twitter
    For Quick Alerts
    ALLOW NOTIFICATIONS  
    For Daily Alerts

    BBK9: ರಾಜಣ್ಣನ ನಡವಳಿಕೆ ಮನೆಯ ಹೆಣ್ಣು ಮಕ್ಕಳಿಗೆ ಕಿರಿಕಿರಿ ಆಗ್ತಾ ಇರೋದ್ಯಾಕೆ?

    By ಎಸ್ ಸುಮಂತ್
    |

    ಟಾಸ್ಕ್ ಆಡುವಾಗ ಅಥವಾ ಏನನ್ನೋ ಬುದ್ದಿ ಹೇಳುವಾಗಲೂ ರಾಜಣ್ಣ ಏರು ಧ್ವನಿಯಲ್ಲಿ ಮಾತನಾಡುತ್ತಾರೆ. ಏರು ಧ್ವನಿಯ ಸಮಸ್ಯೆ ಮನೆಯವರಿಗೆ ಸಮಸ್ಯೆಯ ರೀತಿ ಕಾಣುವುದಿಲ್ಲ. ಆದರೆ ಮೈಮೇಲೆ ಬೀಳುವುದಿದೆಯಲ್ಲಾ ಅದನ್ನ ಮನೆಯ ಹೆಣ್ಣು ಮಕ್ಕಳಿಂದ ಸಹಿಸುವುದಕ್ಕೆ ಆಗುತ್ತಿಲ್ಲ. ಅದನ್ನೆ ಇಂದಿನ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಚರ್ಚೆಯಾಗಿದೆ.

    ಈ ವಾರ ಬಣ್ಣ ಬಳಿಯುವ ಟಾಸ್ಕ್ ನಲ್ಲಿ ಅಮೂಲ್ಯ ಮತ್ತು ದೀಪಿಕಾ ರೊಚ್ಚಿಗೇಳುತ್ತಾರೆ. ಆ ವೇಳೆ ರಾಜಣ್ಣ ಕ್ಯಾಪ್ಟನ್ ಆದವರು ಜೋರು ಧ್ವನಿಯಲ್ಲಿ ಮಾತನಾಡಿದ್ದಲ್ಲದೆ, ಮೈಮೇಲೆ ಬೀಳುವಂತೆ ಆಡುತ್ತಾರೆ. ಆಗ ದಿವ್ಯಾ ಮಧ್ಯೆ ಬಂದರು ರಾಜಣ್ಣ ದಿವ್ಯಾರನ್ನು ತಳಿದ್ದು ಇವತ್ತಿನ ಜೋರು ಚರ್ಚೆಗೆ ಕಾರಣವಾಗಿದೆ.

    ಮೈಮೇಲೆ ಬೀಳುತ್ತಾರಾ ರಾಜಣ್ಣ..?

    ಮೈಮೇಲೆ ಬೀಳುತ್ತಾರಾ ರಾಜಣ್ಣ..?


    ಅವತ್ತು ಟಾಸ್ಕ್ ವಿಚಾರದಲ್ಲಿ ನಡೆದ ಘಟನೆ ಬಗ್ಗೆ ಸುದೀಪ್ ದಿವ್ಯಾ ಬಳಿ ಕೇಳಿದ್ದಾರೆ. ಆಗ ದಿವ್ಯಾ, "ಇದೇ ರಾಜಣ್ಣ ಅವರ ಹೆಂಡತಿಗೆ ಕಾಲಿಗೆ ಬಿದ್ದಾಗ ಅಪ್ರಿಷಿಯೇಟ್ ಮಾಡಿದ್ದೆ ಸರ್. ಒಳ್ಳೆಯದ್ದನ್ನು ಹೇಳಿದಾಗ ಕೇಳಿಸಿಕೊಳ್ಳುತ್ತಾರೆ. ಆದರೆ ಏನೋ ಇರಿಟೇಟ್ ಆಗುತ್ತೆ ಎನ್ನುವಾಗ ಕೇಳಿಸಿಕೊಳ್ಳಲ್ಲ. ಕೋಪ ಬಂದಾಗ ಹುಡುಗಿನಾ ಹುಡುಗನಾ ಅಂತ ನೋಡಲ್ಲ. ತಳ್ಳಿ ಬಿಡುತ್ತಾರೆ. ಒಮ್ಮೆ ಅನುಪಮಾ ವಿಚಾರದಲ್ಲೂ ಏನೋ ಹೇಳುವಾಗಲೂ ಅದೇ ರೀತಿ ಮಾಡಿಬಿಟ್ಟರು. ಅದೇ ಥರದ ಘಟನೆ ಮೊನ್ನೆ ನಡೆಯುತ್ತೆ. ದೀಪಿಕಾ ಬಳಿ ಮಾತನಾಡುವಾಗ ಕೋಪದಲ್ಲಿ ನುಗ್ಗಿ ಹೋಗುತ್ತಾರೆ. ಆಗ ನಾನು ಮಧ್ಯೆ ಹೋದೆ. ನಾನು ಹುಡುಗಿ ಎಂದು ನೋಡದೆ ನನ್ನನ್ನು ತಳ್ಳುತ್ತಾರೆ. ಅಲ್ಲಿ ಹೋಗಿ ನಿಲ್ಲು ಅನ್ನುತ್ತಾರೆ. ಇವರೇನು ನಮ್ಮ ಅಪ್ಪಾಜಿನಾ. ಇಬ್ಬರು ಕಂಟೆಸ್ಟೆಂಟ್ ಅಷ್ಟೆ. ಅವರು ಎಲ್ಲರನ್ನು ತಂಗಿ ರೀತಿಯಲ್ಲಿ ನೋಡುತ್ತಾರೆ. ಆದರೆ ಅವರ ನಡವಳಿಕೆ ಆ ರೀತಿ ಇರುತ್ತೆ" ಎಂದಿದ್ದಾರೆ.

    ಅನುಪಮಾ ಹೇಳಿದ ದೂರೇನು..?

    ಅನುಪಮಾ ಹೇಳಿದ ದೂರೇನು..?

    ಇನ್ನು ರಾಜಣ್ಣನ ಬಗ್ಗೆ ಮಾತಾಡಿದ ಅನುಪಮಾ, "ಕಾವ್ಯಾ ಕ್ಯಾಪ್ಟನ್ ಆಗಿದ್ದಾಗ ಏನು ಹೇಳಿದ್ರೋ ಅದನ್ನೇ ನಾವೂ ನಿಮಗೆ ಹೇಳುವುದಕ್ಕೆ ಹೊರಟಿದ್ದು. ಈ ರೀತಿಯಾಗಿ ನಡೆದುಕೊಂಡಿದ್ದು ನಂಗೆ ಇಷ್ಟವಾಗಲಿಲ್ಲ. ಹೊರಗೆ ಹೋಗಿ ನೋಡಿ ನಾನು ಹೆಣ್ಣು ಮಕ್ಕಳನ್ನು ಎಷ್ಟು ಗೌರವ ಕೊಡುತ್ತೀನಿ ಅಂತಾರೆ. ಆದ್ರೆ ನಾವಿಲ್ಲಿ ಹೊರಗಡೆಯ ವಿಚಾರ ಮಾತನಾಡಲೇ ಇಲ್ಲ" ಎಂದಿದ್ದಾರೆ

    ದೀಪಿಕಾಗೂ ಇದೆ ಕೋಪ

    ದೀಪಿಕಾಗೂ ಇದೆ ಕೋಪ

    ಇದೇ ವಿಚಾರವನ್ನು ದೀಪಿಕಾ ಬಳಿ ಕೇಳಿದ್ದಾರೆ. "ಮಾತನಾಡುವಾಗ ನಾವೂ ಅದನ್ನೇ ಹೇಳುತ್ತೀವಿ ಕಿರುಚಬೇಡಿ ಅಂತ. ಕಿರುಚದೇ ಇರುವುದಕ್ಕೆ ರೆಡಿಯೇ ಇರಲಿಲ್ಲ. ನನ್ ಹತ್ರ ಬಂದ್ರು ಜಗಳ ಮಾಡುವುದಕ್ಕೆ. ದಿವ್ಯಾ ಬಳಿ ಹೋದ್ರೂ. ಆ ಕಡೆ ಹೋದ್ರು ಈ ಕಡೆ ಬಂದ್ರು. ಒಟ್ನಲ್ಲಿ ಎಲ್ಲರ ಬಳಿಯೂ ಜಗಳ. ಆಗ ನಾನು ಗೇಮ್ ಆಳಾಗುತ್ತೆ ಅಂತ ಹೋಗಿ ಹೇಳಿದೆ. ನೀವೂ ಹೇಳಿ. ಆದರೆ ಅದನ್ನೇ ನಿಧಾನಕ್ಕೆ ಹೇಳಿ. ಯಾಕೆ ಕಿರುಚಿ ಹೇಳ್ತೀರಾ. ಅಲ್ಲೂ ವಾದಕ್ಕೆ ಇಳಿದ್ರು. ಅದಕ್ಕೆ ನಾವೂ ಬಿಟ್ಟು ಬಿಟ್ಟೆವು. ಅಷ್ಟು ಹತ್ರದಲ್ಲಿ ಬಂದು ಮಾತಾಡಬೇಡಿ ಅಂತ ಹೇಳಿದ್ರು ಅದನ್ನು ಕೇಳುವುದಕ್ಕೆ ಅವರು ರೆಡಿ ಇರಲಿಲ್ಲ" ಎಂದಿದ್ದಾರೆ.

    ರಾಜಣ್ಣ ಕೊಟ್ಟ ಕ್ಲಾರಿಟಿ ಏನು..?

    ರಾಜಣ್ಣ ಕೊಟ್ಟ ಕ್ಲಾರಿಟಿ ಏನು..?

    ಇದಕ್ಕೆ ರಾಜಣ್ಣ ಮಾತನಾಡಿ, "ನನ್ನದು ತಪ್ಪಿರಬಹುದು ಸರ್ ಅದನ್ನು ಒಪ್ಪಿಕೊಳ್ತೇನೆ. ಆದರೆ ನಾನು ಆರಾಮವಾಗಿಯೇ ಮಾತನಾಡುತ್ತೀನಿ. ಆದರೆ ಅವರೇ ಟ್ರಿಗರ್ ಮಾಡುವುದು. ಆ ಮೂಮೆಂಟ್ ನ ಹೀಟ್ ಮಾಡುವ ಸನ್ನಿವೇಶ ಮಾಡಿದಾಗ ಆ ರೀತಿ ಆಯ್ತು ಸರ್" ಎಂದಿದ್ದಾರೆ.

    ಹೆಂಡತಿ ಮಾತು ನೆನಪಿಸಿದ ಕಿಚ್ಚ

    ಹೆಂಡತಿ ಮಾತು ನೆನಪಿಸಿದ ಕಿಚ್ಚ

    ಕಿಚ್ಚ ಸುದೀಪ್ ಬುದ್ದಿ ಹೇಳಿದ್ದು, "ನೀವೆ ಹೇಳಿದ್ರಿ ಎಲ್ಲಾ ಮುಗಿದು ಹೋದ ಮೇಲೆ ಮತ್ತೆ ಯಾಕೆ ಬಂತು ಅಂತ. ಏನು ಮುಗಿದಿರಲಿಲ್ಲ ಸರ್. ಪ್ರಶ್ನೆಗಳು ಇನ್ನು ಹಾಗೆ ಇತ್ತು. ಕೆಲವರಿಗೆ ಹೇಳುವುದು ಇತ್ತು. ಯಾವಾಗ ಟಾಸ್ಕ್ ಮುಗಿದ ಮೇಲೆ ಏನೇನೋ ಹೋಗೊ ಇನ್ನೆನೋ ಆಗಿ ಹೋಗುತ್ತೆ. ನೀವೂ ರೂಪೇಶ್ ಶೆಟ್ಟಿ ಕೂತು ಬೇರೆ ಬೇರೆ ಮಾತಾಡ್ತೀರ. ಸರ್ ನಿಮಗೆ ಇಷ್ಟವಾದವರು ಬಂದು ಹೇಳಿ ಹೋಗಿದ್ದಾರೆ. ಟೋನ್ ಚೇಂಜ್ ಮಾಡಿಕೊಳ್ಳಿ ಅಂತ. ಇನ್ನುಳಿದದ್ದು ನಿಮಗೆ ಬಿಟ್ಟಿದ್ದು ಸರ್" ಎಂದು ಸುದೀಪ್ ಅವರಿಗೆ ಬಿಡುತ್ತಾರೆ.

    English summary
    Bigg Boss Kannada December 10th Episode Written Update. Here is the details about girls complaint On Rupesh Rajanna.
    Sunday, December 11, 2022, 6:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X