Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದಯ ಸಿಂಗರ್ ವೇದಿಕೆಯಲ್ಲಿ ಚೇತನ್: ಭಾವುಕರಾದ LN ಶಾಸ್ತ್ರಿ ಪತ್ನಿ
'ಉದಯ ಸಿಂಗರ್ ಜೂನಿಯರ್ಸ್' ವಾರದಿಂದ ವಾರಕ್ಕೆ ಸಂಗೀತದ ಕಂಪು ನೀಡುತ್ತಿದೆ. ಅಂತೆಯೇ ಚಿತ್ರರಂಗದ ಸ್ಟಾರ್ ಕಲಾವಿದರು ಆಗಮಿಸಿ ಮಕ್ಕಳಿಗೆ ಹಾರೈಸುತ್ತಿದ್ದಾರೆ. ಈ ವಾರದ ಸಂಚಿಕೆಯಲ್ಲಿ 'ಆ ದಿನಗಳು' ಖ್ಯಾತಿಯ ನಟ ಚೇತನ್ ಆಗಮಿಸಿ ವೇದಿಕೆಯನ್ನ ಮತ್ತಷ್ಟು ರಂಗೇರಿಸಿದರು.
'ಅತಿರಥ' ಚಿತ್ರದ ಪ್ರಮೋಶನ್ ಗಾಗಿ ಬಂದಿದ್ದ ಚೇತನ್ ಮತ್ತು ನಿರ್ದೇಶಕ ಮಹೇಶಬಾಬು ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಇದೇ ವೇಳೆ ಉದಯ ಸಿಂಗರ್ ಜೂನಿಯರ್ಸ್ ಕಾರ್ಯಕ್ರಮದಲ್ಲಿರುವ 5 ವರ್ಷದ ಮೈಸೂರಿನ ಪುಟ್ಟ ಪ್ರತಿಭೆ ಶಿಖಾ ಜೊತೆ ನಟ ಚೇತನ್ ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದ್ದಾರೆ.
ಮತ್ತೆ ಒಂದಾದ ರವಿಚಂದ್ರನ್-ಪ್ರೇಮಾ: ಜಾದು ಮಾಡಿದ 'ಕನಸುಗಾರ' ಜೋಡಿ
ಇಷ್ಟೆಲ್ಲಾ ಮನರಂಜನೆಯ ಮದ್ಧೆ ಸುಮಾ ಶಾಸ್ತ್ರಿಯವರು ಭಾವುಕರಾದ ಘಟನೆ ನಡೆದಿದೆ. ಸುಮಾ ಶಾಸ್ತ್ರಿ ದಿವಂಗತ ಎಲ್.ಎನ್ ಶಾಸ್ತ್ರಿಯವರ ಪತ್ನಿ. ಉದಯ ಸಿಂಗರ್ ಜೂನಿಯರ್ಸ್ ನಲ್ಲಿ ಮಕ್ಕಳಿಗೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಕ್ಷೀತ್ ಭಟ್ ಎಂಬ ಸ್ಪರ್ಧಿ 'ಲವ್ ಇನ್ ಮಂಡ್ಯಾ' ಚಿತ್ರದ ಹಾಡನ್ನು ಹಾಡಿದ. ಆ ಹಾಡು ಮೂಲತವಾಗಿ ದಿವಂಗತ ಎಲ್ ಎನ್ ಶಾಸ್ತ್ರಿಯವರು ಹಾಡಿದ್ದು.
ಕ್ಯಾನ್ಸರ್ ವಿರುದ್ಧ ಹೋರಾಡಿ ಸೋತ ಗಾಯಕ ಎಲ್ ಎನ್ ಶಾಸ್ತ್ರಿ
ಇದೇ ಸಂದರ್ಭದಲ್ಲಿ ಸುಮಾ ಶಾಸ್ತ್ರಿಯವರು ವೇದಿಕೆಗೆ ಆಗಮಿಸಿ ತಮ್ಮ ಪತಿಯ ಬಗೆಗೆ ಮಾತನಾಡುತ್ತಾ ಈ ಹಾಡಿನ ಕೊನೆಯ ಸಾಲಾದ "ನಿಂತು ಹೋಯಿತೆ ಜೀವಗಾನ" ಕೇಳಿ ಭಾವುಕರಾದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ ಶಾಸ್ತ್ರಿಯವರಿಗೆ ತಾವು ಈ ಹಾಡನ್ನು ಹಾಡ ಬೇಡಿ ಎಂದು ಎಷ್ಟೇ ಹೇಳಿದರು "ಇಲ್ಲಾ ಇದು ನಂದೆ ಹಾಡು" ಎಂದು ಹೇಳಿದ್ದರು. ಹಾಗೆ ಅದೇ ಅವರ ಕೊನೆಯ ಹಾಡು ಆಗಿ ಹೋಯಿತು ಎಂದು ಸುಮಾ ಶಾಸ್ತ್ರಿಯವರು ಭಾವುಕರಾಗಿ ಕಣ್ಣಿರನ್ನು ಹಾಕಿದರು.
ಮರೆಯಾದ ಗಾನ ಚೈತನ್ಯ ಎಲ್.ಎನ್.ಶಾಸ್ತ್ರಿ
ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.