Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲ್ಲರೂ ಅಂದುಕೊಂಡ್ಹಾಗೆ ಆಗಿಲ್ಲ: ಡೌಟ್ ಕ್ಲಿಯರ್ ಮಾಡಿದ 'ಬಿಗ್ ಬಾಸ್'!
''ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಗಳು ಕದ್ದು-ಮುಚ್ಚಿ ಮೊಬೈಲ್ ಬಳಸುತ್ತಿರಬಹುದು. ಯಾರಿಗೂ ಗೊತ್ತಾಗದ ಹಾಗೆ ತಮ್ಮ-ತಮ್ಮ ಮನೆಯವರ ಜೊತೆ ಮಾತುಕತೆ ನಡೆಸುತ್ತಿರಬಹುದು'' ಎಂಬ ಅನುಮಾನ ಕಳೆದ ವಾರ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಸಕಲ ವೀಕ್ಷಕರಿಗೆ ಕಾಡಿತ್ತು.
ಅದಕ್ಕೆ ಕಾರಣ, 'ಏಯ್ ಕಾರುಣ್ಯ, ಮೊಬೈಲ್ ತಗೊಂಡು ಬಾ ಬೇಗ' ಅಂತ ನಿರಂಜನ್ ದೇಶಪಾಂಡೆ ಆಡಿದ ಮಾತು.
ಇದೇ ವಿಚಾರದ ಕುರಿತು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೂಡ ವರದಿ ಮಾಡಿ, ''ಡೌಟ್ ಕ್ಲಿಯರ್ ಮಾಡಿ ಬಿಗ್ ಬಾಸ್'' ಎಂಬ ಲೇಖನ ಪ್ರಕಟ ಮಾಡಿತ್ತು. ಪರಿಣಾಮ, ಕಿಚ್ಚ ಸುದೀಪ್ ನಡೆಸಿಕೊಡುವ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ''ಬಿಗ್ ಬಾಸ್' ಮನೆಯಲ್ಲಿ ಮೊಬೈಲ್ ಬಳಕೆ'' ಕುರಿತು ಕ್ಲಾರಿಟಿ ನೀಡಲಾಗಿದೆ.
'ಕಾಲರ್ ಆಫ್ ದಿ ವೀಕ್' ಮುಖಾಂತರ ಡೌಟ್ ಕ್ಲಿಯರ್
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಮೂಡಬಿದಿರೆಯ ಪುನೀತ್ ಎಂಬುವರು ಕರೆ ಮಾಡಿ, ನಿರಂಜನ್ ದೇಶಪಾಂಡೆ ರವರಿಗೆ ಮೊಬೈಲ್ ಕುರಿತು ಪ್ರಶ್ನೆ ಕೇಳಿದರು.
'ಕಾಲರ್ ಆಫ್ ದಿ ವೀಕ್' ಕೇಳಿದ ಪ್ರಶ್ನೆ ಏನು?
''ದೀಪಾವಳಿಯ ಸಂಭ್ರಮವನ್ನ 'ಬಿಗ್ ಬಾಸ್'ನಲ್ಲಿ ತೋರಿಸುತ್ತಿದ್ದಾಗ, ಎಲ್ಲರೂ ಸಂಭ್ರಮದಿಂದ ಗಾರ್ಡನ್ ಏರಿಯಾಗೆ ಬರುವಾಗ, ನೀವು ಮಾತ್ರ ಕಾರುಣ್ಯ ರವರನ್ನ ಕರೆದು 'ಮೊಬೈಲ್ ತಗೊಂಡು ಬನ್ನಿ, ಸೆಲ್ಫಿ ತೆಗೆದುಕೊಳ್ಳೋಣ' ಅಂತ ಹೇಳ್ತೀರಾ. ನಮಗೆಲ್ಲ ಕುತೂಹಲ ಶುರು ಆಗಿದೆ. ನಮಗೆ ಗೊತ್ತಿಲ್ಲದೇ ನಿಮಗೆ ಒಳಗೆ ಮೊಬೈಲ್ ಆಕ್ಸೆಸ್ ಇದ್ಯಾ? ಮನೆಯವರ ಜೊತೆಗೆ, ಹೊರಗಿನ ಜಗತ್ತಿನ ಜೊತೆ ಸಂಪರ್ಕದಲ್ಲಿ ಇದ್ದೀರಾ? ಅಂತ ನಮಗೆ ಅರ್ಥ ಆಗಲಿಲ್ಲ'' ಅಂತ ನಿರಂಜನ್ ದೇಶಪಾಂಡೆ ರವರಿಗೆ ಮೂಡಬಿದಿರೆಯ ಪುನೀತ್ ಪ್ರಶ್ನೆ ಕೇಳಿದರು.
ನಿರಂಜನ್ ಕೊಟ್ಟ ಉತ್ತರವೇನು?
''ದೇವ್ರಾಣೆಗೂ, ನಮ್ಮ ತಾಯಾಣೆಗೂ ಇಲ್ಲಿ ಯಾರಿಗೂ ಮೊಬೈಲ್ ಕೊಟ್ಟಿಲ್ಲ. ನಮ್ಮ-ನಮ್ಮ ಸಂತೋಷಕ್ಕೆ ಒಂದೊಂದು ಬಾರಿ ಹಾಗೆ ಮಾತನಾಡಿಕೊಳ್ಳುತ್ತೇವೆ. ಎಷ್ಟೋ ಬಾರಿ ಅಡುಗೆ ಇರಲ್ಲ. ಪಾಯಸ ತಗೊಂಡು ಬಾ ಅಂತಿರ್ತೀವಿ. ಹಾಗೇ ಇದೂ ಕೂಡ'' ಅಂತ ಕ್ಲಾರಿಟಿ ಕೊಟ್ಟರು ನಿರಂಜನ್ ದೇಶಪಾಂಡೆ
ಮೊಬೈಲ್ ಮಾಡೆಲ್ ಮರೆತು ಹೋಗಿದೆ
''ಮೊಬೈಲ್ ಹೇಗಿದೆ ಅನ್ನೋದು ಮರೆತು ಹೋಗಿದೆ. ನಮ್ಮ ಮೊಬೈಲ್ ಮಾಡೆಲ್ ಯಾವುದು ಅನ್ನೋದೇ ಮರೆತು ಹೋಗಿದೆ ನನಗೆ. ಸುಮ್ನೆ ಅವಾಗವಾಗ 'ಚಾರ್ಜ್ ಗೆ ಹಾಕಿದ್ದೀವಿ ನೋಡು, ಮೆಸೇಜ್ ಬಂತಾ ನೋಡು' ಅಂತ ಮಾತನಾಡಿಕೊಳ್ತಿರ್ತೀವಿ. ಅಷ್ಟು ಬಿಟ್ಟರೆ, ಹೊರಗಿನ ಜಗತ್ತಿಗೆ ಇಲ್ಲಿ ಯಾರಿಗೂ ಸಂಪರ್ಕ ಇಲ್ಲ'' - ನಿರಂಜನ್ ದೇಶಪಾಂಡೆ
ಸುದೀಪ್ ಕೂಡ ಸ್ಪಷ್ಟನೆ ನೀಡಿದರು
''ದೀಪಾವಳಿ ಹಬ್ಬದ ದಿನ ಎಲ್ಲರಿಗೂ ಗಿಫ್ಟ್ ಸಿಕ್ಕಿತು. ಕೆಲವರು ಖುಷಿ ಪಟ್ಟರು. ಪತ್ರಗಳನ್ನು ಓದಿ ಅತ್ತರು. ಪತ್ರ ಬರಲಿಲ್ಲ ಅಂತ ಕೆಲವರು ಅತ್ತರು. ಮೊಬೈಲ್ ಫೋನ್ ಅನ್ನೋದು ಇದ್ದಿದ್ದರೆ, ಇಷ್ಟೂ ನಾಟಕ ಆಗ್ಹೋಯ್ತಲ್ಲಾ? ಹೌ ಈಸ್ ದಟ್ ಪಾಸಿಬಲ್.?'' ಅಂತ ಕಿಚ್ಚ ಸುದೀಪ್ ಕೂಡ ಸ್ಪಷ್ಟನೆ ನೀಡಿದರು.
ಡೌಟ್ ಪಡಬೇಡಿ
''ನಾವು ಬಹಳ ಗಂಭೀರವಾಗಿ ನಡೆಸುವ 'ಬಿಗ್ ಬಾಸ್' ಕಾರ್ಯಕ್ರಮವನ್ನು, ಒಳಗಡೆ ಸ್ಪರ್ಧಿಗಳು ಕೂಡ ಅಷ್ಟೇ ಶ್ರಮ ಪಟ್ಟು ಭಾಗವಹಿಸುತ್ತಿರುವ ಈ ಕಾರ್ಯಕ್ರಮವನ್ನು ಡೌಟ್ ಪಡಬೇಡಿ'' ಅಂತ ಸುದೀಪ್ ಕೇಳಿಕೊಂಡರು.
ಏನಿದು 'ಮೊಬೈಲ್' ವಿವಾದ.?
ಅಷ್ಟಕ್ಕೂ ಏನಿದು 'ಮೊಬೈಲ್ ವಿವಾದ', ಯಾವಾಗ ನಡೆದಿದ್ದು ಎಂಬುದು ನಿಮಗೆ ಗೊತ್ತಿಲ್ಲ ಅಂದ್ರೆ, ಈ ವರದಿ ಓದಿರಿ....[ಇದು ನಿಜವೋ...ಸುಳ್ಳೋ...'ಬಿಗ್ ಬಾಸ್' ನೀವೇ ಹೇಳಿ, ಡೌಟ್ ಕ್ಲಿಯರ್ ಮಾಡಿ.!]