Just In
Don't Miss!
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಉದಯ ಸಿಂಗರ್ ವೇದಿಕೆಯಲ್ಲಿ ಚೇತನ್: ಭಾವುಕರಾದ LN ಶಾಸ್ತ್ರಿ ಪತ್ನಿ
'ಉದಯ ಸಿಂಗರ್ ಜೂನಿಯರ್ಸ್' ವಾರದಿಂದ ವಾರಕ್ಕೆ ಸಂಗೀತದ ಕಂಪು ನೀಡುತ್ತಿದೆ. ಅಂತೆಯೇ ಚಿತ್ರರಂಗದ ಸ್ಟಾರ್ ಕಲಾವಿದರು ಆಗಮಿಸಿ ಮಕ್ಕಳಿಗೆ ಹಾರೈಸುತ್ತಿದ್ದಾರೆ. ಈ ವಾರದ ಸಂಚಿಕೆಯಲ್ಲಿ 'ಆ ದಿನಗಳು' ಖ್ಯಾತಿಯ ನಟ ಚೇತನ್ ಆಗಮಿಸಿ ವೇದಿಕೆಯನ್ನ ಮತ್ತಷ್ಟು ರಂಗೇರಿಸಿದರು.
'ಅತಿರಥ' ಚಿತ್ರದ ಪ್ರಮೋಶನ್ ಗಾಗಿ ಬಂದಿದ್ದ ಚೇತನ್ ಮತ್ತು ನಿರ್ದೇಶಕ ಮಹೇಶಬಾಬು ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಇದೇ ವೇಳೆ ಉದಯ ಸಿಂಗರ್ ಜೂನಿಯರ್ಸ್ ಕಾರ್ಯಕ್ರಮದಲ್ಲಿರುವ 5 ವರ್ಷದ ಮೈಸೂರಿನ ಪುಟ್ಟ ಪ್ರತಿಭೆ ಶಿಖಾ ಜೊತೆ ನಟ ಚೇತನ್ ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದ್ದಾರೆ.
ಮತ್ತೆ ಒಂದಾದ ರವಿಚಂದ್ರನ್-ಪ್ರೇಮಾ: ಜಾದು ಮಾಡಿದ 'ಕನಸುಗಾರ' ಜೋಡಿ
ಇಷ್ಟೆಲ್ಲಾ ಮನರಂಜನೆಯ ಮದ್ಧೆ ಸುಮಾ ಶಾಸ್ತ್ರಿಯವರು ಭಾವುಕರಾದ ಘಟನೆ ನಡೆದಿದೆ. ಸುಮಾ ಶಾಸ್ತ್ರಿ ದಿವಂಗತ ಎಲ್.ಎನ್ ಶಾಸ್ತ್ರಿಯವರ ಪತ್ನಿ. ಉದಯ ಸಿಂಗರ್ ಜೂನಿಯರ್ಸ್ ನಲ್ಲಿ ಮಕ್ಕಳಿಗೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಕ್ಷೀತ್ ಭಟ್ ಎಂಬ ಸ್ಪರ್ಧಿ 'ಲವ್ ಇನ್ ಮಂಡ್ಯಾ' ಚಿತ್ರದ ಹಾಡನ್ನು ಹಾಡಿದ. ಆ ಹಾಡು ಮೂಲತವಾಗಿ ದಿವಂಗತ ಎಲ್ ಎನ್ ಶಾಸ್ತ್ರಿಯವರು ಹಾಡಿದ್ದು.
ಕ್ಯಾನ್ಸರ್ ವಿರುದ್ಧ ಹೋರಾಡಿ ಸೋತ ಗಾಯಕ ಎಲ್ ಎನ್ ಶಾಸ್ತ್ರಿ
ಇದೇ ಸಂದರ್ಭದಲ್ಲಿ ಸುಮಾ ಶಾಸ್ತ್ರಿಯವರು ವೇದಿಕೆಗೆ ಆಗಮಿಸಿ ತಮ್ಮ ಪತಿಯ ಬಗೆಗೆ ಮಾತನಾಡುತ್ತಾ ಈ ಹಾಡಿನ ಕೊನೆಯ ಸಾಲಾದ "ನಿಂತು ಹೋಯಿತೆ ಜೀವಗಾನ" ಕೇಳಿ ಭಾವುಕರಾದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ ಶಾಸ್ತ್ರಿಯವರಿಗೆ ತಾವು ಈ ಹಾಡನ್ನು ಹಾಡ ಬೇಡಿ ಎಂದು ಎಷ್ಟೇ ಹೇಳಿದರು "ಇಲ್ಲಾ ಇದು ನಂದೆ ಹಾಡು" ಎಂದು ಹೇಳಿದ್ದರು. ಹಾಗೆ ಅದೇ ಅವರ ಕೊನೆಯ ಹಾಡು ಆಗಿ ಹೋಯಿತು ಎಂದು ಸುಮಾ ಶಾಸ್ತ್ರಿಯವರು ಭಾವುಕರಾಗಿ ಕಣ್ಣಿರನ್ನು ಹಾಕಿದರು.
ಮರೆಯಾದ ಗಾನ ಚೈತನ್ಯ ಎಲ್.ಎನ್.ಶಾಸ್ತ್ರಿ
ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.