವಿವಾದ ಆಯ್ತು. ಪರಿಸ್ಥಿತಿಯನ್ನ ನಿಯಂತ್ರಿಸಲು ಸಿಹಿ ಕಹಿ ಚಂದ್ರು ಬಂದರು. ಆಗ ನೀವು ಅವರಿಗೆ, ''ಐ ಡೋಂಟ್ ಲೈಕ್ ಎನಿಬಡಿ ಶೌಟಿಂಗ್ ಅಟ್ ಮಿ'' ಅಂತ ಹೇಳಿದ್ರಿ. ಆದರೆ ನೀವೇ ಕೆಲವೊಂದು ಸನ್ನಿವೇಶಗಳಲ್ಲಿ ಬೇಗ ಆವೇಶಕ್ಕೆ ಒಳಗಾಗಿ ಇತರೆ ಸ್ಪರ್ಧಿಗಳ ಮೇಲೆ ಕೂಗಾಡುತ್ತೀರಾ. ಆಗ ಬೇರೆಯವರಿಗೂ ಹಾಗೆ ಅನ್ಸಲ್ವಾ.?'' ಅಂತ ಮೈಸೂರಿನ ಅಮೃತ ಎಂಬುವರು ಜಗನ್ ಗೆ ಪ್ರಶ್ನೆ ಮಾಡಿದರು.
ಧಿಮಾಕು ದೌಲತ್ತಿನ ಜಗನ್ 'ಬಿಗ್ ಬಾಸ್' ಇತಿಹಾಸದಲ್ಲಿಯೇ 'ಕಳಪೆ' ಸ್ಪರ್ಧಿ.!
ತಪ್ಪು ಸಂದೇಶ ನೀಡ್ತಿಲ್ವಾ.?
''ನಿಮ್ಮನ್ನ ಫಾಲೋ ಮಾಡುವ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನೆ ಮಾಡಿದ ಹಾಗೆ ಆಗ್ತಿಲ್ವಾ.? ನಿಮ್ಮ ಈ ವರ್ತನೆ ಇಂದ ನೀವು ಎಲ್ಲರಿಗೂ ನಿರಾಸೆ ಮಾಡಿದ ಹಾಗೆ ಆಗ್ತಿಲ್ವಾ.?'' ಅಂತ ನಯವಾಗಿಯೇ ಮೈಸೂರಿನ ಅಮೃತಾ ಜಗನ್ ಗೆ ಬೆಂಡೆತ್ತಿದರು.
ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!
ಕ್ಷಮೆ ಕೇಳಿದ ಜಗನ್
''ಮೊದಲನೇಯದಾಗಿ, ನಾನು ಹಾಗೆ ಹೇಳಿದಕ್ಕೆ ಒಂದು ಕಾರಣ ಇದೆ. ಕಾರಣ ಏನೇ ಇದ್ದರೂ, ನಿಮಗೆ ನಿರಾಸೆ ಆಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಖಂಡಿತವಾಗಲೂ ಇದನ್ನ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿ ಇವತ್ತಿಂದ ನಿಂತಿರುತ್ತೇನೆ'' ಅಂತ ಅಮೃತ ಅವರಿಗೆ ಜಗನ್ ಹೇಳಿದರು.
ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.!
ಬದಲಾಗುವ ಪ್ರಯತ್ನ ಮಾಡ್ತಾರಂತೆ.!
''ಹೊರಗಡೆ ಬರುವ ಹೊತ್ತಿಗೆ ನನ್ನ ಟೆಂಪರ್ ಹಾಗೂ ಮಾತಿನ ವೇಗ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿ ಇರ್ತೀನಿ. ಐ ವಿಲ್ ಡೂ ಮೈ ಬೆಸ್ಟ್'' ಅಂತ ಜಗನ್ ಹೇಳಿದರು.
ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!
ಬದಲಾಗುತ್ತಾರಾ ಜಗನ್.?
ಜಗನ್ ರವರ ಉಗ್ರ ಪ್ರತಾಪ ವೀಕ್ಷಕರಿಗೆ ಇಷ್ಟ ಆಗ್ತಿಲ್ಲ ಅಂತ 'ಕಾಲರ್ ಆಫ್ ದಿ ವೀಕ್' ಮೂಲಕ ಜಗನ್ ಗೆ ತಿಳಿದಿದೆ. ಇನ್ನೂ ಸುದೀಪ್ ಕೂಡ ಜಗನ್ ರನ್ನ ಎಚ್ಚರಿಸಿದ್ದಾರೆ. ತಪ್ಪನ್ನ ತಿದ್ದಿಕೊಂಡು 'ಬಿಗ್ ಬಾಸ್' ಮನೆಯಲ್ಲಿ ಜಗನ್ ಬದಲಾಗುತ್ತಾರಾ, ನೋಡೋಣ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.