'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.!
Recommended Video

ಬಿಗ್ ಬಾಸ್ ನಿಯಮವನ್ನ ಉಲ್ಲಂಘಿಸಿದ ಕಾರಣಕ್ಕೆ ಮನೆಯ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಮತ್ತು ಸ್ಪರ್ಧಿ ದಿವಾಕರ್ ಗೆ ಬಿಗ್ ಬಾಸ್ ಶಿಕ್ಷೆ ನೀಡಿದ್ದು, ಇದು ಈ ಇಬ್ಬರಿಗೂ ಅಪಾಯ ತಂದಿದೆ.
ಈ ವಾರ ದಿವಾಕರ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಕ್ಯಾಪ್ಟನ್ ಶ್ರುತಿ, ದಿವಾಕರ್ ಗೆ 'ಕಳಪೆ' ಬೋರ್ಡ್ ನೀಡಿದರು. ಆದ್ರೆ, ಕ್ಯಾಪ್ಟನ್ ನೀಡಿದ ಬೋರ್ಡ್ ನ್ನ ದಿವಾಕರ್ ತಿರಸ್ಕರಿಸಿದ್ದು, ಬೋರ್ಡ್ ಹಾಕಿಕೊಳ್ಳದೆ ಬಿಗ್ ಬಾಸ್ ನಿಮಯ ಉಲ್ಲಂಘಿಸಿದರು.
ಅದಕ್ಕಾಗಿ ಕ್ಯಾಪ್ಟನ್ ಮತ್ತು ಸ್ಪರ್ಧಿ ಇಬ್ಬರನ್ನ ಶಿಕ್ಷಿಸಲಾಗಿದ್ದು, ಇವರಿಬ್ಬರ ಹಾದಿಗೂ ಈ ಶಿಕ್ಷೆ ಅಪಾಯವಾಗಿದೆ. ಅಷ್ಟಕ್ಕೂ, ಬಿಗ್ ಬಾಸ್ ಕೊಟ್ಟ ಶಿಕ್ಷೆ ಏನು?

ಶಿಕ್ಷೆಯ ಸೂಚನೆ ಕೊಟ್ಟಿದ್ದ ಬಿಗ್ ಬಾಸ್
ದಿವಾಕರ್ ಅವರು ಕ್ಯಾಪ್ಟನ್ ನೀಡಿದ ಕಳಪೆ ಬೋರ್ಡ್ ಹಾಕಿಕೊಳ್ಳುವಂತೆ ಮನೆಯ ಕ್ಯಾಪ್ಟನ್ ಶ್ರುತಿ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಶಿಕ್ಷೆ ನೀಡಲಾಗುವುದು ಎಂದು ಸೂಚನೆ ಕೊಟ್ಟಿದ್ದರು.

ದಿವಾಕರ್ ಬೋರ್ಡ್ ಹಾಕಿಕೊಳ್ಳಲಿಲ್ಲ
ಕ್ಯಾಪ್ಟನ್ ಶ್ರುತಿ ಹಾಗೂ ಮನೆಯ ಹಲವು ಸದಸ್ಯರು ಸೇರಿ, ದಿವಾಕರ್ ಅವರಿಗೆ ಬೋರ್ಡ್ ಹಾಕಿಕೊಳ್ಳುವಂತೆ ಮನವಿ ಮಾಡಿದರು ದಿವಾಕರ್ ಮಾತ್ರ, ''ನಾನು ಕೆಟ್ಟ ಪ್ರದರ್ಶನ ನೀಡಲಿಲ್ಲ'' ಎಂದು ಬೋರ್ಡ್ ಹಾಕಿಕೊಳ್ಳಲೇ ಇಲ್ಲ.

ನಾಮಿನೇಷನ್ ಶಿಕ್ಷೆ
ಕ್ಯಾಪ್ಟನ್ ಶ್ರುತಿ ಅವರು ದಿವಾಕರ್ ಅವರು 'ಕಳಪೆ' ಬೋರ್ಡ್ ಹಾಕಿಕೊಳ್ಳುವಂತೆ ನೋಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಶ್ರುತಿ ಅವರು ಮುಂದಿನ ವಾರ ಮನೆಯಿಂದ ಹೊರಹೋಗಲು ನೇರವಾಗಿ ನಾಮಿನೇಟ್ ಮಾಡಲಾಯಿತು.

ನಿಯಮ ಉಲ್ಲಂಘಸಿದ್ದಕ್ಕೆ ದಿವಾಕರ್ ಗೂ ದಂಡ
ಇನ್ನು ಬಿಗ್ ಬಾಸ್ ನಿಯಮವನ್ನ ಪರೋಕ್ಷವಾಗಿ ಉಲ್ಲಂಘಸಿದ್ದಕ್ಕೆ ದಿವಾಕರ್ ಅವರನ್ನ ಕೂಡ ನೇರವಾಗಿ ನಾಮಿನೇಟ್ ಮಾಡಲಾಯಿತು.

ಇಬ್ಬರು ನೇರ ನಾಮಿನೇಟ್
ಪ್ರತಿವಾರ ಸೋಮವಾರ ನಾಮಿನೇಷನ್ ಪ್ರಕ್ರಿಯೆ ನಡಯಿತ್ತೆ. ಆದ್ರೆ, ಈ ವಾರದಲ್ಲೇ ಶ್ರುತಿ ಮತ್ತು ದಿವಾಕರ್ ಇಬ್ಬರು ಬಿಗ್ ಬಾಸ್ ಯಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ.


Click it and Unblock the Notifications











