ತಪ್ಪಿನ ಅರಿವಾದ ಮೇಲೆ ಸುದೀಪ್ ಮುಂದೆ ಚೈತ್ರಗೆ ಕ್ಷಮೆ ಕೇಳಿದ ಸುಜಾತ.!

Recommended Video

Bigg Boss Kannada 7 : Sujatha apologizes Chaitra Kotur for apple matter.

'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಎರಡನೇ ವಾರ ದೊಡ್ಡ ಗಲಾಟೆ ಆಗಿದ್ದು ಒಂದು ಆಪಲ್ ವಿಚಾರಕ್ಕೆ. ರಾತ್ರೋರಾತ್ರಿ ಹೊಟ್ಟೆ ಹಸಿವಾದಾಗ, ಚೈತ್ರ ಕೋಟೂರು ಒಂದು ಆಪಲ್ ತಿಂದಿದ್ದರು. ಅದು ಅಡುಗೆ ಮನೆಯ ತಂಡದಲ್ಲಿದ್ದ ಚಂದನ್ ಆಚಾರ್ ಗೆ ತಿಳಿಸಿ ಒಂದು ಆಪಲ್ ತೆಗೆದುಕೊಂಡಿದ್ದರು ಚೈತ್ರ. ಅಲ್ಲದೇ, ಚಂದನ್ ಆಚಾರ್, ರಾಜು ತಾಳಿಕೋಟೆ ಮತ್ತು ಕುರಿ ಪ್ರತಾಪ್ ಜೊತೆಗೂ ಚೈತ್ರ ಕೋಟೂರು ಒಂದು ಆಪಲ್ ನ ಹಂಚಿಕೊಂಡಿದ್ದರು.

ಈ ವಿಚಾರ ಸುಜಾತ ಕಿವಿಗೆ ಬಿದ್ದ ಮೇಲೆ ದೊಡ್ಡ ರಂಪ ಆಗಿತ್ತು. ''ಕಾಮನ್ ಸೆನ್ಸ್ ಇಲ್ಲ.. ಕದ್ದು ತಿನ್ನುತ್ತಾರೆ'' ಅಂತೆಲ್ಲಾ ಚೈತ್ರ ಕೋಟೂರು ಮೇಲೆ ಸುಜಾತ ಕೂಗಾಡಿದ್ದರು.

ಇದೇ ಟಾಪಿಕ್ ಕುರಿತಾಗಿ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಪಂಚಾಯಿತಿ ನಡೆಸಿದರು. ಸುದೀಪ್ ಆಡಿದ ಮಾತುಗಳಿಂದ ತಮ್ಮ ತಪ್ಪು ಅರಿತ ಸುಜಾತ, ಚೈತ್ರ ಕೋಟೂರುಗೆ ಕ್ಷಮೆ ಕೇಳಿದರು. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಸುಜಾತಗೆ ಬಂತು ವೂಟ್ ಪ್ರಶ್ನೆ

ಸುಜಾತಗೆ ಬಂತು ವೂಟ್ ಪ್ರಶ್ನೆ

ಕೊಡಚಾದ್ರಿ ಮೂಲದ ಪ್ರವೀಣಾ ಎಂಬುವರು ಜರ್ಮನಿಯಿಂದ ಕಳುಹಿಸಿರುವ ವಿಡಿಯೋದಲ್ಲಿ, ''ಒಂದು ಸೇಬಿಗೆ ಅಷ್ಟೊಂದು ದೊಡ್ಡ ಗಲಾಟೆ ಮಾಡುವ ಅವಶ್ಯಕತೆ ಇತ್ತಾ.? ನಿಮಗೆ ಆಪ್ತವಾಗಿರುವವರು ತಿಂದಿದ್ದರೆ, ಇಷ್ಟು ದೊಡ್ಡದಾಗಿ ಜಗಳ ಮಾಡುತ್ತಿದ್ರಾ.?'' ಎಂದು ಸುಜಾತಗೆ ಪ್ರಶ್ನೆ ಕೇಳಿದರು.

ಸುಜಾತಾ ಕೊಟ್ಟ ಉತ್ತರ ಏನು.?

ಸುಜಾತಾ ಕೊಟ್ಟ ಉತ್ತರ ಏನು.?

''ಯಾರೇ ಆಗಿದ್ದರೂ ಖಂಡಿತ ಹೀಗೆ ಮಾಡುತ್ತಿದ್ದೆ. ಕೊಟ್ಟಿರುವ ಹಣ್ಣು ಎಲ್ಲರಿಗೂ ಸಮನಾಗಿ ಭಾಗ ಮಾಡಬೇಕು ಅನ್ನೋದು ನನ್ನ ಅನಿಸಿಕೆ'' ಎಂದರು ಸುಜಾತ.

ಚೈತ್ರ ಹೇಳಿದ್ದೇನು.?

ಚೈತ್ರ ಹೇಳಿದ್ದೇನು.?

''ನನಗೆ ಹುಷಾರಿರಲಿಲ್ಲ. ವೈಯುಕ್ತಿಕ ಸಮಸ್ಯೆ ಇತ್ತು. ಹೊಟ್ಟೆ ನೋವಿದ್ದ ಕಾರಣ ಆಪಲ್ ತಿಂದೆ. ನಾನು ಕದ್ದು ತಿನ್ನಲಿಲ್ಲ. ಚಂದನ್ ಇರುವುದು ಕಿಚನ್ ಡಿಪಾರ್ಟ್ಮೆಂಟ್ ನಲ್ಲಿ. ಹೀಗಾಗಿ ಅವರಿಗೆ ಹೇಳಿ ಆಪಲ್ ತೆಗೆದುಕೊಂಡೆ'' ಎಂದರು ಚೈತ್ರ ಕೋಟೂರು

ಸುದೀಪ್ ಏನಂದರು.?

ಸುದೀಪ್ ಏನಂದರು.?

''ಆಪಲ್ ಯಾವಾಗ ತಿನ್ನಬೇಕು, ಯಾವಾಗ ತಿನ್ನಬಾರದು ಎಂಬ ರೂಲ್ ಯಾರದ್ದು.? ಸೇಬಿನ ಮೇಲೆ ಎಲ್ಲರಿಗೂ ಸಮನಾಗಿ ಹಕ್ಕಿದೆ. ಯಾರಿಗೆ ಯಾವಾಗ ತಿನ್ನಬೇಕು ಅನ್ಸುತ್ತೋ, ಆಗ ತಿನ್ನುತ್ತಾರೆ. ನಗುಮುಖದಲ್ಲೇ ಚೈತ್ರಗೆ 'ನಿಮ್ಮ ಲೆಕ್ಕದಲ್ಲಿ ಒಂದು ಆಪಲ್ ಕಮ್ಮಿ ಆಗಿದೆ' ಎಂದು ಹೇಳಿದ್ದರೆ ಇಷ್ಟೊಂದು ದೊಡ್ಡ ಗಲಾಟೆ ಆಗುತ್ತಿರಲಿಲ್ಲ'' ಎನ್ನುತ್ತ ಸುಜಾತಗೆ ಸುದೀಪ್ ಬಿಸಿ ಮುಟ್ಟಿಸಿದರು.

ಕ್ಷಮೆ ಕೇಳಿದ ಸುಜಾತ

ಕ್ಷಮೆ ಕೇಳಿದ ಸುಜಾತ

ಸುದೀಪ್ ಆಡಿದ ಮಾತುಗಳನ್ನು ಕೇಳಿ, ''ಹೌದು.. ಈ ತರಹ ಮಾಡಬಹುದಿತ್ತು. ಐ ಆಮ್ ಸಾರಿ ಚೈತ್ರ.. ನಾನು ತಪ್ಪು ಮಾಡಿದೆ'' ಎಂದು ಚೈತ್ರ ಬಳಿ ಸುಜಾತ ಕ್ಷಮೆ ಕೇಳಿದರು.

ಟಾರ್ಗೆಟ್ ಆದ ಸುಜಾತ

ಟಾರ್ಗೆಟ್ ಆದ ಸುಜಾತ

''ಹೆಚ್ಚು ಕಿರುಚಾಡುತ್ತಾರೆ'' ಅಂತ ಸುಜಾತ ಕಡೆ ಶೈನ್ ಶೆಟ್ಟಿ, ಚಂದನಾ, ಕಿಶನ್ ಬೆಟ್ಟು ಮಾಡಿ ತೋರಿಸಿದ ಮೇಲೆ ''ನನ್ನ ವಾಯ್ಸ್ ತುಂಬಾ ಜೋರು. ಇನ್ಮೇಲೆ ಮೆಲ್ಲಗೆ ಮಾತನಾಡಲು ಪ್ರಯತ್ನ ಪಡುವೆ'' ಎಂದರು ಸುಜಾತ. ಆಡಿದ ಮಾತಿನಂತೆ ಇನ್ಮುಂದೆ ಸುಜಾತ ಬದಲಾಗುತ್ತಾರಾ, ನೋಡೋಣ.

More from Filmibeat

English summary
Bigg Boss Kannada 7: Day 13: Sujatha apologizes Chaitra Kotur in front of Kiccha Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X