Don't Miss!
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾರ್ಚ್ 22' ಓಡಲಿಲ್ಲ ಅಂದ್ರೆ ನಿರ್ದೇಶನಕ್ಕೆ ಗುಡ್ ಬೈ: ಕೂಡ್ಲು ರಾಮಕೃಷ್ಣ
'ಯಾರಿಗೂ ಹೇಳ್ಬೇಡಿ', 'ಕಾವ್ಯ', 'ಮಿಸ್ ಕ್ಯಾಲಿಫೊರ್ನಿಯ' ಸಿನಿಮಾಗಳ ಖ್ಯಾತಿಯ ಕೂಡ್ಲು ರಾಮಕೃಷ್ಣ ನಿರ್ದೇಶನ ಮಾಡಿರುವ ಹೊಚ್ಚ ಹೊಸ ಚಿತ್ರವೇ 'ಮಾರ್ಚ್ 22'. ಗೌರಿ ಗಣೇಶ ಹಬ್ಬದ ಪ್ರಯುಕ್ತ 'ಮಾರ್ಚ್ 22' ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಒಂದ್ವೇಳೆ, ''ಮಾರ್ಚ್ 22' ಸಿನಿಮಾ ಓಡಲಿಲ್ಲ ಅಂದ್ರೆ ನಿರ್ದೇಶನಕ್ಕೆ ಗುಡ್ ಬೈ ಹೇಳುತ್ತೇನೆ'' ಎಂದಿದ್ದಾರೆ ನಿರ್ದೇಶಕ ಕೂಡ್ಲು ರಾಮಕೃಷ್ಣ.
ಅಂದ್ಹಾಗೆ, ಈ ಹೇಳಿಕೆಯನ್ನ ಕೂಡ್ಲು ರಾಮಕೃಷ್ಣ ನೀಡಿದ್ದು ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. 'ಮಾರ್ಚ್ 22' ಸಿನಿಮಾದಲ್ಲಿ ಅಭಿನಯಿಸಿರುವ ನಟ ಅನಂತ್ ನಾಗ್, ನಟಿ ಗೀತಾ ಜೊತೆ ಕೂಡ್ಲು ರಾಮಕೃಷ್ಣ ಅತಿಥಿಯಾಗಿ ಭಾಗವಹಿಸಿದ್ರು.
ಕಾರ್ಯಕ್ರಮದ 'ದಿಢೀರ್ ಬೆಂಕಿ' ಸುತ್ತಿನಲ್ಲಿ, ''ಯಾವ ಕನ್ನಡದ ನಿರ್ದೇಶಕ ನಾಳೆಯಿಂದ ನಿರ್ದೇಶನಕ್ಕೆ ಗುಡ್ ಬೈ ಹೇಳಬೇಕು'' ಎಂದು ನಿರೂಪಕ ಅಕುಲ್ ಬಾಲಾಜಿ ಪ್ರಶ್ನೆಯನ್ನ ಕೇಳಿದರು. ಅದಕ್ಕೆ, ''ಮಾರ್ಚ್ 22' ಸಿನಿಮಾ ಹಿಟ್ ಆಗ್ಲಿಲ್ಲ ಅಂದ್ರೆ ನಾನೇ ಗುಡ್ ಬೈ ಹೇಳ್ತೀನಿ. ಈ ಚಿತ್ರದ ಮೇಲೆ ನಾನು ನಂಬಿಕೆ ಇಟ್ಟುಕೊಂಡಿದ್ದೇನೆ. ಈ ಚಿತ್ರ ಓಡಲಿಲ್ಲ ಅಂದ್ರೆ ನಾನೇ ಗುಡ್ ಬೈ ಹೇಳುವೆ. ನಾನು ಹೇಗಿದ್ದರೂ ಲಾಯರ್. ಅದನ್ನೇ ನನ್ನ ವೃತ್ತಿಯಾಗಿ ಮುಂದುವರಿಸುತ್ತೇನೆ'' ಎಂದರು ನಿರ್ದೇಶಕ ಕೂಡ್ಲು ರಾಮಕೃಷ್ಣ.
ಅಂದ್ಹಾಗೆ, 'ಮಾರ್ಚ್ 22' ಜೀವಜಲದ ಮಹತ್ವ ಸಾರುವ ಸಿನಿಮಾ. ಅನಂತ್ ನಾಗ್, ಗೀತಾ, ಆರ್ಯವರ್ಧನ್, ಕಿರಣ್ ರಾಜ್, ಆಶೀಷ್ ವಿದ್ಯಾರ್ಥಿ ಮುಖ್ಯಭೂಮಿಕೆಯಲ್ಲಿ ಇರುವ 'ಮಾರ್ಚ್ 22' ಇಡೀ ಕುಟುಂಬ ಕುಳಿತು ನೋಡಬಹುದಾದ ಸದಭಿರುಚಿಯ ಸಿನಿಮಾ.