Just In
Don't Miss!
- News
ಸ್ಪೀಕರ್ ಕಾಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಚಂದ್ರಶೇಖರ್ ಮಾದರಿ ಕೆಲಸ!
- Sports
ಐಪಿಎಲ್ 2021: ಸಿಎಸ್ಕೆ ಉಳಿಸಿಕೊಂಡಿರುವ, ಕೈ ಬಿಟ್ಟಿರುವ ಆಟಗಾರರ ಪಟ್ಟಿ
- Automobiles
ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಗನ್ ಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿಮಾತು ಹೇಳಿದ ಕಿಚ್ಚ ಸುದೀಪ್.!

'ಬಿಗ್ ಬಾಸ್' ಮನೆಗೆ ಕಾಲಿಟ್ಟ ದಿನದಿಂದಲೂ, 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ರವರ ವರ್ತನೆ ಬಗ್ಗೆ ವೀಕ್ಷಕರಿಗೆ ಬೇಸರ ಇದ್ದೇ ಇದೆ. ಸಂಬಂಧಪಡದ ವಿಚಾರಕ್ಕೆಲ್ಲ ಮೂಗು ತೂರಿಸಿ, ಕಣ್ಣನ್ನ ಕೆಂಪಗೆ ಮಾಡಿ, ಏರುದನಿಯಲ್ಲಿ ಮಾತನಾಡುವ ಜಗನ್ ಸ್ವಭಾವ ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ.
ಇನ್ನೂ ಟಾಸ್ಕ್ ನಲ್ಲಿ ರೋಷಾವೇಶ ಮೆರೆಯುವ ಜಗನ್, ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಸಮೀರಾಚಾರ್ಯ ರವರ ಶರ್ಟ್ ನ ಎಳೆದು ಹರಿದು ಹಾಕಿದ್ದರು. ಸಾಲದಕ್ಕೆ ದೊಡ್ಡ ರಾದ್ಧಾಂತಕ್ಕೆ ನಾಂದಿ ಹಾಡಿದ್ದರು.
ಈ ಎಲ್ಲವನ್ನೂ ಗಮನಿಸಿದ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಜಗನ್ನಾಥ್ ಚಂದ್ರಶೇಖರ್ ಅವರಿಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿ ಮಾತನ್ನು ಹೇಳಿದರು. ಮುಂದೆ ಓದಿರಿ...

ಜಗನ್ ತಡೆಯಲಿಲ್ಲ, ಎಳೆದದ್ದು.!
''ಜಗನ್ ಅವರೇ... ಟಾಸ್ಕ್ ಅಂತ ಬಂದಾಗ ತಾವು ಅದ್ಭುತವಾಗಿ ಪರ್ಫಾಮ್ ಮಾಡಿದ್ರಿ. ಟಾಸ್ಕ್ ಹೀಟ್ ನಲ್ಲಿ ತಾವು ಹಾಗೂ ಸಮೀರಾಚಾರ್ಯ ಮಾಡಿದ್ದು ಸರಿ ಅಲ್ಲ. ತಡೆದೆ ಅಂತ ತಾವು ಹೇಳಿದ್ರಿ. ಆದ್ರೆ, ತಾವು ಕೋಪದಲ್ಲಿ ಶರ್ಟ್ ನ ಹಿಡಿದುಕೊಂಡ್ರಿ. ಅದು ನಿಮಗೂ ಗೊತ್ತು'' ಎಂದು ಸತ್ಯವನ್ನ ಹೊರಗೆ ತರುವ ಪ್ರಯತ್ನವನ್ನ ಸುದೀಪ್ ಮಾಡಿದರು.
ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

ತಪ್ಪನ್ನ ಒಪ್ಪಿಕೊಂಡ ಜಗನ್
''ತಡೆಯುವುದು ಹೇಗೆ, ಹಿಡಿಯುವುದು ಹೇಗೆ'' ಅಂತ ಸುದೀಪ್ ತೋರಿಸಿದಾಗ, ತಮ್ಮ ತಪ್ಪನ್ನ ಜಗನ್ ಒಪ್ಪಿಕೊಂಡರು.
ಧಿಮಾಕು ದೌಲತ್ತಿನ ಜಗನ್ 'ಬಿಗ್ ಬಾಸ್' ಇತಿಹಾಸದಲ್ಲಿಯೇ 'ಕಳಪೆ' ಸ್ಪರ್ಧಿ.!

ಅವಾಯ್ಡ್ ಮಾಡಿ ಎಂದ ಸುದೀಪ್
''ನಮ್ಮ ಜೀವನದಲ್ಲಿ ಎಲ್ಲವೂ ಚೆನ್ನಾಗಿ ಹೋಗುತ್ತಿದೆ ಎನ್ನುವಾಗ, ಕೆಲವನ್ನ ಅವಾಯ್ಡ್ ಮಾಡಬೇಕು ಜಗನ್'' ಎಂದು ಸುದೀಪ್ ಬುದ್ಧಿಮಾತು ಹೇಳಿದರು.
ಹೆಮ್ಮೆಯ ಕನ್ನಡ ಭಾಷೆಗೆ ಅವಮಾನ ಮಾಡಿದ್ರಾ 'ಗಾಂಧಾರಿ' ಜಗನ್ನಾಥ್.?

ಆದ ಘಟನೆ ಬಗ್ಗೆ ಸಮರ್ಥನೆ ಕೊಟ್ಟ ಜಗನ್
''ಮೊದಲೆರಡು ಬಾರಿ ಕೇಳಿಕೊಂಡೆ... ಈ ಬಗ್ಗೆ ವಿವರಣೆ ಕೊಡಲು ನನಗೆ ಇಷ್ಟ ಇಲ್ಲ. ಯಾಕಂದ್ರೆ, ಎಲ್ಲರೂ ನೋಡಿರ್ತಾರೆ. ''ಬಿಟ್ಟುಬಿಡಿ, ಬಿಟ್ಟುಬಿಡಿ'' ಅಂತ ಒಳಗಡೆಯಿಂದಲೇ ಹೇಳುತ್ತಾ ಬಂದೆ. ಆದ್ರೆ, ಅವರು ಕಬ್ಬನ್ನ ಜೋರಾಗಿ ಎಳೆದಾಗ ನನ್ನ ಕೈಗೆ ತುಂಬಾ ನೋವಾಯ್ತು. ಈಗಲೂ ನನಗೆ ನೋವಿದೆ. ಆಚಾರ್ಯ ಅವರಿಗೂ ಅಷ್ಟೊಂದು ಆಕ್ರಮಣಕಾರಿ ಆಟ ಬೇಕಾಗಿರಲಿಲ್ಲ. ಅವರು ಜೋರಾಗಿ ಎಳೆದಾಗ, ನನಗೆ ತಡೆದುಕೊಳ್ಳಲು ಆಗಲಿಲ್ಲ. ತಳ್ಳೋಕೆ ಹೋದಾಗ ಶರ್ಟ್ ಸಿಕ್ತು. ಹೌದು, ಅದನ್ನ ನಾನು ಎಳೆದೆ'' ಎಂದು ಸಮರ್ಥಿಸಿಕೊಂಡರು ಜಗನ್ನಾಥ್ ಚಂದ್ರಶೇಖರ್.
ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!

ಕ್ಷಮೆ ಕೇಳಿದ್ರಂತೆ.!
''ನಾನು ತಪ್ಪು ಮಾಡಿದೆ ಅಂತ ನನಗೆ ಅನಿಸ್ತು. ಹೀಗಾಗಿ ಅವರ ಬಳಿ ಹೋಗಿ ನಾನು ಕ್ಷಮೆ ಕೇಳಿದೆ'' ಎಂದರು ಜಗನ್

ಜನರ ಭಾವನೆ ಬೇರೆ ಆಗಿದೆ
''ಮೂರು ವಾರಗಳ ಕಾಲ, ತಾವು ಎಲ್ಲಿ ಕಣ್ಣನ್ನ ದೊಡ್ಡದಾಗಿ ಬಿಡುವ ಅವಶ್ಯಕತೆ ಇರಲಿಲ್ವೋ.... ಅಲ್ಲೆಲ್ಲ ಮಾಡಿಬಿಟ್ಟಿದ್ದೀರಾ. ನಿಮಗೆ ಕರ್ಮದ ಬಗ್ಗೆ ನಂಬಿಕೆ ಇದ್ಯಾ.?'' ಅಂತ ಸುದೀಪ್ ಕೇಳಿದಾಗ, ''ಹೌದು'' ಎಂದು ಜಗನ್ ಒಪ್ಪಿಕೊಂಡರು.
ಆಗ, ''ಅದೇ ನಿಮ್ಮನ್ನ ಹಿಡಿದುಕೊಳ್ತು ಅನಿಸ್ತು ಈ ಬಾರಿ. ಯಾಕಂದ್ರೆ ಹಿಂದೆ ಕೆಲವು ತಪ್ಪು ನಡೆದಿರುತ್ತದೆ. ಅದರಿಂದ ಜನರ ಭಾವನೆ ಬೇರೆ ಆಗುತ್ತೆ. ಸ್ವಲ್ಪ ಹುಷಾರು.... ನೀವು ನಡೆದುಕೊಳ್ಳುತ್ತಿರುವ ರೀತಿಯಲ್ಲಿ ಪ್ರಾಮಾಣಿಕತೆ ಬಗ್ಗೆ ಎರಡು ಮಾತಿಲ್ಲ. ಟಾಸ್ಕ್ ಬಂದಾಗ ರೋಷಾವೇಷ ಇದ್ದದ್ದೇ. ಆದರೆ, ಇಷ್ಟೊಂದು ಬೇಕಾ.?'' ಅಂತ ಸುದೀಪ್ ಪ್ರಶ್ನಿಸಿದರು.

ಸುದೀಪ್ ಕೊಟ್ಟ ಪ್ರಾಮಾಣಿಕವಾದ ಅಭಿಪ್ರಾಯ
''ಏನ್ ಮಾಡ್ತೀರಾ.?'' ಅಂತ ಜಗನ್ ಹೇಳಿದಕ್ಕೆ, ''ನಿಮಗೆ ಬಿಡ್ತೀನಿ. ಬರೀ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಅಲ್ಲ. ಯು ಹ್ಯಾವ್ ಎ ಲಾಂಗ್ ವೇ ಟು ಗೋ... ಇದು ನನ್ನ ಪ್ರಾಮಾಣಿಕವಾದ ಅಭಿಪ್ರಾಯ'' ಅಂತ ಜಗನ್ ಗೆ ಸುದೀಪ್ ಬುದ್ಧಿ ಹೇಳಿದರು.