twitter
    For Quick Alerts
    ALLOW NOTIFICATIONS  
    For Daily Alerts

    BBK 9: ಕಳಪೆ ತೆಗೆದುಕೊಳ್ಳಲು ಕಷ್ಟ ಪಟ್ಟ ಅಮೂಲ್ಯ - ಅರುಣ್ ಸಾಗರ್; ಮನೆಯವರಿಗೆಲ್ಲಾ ಆತಂಕ!

    By ಎಸ್ ಸುಮಂತ್
    |
    Bigg Boss Kannada December 16th Episode Written Update

    ವಾರಪೂರ್ತಿ ಮನೆಯೊಳಗೆ ಹೇಗೆ ಆಟವಾಡುತ್ತಾರೆ, ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ವಾರದ ಕೊನೆಯಲ್ಲಿ ಸಿಗುವ ಪೋಸ್ಟ್ ಗೆ ಸಹಾಯವಾಗುತ್ತದೆ. ಶುಕ್ರವಾರ ಬಂತು ಎಂದರೆ ಬಿಗ್ ಬಾಸ್ ಮನೆಯಲ್ಲಿ ಕಳಪೆ ಹಾಗೂ ಉತ್ತಮದ ಪ್ರದರ್ಶನವಿರುತ್ತದೆ. ಹಾಗೇ ಹೊಸ ಕ್ಯಾಪ್ಟನ್ ಆಯ್ಕೆ ಕೂಡ ಇರಲಿದೆ.

    ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಮತ್ತು ಕಳಪೆ ಎಂದು ಬಂದಾಗ ಥಟ್ ಅಂತ ಎಲ್ಲರಿಗೂ ಯಾರಾದರೊಬ್ಬರು ಕಳಪೆ ಪಟ್ಟಕ್ಕೆ ರೆಡಿಯಾಗಿ ಕುಳಿತು ಬಿಡುತ್ತಾ ಇದ್ದರು. ಆದರೆ ಈ ವಾರ ಅದು ಹಾಗೇ ಆಗಲೇ ಇಲ್ಲ. ಬದಲಿಗೆ ಅಮೂಲ್ಯ ಮತ್ತು ಅರುಣ್ ಸಾಗರ್ ಅವರಿಗೆ ಕಳಪೆ ಯಾರೆಂದು ಗೊತ್ತಾಗಲೇ ಇಲ್ಲ.

    ಉತ್ತಮ ಸ್ಥಾನಕ್ಕೆ ಹೆಚ್ಚು ಬಾರಿ ನಾಮಿನೇಟ್ ಆದ ರೂಪೇಶ್ ಶೆಟ್ಟಿ

    ಉತ್ತಮ ಸ್ಥಾನಕ್ಕೆ ಹೆಚ್ಚು ಬಾರಿ ನಾಮಿನೇಟ್ ಆದ ರೂಪೇಶ್ ಶೆಟ್ಟಿ

    ರೂಪೇಶ್ ಶೆಟ್ಟಿ ಒಂಥರ ಸಿಕ್ಕಾಪಟ್ಟೆ ತಾಳ್ಮೆ ಇರುವಂತ ವ್ಯಕ್ತಿ. ಟಾಸ್ಕ್ ವಿಚಾರದಲ್ಲೂ ಅದ್ಭುತವಾಗಿ ಆಡುತ್ತಾರೆ. ಈ ವಾರದ ಕ್ಯಾಪ್ಟನ್ ಕೂಡ ಅವರೇ ಆಗಿದ್ದರು. ಕ್ಯಾಪ್ಟನ್ ಆದರೂ ಕೂಡ ಎಲ್ಲಿಯೂ ರೇಗಾಡಲಿಲ್ಲ, ಅಧಿಕಾರ ಚಲಾಯಿಸಲಿಲ್ಲ. ತುಂಬಾ ತಾಳ್ಮೆಯಿಂದ ಎಲ್ಲರನ್ನು ತನ್ನೊಟ್ಟಿಗೆ ಕರೆದುಕೊಂಡು ಹೋದವರು ರೂಪೇಶ್ ಶೆಟ್ಟಿ. ಈ ಕ್ಯಾಪ್ಟೆನ್ಸಿ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿದೆ. ಹೀಗಾಗಿ ಹಲವರು ಇದೇ ವಿಚಾರಕ್ಕೆ ರೂಪೇಶ್ ಶೆಟ್ಟಿಗೆ ಉತ್ತಮ ಕೊಟ್ಟಿದ್ದಾರೆ. ಇನ್ನು ದಿವ್ಯಾ ಅವರ ಎಫರ್ಟ್ ಕೂಡ ಎಲ್ಲರಿಗೂ ಹಿಡಿಸಿದ್ದು, ಅವರಿಗೂ ಉತ್ತಮ ಸಿಕ್ಕಿದೆ.

    ಕಾರಣವೇ ಇಲ್ಲದೆ ಕಳಪೆ ಹೊತ್ತುಕೊಂಡರಾ ಗುರೂಜಿ?

    ಕಾರಣವೇ ಇಲ್ಲದೆ ಕಳಪೆ ಹೊತ್ತುಕೊಂಡರಾ ಗುರೂಜಿ?

    ಇಂದು ಕಳಪೆ ಪಟ್ಟವನ್ನು ಕೊಡುವ ಸರದಿ ಬಂದಾಗ ಅನುಪಮಾ, ರೂಪೇಶ್ ಶೆಟ್ಟಿ, ರಾಕೇಶ್, ಅಮೂಲ್ಯ, ಅರುಣ್ ಸಾಗರ್ ಕಳಪೆ ಪಟ್ಟವನ್ನು ಗುರೂಜಿಗೆ ನೀಡಿದ್ದಾರೆ. ಆದರೆ ಈ ಕಳಪೆಯನ್ನು ರಾಕೇಶ್, ರೂಪೇಶ್ ಮತ್ತು ಅನುಪಮಾ ಒಂದು ಕಾರಣ ಕೊಟ್ಟು ಕಳಪೆಯನ್ನು ನೀಡಿದರು. ಆದರೆ ಅಮೂಲ್ಯ ಮತ್ತು ಅರುಣ್ ಸಾಗರ್ ಒತ್ತಡಕ್ಕೆ ಸಿಲುಕಿ, ನಿಯಮಕ್ಕಾಗಿ ಕಾರಣವೇ ಇಲ್ಲದೆಯೇ ಆಯ್ಕೆ ಮಾಡಿಕೊಂಡ ಹೆಸರು ಅದುವೇ ಆರ್ಯವರ್ದನ್ ಅವರ ಹೆಸರಾಗಿತ್ತು.

    ರಾಜಣ್ಣನ ನಡವಳಿಕೆಗೆ ಕಳಪೆ

    ರಾಜಣ್ಣನ ನಡವಳಿಕೆಗೆ ಕಳಪೆ

    ಈ ವಾರವೂ ರಾಜಣ್ಣನ ನಡವಳಿಕೆಗೆ ಮೈನಸ್ ಪಾಯಿಂಟ್ ಆಗಿದೆ. ಆರ್ಯವರ್ಧನ್ ವಿರುದ್ಧ ನಡೆದುಕೊಂಡ ರೀತಿ, ಅವರು ಸರಿಯಾಗಿಯೇ ಆಟವಾಡಿದರೂ ಕೂಡ ಇಲ್ಲ ಎಂದು ವಾದಿಸಿ, ಅವರ ಮೇಲೆಯೇ ತಪ್ಪಾಕಿದ ರೀತಿ. ಏರು ಧ್ವನಿಯೇ ಈ ಕಳಪೆ ಕೊಡುವುದಕ್ಕೆ ಕಾರಣವಾಗಿತ್ತು.

    ಕಳಪೆ ಕೊಡದೆ ಸತಾಯಿಸಿದ ಅಮೂಲ್ಯ

    ಕಳಪೆ ಕೊಡದೆ ಸತಾಯಿಸಿದ ಅಮೂಲ್ಯ

    ಕಳಪೆ ಎಂದು ಬಂದಾಗ ಯಾವುದಾದರೂ ಸಣ್ಣ ಪಾಯಿಂಟ್ ಆದರೂ ನೆಗೆಟಿವ್ ಕಾಣಬೇಕಾಗುತ್ತದೆ. ಆ ಪಾಯಿಂಟ್ ಇಲ್ಲದೆ ಕಳಪೆಯನ್ನು ಕೊಡುವುದಕ್ಕೆ ಕಷ್ಟ. ಇವತ್ತು ಅಮೂಲ್ಯ ಮತ್ತು ಅರುಣ್ ಸಾಗರ್ ವಿಚಾರದಲ್ಲಿ ಅದೇ ಆಯಿತು. ನಾವೂ ಕಳಪೆ ಕೊಡುವುದಿಲ್ಲ. ನಮಗೆ ನಾವೇ ಕೊಟ್ಟುಕೊಳ್ಳುತ್ತೇವೆ ಎಂದು ಇಬ್ಬರು ಹೇಳಿಕೊಂಡರು. ಆದರೆ ಮನೆಯವರೆಲ್ಲರ ವಿರೋಧ ಎದುರಿಸಬೇಕಾಯಿತು. ಬಿಗ್ ಬಾಸ್ ಮನೆಯಲ್ಲಿ ಅದರದ್ದೇ ಆದಂತ ನಿಯಮವಿದೆ. ನಮಗೂ ಕಳಪೆ ಕೊಡುವುದಕ್ಕೆ ಇಷ್ಟವಿಲ್ಲ. ಆದರೂ ಕೊಡುತ್ತಿದ್ದೀವಿ ಅಲ್ವಾ. ಸೋಮವಾರ ಈ ವಿಚಾರವಾಗಿ ಚರ್ಚೆಯಾಗುವುದು ಬೇಡ. ಸಣ್ಣ ಮಿಸ್ಟೇಕ್ ಸಿಕ್ಕಿದರೂ ಅದನ್ನೇ ಆಧಾರವಾಗಿಟ್ಟುಕೊಂಡು ಕಳಪೆ ಕೊಡಬಹುದು ಎಂದು ಮನವರಿಕೆ ಮಾಡಿದಾಗ, ದಾರಿ ಕಾಣದೆ ಅರುಣ್ ಸಾಗರ್ ಕಳಫೆಯನ್ನು ಗುರೂಜಿಗೆ ನೀಡಿದ್ದಾರೆ. ಅಮೂಲ್ಯ ಕೂಡ ತಮ್ಮ ಕಳಪೆಯನ್ನು ಗುರೂಜಿಗೆ ನೀಡಿದ್ದಾರೆ.

    English summary
    Bigg Boss Kannada December 16th Episode Written Update
    Friday, December 16, 2022, 23:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X