ಬಿಗ್ಬಾಸ್: 2ನೇ ದಿನವೇ ನಾಮಿನೇಟ್ ಆದರು 5 ಮಂದಿ, ಹೊರಗೆ ಹೋಗುವವರು ಯಾರು?
ಬಿಗ್ಬಾಸ್ ಆರಂಭವಾದ ಎರಡನೇ ದಿನ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು. ಬಿಗ್ಬಾಸ್ ಮನೆ ಪ್ರವೇಶಿಸಿ ಉತ್ಸಾಹದಿಂದ ಕುಣಿಯುತ್ತಿದ್ದ ಸ್ಪರ್ಧಿಗಳನ್ನು ನೆಲಕ್ಕಿಳಿಯುವಂತೆ ಮಾಡಿತು.
ಎಲ್ಲರ ಎದುರೇ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡುವಂತೆ ಬಿಗ್ಬಾಸ್ ಹೇಳಿದರು. ಅಂತೆಯೇ ಪ್ರತಿಯೊಬ್ಬ ಸದಸ್ಯರು ಎಲ್ಲ ಸ್ಪರ್ಧಿಗಳ ಎದುರು ಇಬ್ಬರ ಹೆಸರನ್ನು ಮನೆಯಿಂದ ಹೊರಹೋಗಲು ನಾಮಿನೇಟ್ ಮಾಡಿ ಕಾರಣ ಹೇಳುವಂತೆ ಸೂಚಿಸಲಾಯಿತು.
ನಾಮಿನೇಟ್ ಮಾಡಿದ ಬಹುತೇಕರು ಶಂಕರ್ ಅಶ್ವತ್ಥ್ ಅವರ ಹೆಸರು ಹೇಳಿದರು. ಅದರ ನಂತರ ಹೆಚ್ಚು ಮಂದಿ ನಾಮಿನೇಟ್ ಮಾಡಿದ್ದು ನಟಿ ನಿಧಿ ಸುಬ್ಬಯ್ಯ, ಪಾವಗಡ ಮಂಜು, ಪ್ರಶಾಂತ್ ಸಂಬರ್ಗಿ, ಟಿಕ್ಟಾಕ್ ಸ್ಟಾರ್ ಧನುಶ್ರಿ ಹೆಸರನ್ನು ಹೆಚ್ಚು ಮಂದಿ ನಾಮಿನೇಟ್ ಮಾಡಿದರು.

ಆದರೆ ಮನೆಯ ನಾಯಕನಾಗಿ ಆಯ್ಕೆ ಆದ ಬ್ರೋ ಗೌಡ ಅವರಿಗೆ ವಿಶೇಷ ಅಧಿಕಾರ ನೀಡಿದ ಬಿಗ್ಬಾಸ್, ನಾಮಿನೇಟ್ ಆದ ಒಬ್ಬರನ್ನು ಉಳಿಸುವ ಅಧಿಕಾರ ಕೊಟ್ಟರು. ಅಧಿಕಾರ ಬಳಸಿಕೊಂಡ ನಾಯಕ ಬ್ರೋ ಗೌಡ ಶಂಕರ್ ಅಶ್ವತ್ಥ ಅವರನ್ನು ಉಳಿಸಿದರು.
ಅಂತಿಮವಾಗಿ ನಿಧಿ ಸುಬ್ಬಯ್ಯ, ಪಾವಗಡ ಮಂಜು, ಪ್ರಶಾಂತ್ ಸಂಬರ್ಗಿ, ಟಿಕ್ಟಾಕ್ ಸ್ಟಾರ್ ಧನುಶ್ರಿ, ನಿರ್ಮಲಾ ಈ 5 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇದರ ಜೊತೆಗೆ ಸ್ಪರ್ಧಿ ನಿರ್ಮಲಾ ಅವರು ಆಟದಲ್ಲಿ ಸೋತ ಕಾರಣ ಮನೆಯಿಂದ ಹೊರಗೆ ಹೋಗಲು ನೇರವಾಗಿ ನಾಮಿನೇಟ್ ಆದರು. ಅಲ್ಲಿಗೆ ಒಟ್ಟು ನಾಲ್ಕು ಮಂದಿ ಸ್ಪರ್ಧಿಗಳು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದಾರೆ.


Click it and Unblock the Notifications











