Don't Miss!
- Sports IPL 2024: ಚಿನ್ನಸ್ವಾಮಿಯಲ್ಲಿ ಡಾಗ್ ಔಟ್ ವಲಯ ನಿರ್ಮಾಣ? ಇದರ ಲಾಭವೇನು?
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಸಾಮ್ರಾಜ್ಯದಲ್ಲಿ 'ರಾಜ' ಜೈಜಗದೀಶ್ ದರ್ಬಾರ್.!
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಮೂರನೇ ವಾರ ಕ್ಯಾಪ್ಟನ್ ಆಯ್ಕೆ ನಡೆದಿಲ್ಲ. ಕ್ಯಾಪ್ಟನ್ ಬದಲಾಗಿ 'ಬಿಗ್ ಬಾಸ್' ಮನೆಯಲ್ಲಿ ರಾಜನಾಗಿ ಜೈಜಗದೀಶ್ ದರ್ಬಾರ್ ನಡೆಸುತ್ತಿದ್ದಾರೆ.
ಈ ವಾರ 'ಬಿಗ್ ಬಾಸ್' ಕೊಟ್ಟಿರುವ ವಿಶೇಷ ಚಟುವಟಿಕೆ ಅನ್ವಯ ಪ್ರತಿದಿನ ಒಂದೊಂದು ಯುದ್ಧ ಘೋಷಣೆ ಆಗಲಿದೆ. ಗೆದ್ದ ಸದಸ್ಯ ಮುಂದಿನ ಯುದ್ಧ ಘೋಷಣೆ ಆಗುವವರೆಗೂ ರಾಜ ಅಥವಾ ರಾಣಿಯಾಗಿ ದರ್ಬಾರ್ ಮಾಡಬೇಕು.
ಅಂದು ವಿಜಯಲಕ್ಷ್ಮಿ ಸಿಂಗ್ ರನ್ನ ಮದುವೆ ಆಗುವುದು ಜೈಜಗದೀಶ್ ಗೆ ಗೊತ್ತೇ ಇರಲಿಲ್ಲ.!
ಅದರಂತೆ ನಡೆದ ಮೊದಲ ಯುದ್ಧದಲ್ಲಿ ಜೈಜಗದೀಶ್ ವಿಜೇತರಾದರು. ಗುರಿ ನಿಖರತೆ ಮತ್ತು ಏಕಾಗ್ರತೆ ಪರೀಕ್ಷೆಯಲ್ಲಿ ಜೈಜಗದೀಶ್ ಪಾಸ್ ಆದರು. ಹೀಗಾಗಿ, ಸದ್ಯ ಇಡೀ 'ಬಿಗ್ ಬಾಸ್' ಸಾಮ್ರಾಜ್ಯ ಜೈಜಗದೀಶ್ ಕೈಯಲ್ಲಿದೆ.
ಜೈಜಗದೀಶ್ 'ರಾಜ'ನಾಗಿ ಇರುವುದರಿಂದ ಇತರೆ ಸ್ಪರ್ಧಿಗಳ ಜೊತೆಗೆ 'ಬಿಗ್ ಬಾಸ್' ಮಾತನಾಡುತ್ತಿಲ್ಲ. ಜೈಜಗದೀಶ್ ಇಚ್ಛೆ ಅನುಸಾರ 'ಬಿಗ್ ಬಾಸ್' ಮನೆಯಲ್ಲಿ ಅಡುಗೆ ಮಾಡಬೇಕು. ರಾಜ ಜೈಜಗದೀಶ್ ಗೆ ಚಿನ್ನದ ಬಟ್ಟಲಿನಲ್ಲಿ ಸ್ಪರ್ಧಿಗಳು ಊಟ ಮಾಡಿಸಬೇಕು.
ಕನ್ನಡದ ಆ 'ಸೂಪರ್ ಸ್ಟಾರ್' ನೆರವಿನಿಂದ ಜೈಜಗದೀಶ್ ಮೊದಲ ಮದುವೆ ಆಗಿತ್ತು.!
ಕುರಿ ಪ್ರತಾಪ್ ರನ್ನ ಮಂತ್ರಿಯಾಗಿ ಜೈಜಗದೀಶ್ ಆಯ್ಕೆ ಮಾಡಿಕೊಂಡಿದ್ದಾರೆ. ಅಂಗರಕ್ಷಕರಾಗಿ ಶೈನ್ ಶೆಟ್ಟಿ ಮತ್ತು ಕಿಶನ್ ಇದ್ದಾರೆ. ಸದ್ಯಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಜೈಜಗದೀಶ್ ದರ್ಬಾರ್ ನಡೆಯುತ್ತಿದೆ. ಮತ್ತೆ ಯುದ್ಧ ಘೋಷಣೆ ಆಗುವವರೆಗೂ ರಾಜನ ಸ್ಥಾನದಲ್ಲಿ ಜೈಜಗದೀಶ್ ಖಾಯಂ.