Don't Miss!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಂದನದಲ್ಲಿ ಅಂಧರಿಂದ ವಾರ್ತಾವಾಚನ
ವಾರ್ತೆ ಓದಿ ಇತಿಹಾಸ ಸೃಷ್ಟಿಸಲಿದ್ದು, ದೂರದರ್ಶನದ ಚಂದನ ವಾಹಿನಿ ಇಂಥ ಕಾರ್ಯಕ್ರಮ ರೂಪಿಸಿದ ಮೊದಲ ವಾಹಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬ್ರೈಲ್ ಲಿಪಿ ಕಂಡು ಹಿಡಿದ ಲೂಯಿ ಬ್ರೈಲ್ ಜನ್ಮದಿನದ ಅಂಗವಾಗಿ ಜನವರಿ 4 ರಂದು ಚಂದನ ವಾಹಿನಿಯಲ್ಲಿ ಬೆಳಗ್ಗೆ 7.45 ರಿಂದ ರಾತ್ರಿ 9ರ ವರೆಗೆ ಪ್ರಸಾರವಾಗುವ ಪ್ರತಿ ವಾರ್ತೆಯಲ್ಲಿ ಒಂದು ಸುದ್ದಿಯನ್ನು ದೃಷ್ಟಿ ವಿಕಲಚೇತನರು ಓದಲಿದ್ದಾರೆ.
ದೇವನಹಳ್ಳಿಯ ಮಂಜುನಾಥ್, ಚಾಮರಾಜನಗರದ ಶ್ರೀನಿವಾಸಮೂರ್ತಿ ಹಾಗೂ ಅಶೋಕ್ ಬೆಳಗ್ಗೆ 7.45, 11, ಮಧ್ಯಾಹ್ನ 3 ಸಂಜೆ ಮತ್ತು 7 ಗಂಟೆ ಹಾಗೂ ರಾತ್ರಿ 9 ರ ವಾರ್ತೆಯಲ್ಲಿ ಸುದ್ದಿ ಓದಲಿದ್ದಾರೆ.
ಮಿತ್ರ ಜ್ಯೋತಿ ಸ್ವಯಂ ಸೇವಾ ಸಂಘಟನೆಯ ಮುಖ್ಯಸ್ಥ ಮಧು ಸಿಂಘಾಲ್ ಅವರ ಕಾರ್ಯದಿಂದ ಉತ್ತೇಜಿತರಾಗಿ ದೂರದರ್ಶನ ನಿರ್ದೇಶಕ ಮಹೇಶ್ ಜೋಶಿ, ವಿಕಲಚೇತರ ಪ್ರತಿಭೆ ಹೊರಬರಲು ವೇದಿಕೆ ಅಗತ್ಯ ಎಂಬುದನ್ನು ಮನಗಾಣಿಸಲು ಮುಂದಾಗಿದ್ದಾರೆ. ವಿಕಲಚೇತನರು ಹೆಚ್ಚು ಬುದ್ಧಿಮತ್ತೆ ಹೊಂದಿರುತ್ತಾರೆ. ಸಮಾಜ ಅವರೊಟ್ಟಿಗಿದೆ ಎನ್ನುವ ಸಂದೇಶ ನೀಡುವುದು ಇದರ ಉದ್ದೇಶ. ವಿಶ್ವದ ಯಾವುದೇ ವಾಹಿನಿ ದೃಷ್ಟಿ ವಿಕಲಚೇತನರಿಂದ ಸುದ್ದಿ ಓದಿಸಿಲ್ಲ. ಲೂಯಿ ಬ್ರೈಲ್ ರ 200ನೇ ವರ್ಷಾಚರಣೆಗೆ ಇದಕ್ಕಿಂತ ಉತ್ತಮ ಕೊಡುಗೆ ಏನಿದೆ ಎನ್ನುತ್ತಾರೆ ಜೋಶಿ.
(ಸ್ನೇಹ ಸೇತು: ವಿಜಯ ಕರ್ನಾಟಕ)