Jothe Jotheyali: ಆಫೀಸಿಗೆ ಬಂದ ಝೇಂಡೇಗೆ ಶಾರದಾ ದೇವಿ ಹೇಳಿದ್ದೇನು..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ, ಶಾರದಾ ದೇವಿ ಕಾಲಿಡಿದು ಕ್ಷಮೆ ಕೇಳುತ್ತಾಳೆ. ತಾನು ಮಾಡಿದ ತಪ್ಪಿನ ಬಗ್ಗೆ ಹೇಳುತ್ತಾಳೆ. ಝೇಂಡೇ ಅನ್ನು ನಂಬಿ ಮೋಸ ಹೋದೆ ಎಂದು ಹೇಳುತ್ತಾಳೆ.

ಆರ್ಯ ಸರ್ ಹೆಸರನ್ನು ಬಳಸಿಕೊಂಡು ಝೇಂಡೇ ಮೋಸ ಮಾಡಿದರು. ಖಾಲಿ ಪೇಪರ್ ಗಳೀಗೆ ಸಹಿ ಹಾಕಿಸಿಕೊಂಡರು. ಈಗ ನೋಡಿದರೆ ವರ್ಧನ್ ಗ್ರೂಪ್ಸ್ ಅಕೌಂಟ್ ಗಳನ್ನೇ ಕ್ಲೋಸ್ ಮಾಡಿಸಿದ್ದಾರೆ ಎಂದು ಮೀರಾ ಹೇಳುತ್ತಾಳೆ.

ಈ ಮಾತನ್ನು ಕೇಳಿದ ಶಾರದಾ ಸ್ವಲ್ಪವೂ ಬೇಸರ ಮಾಡಿಕೊಳ್ಳುವುದಿಲ್ಲ. ಬದಲಿಗೆ ಮೀರಾಗೆ ಸಮಾಧಾನ ಹೇಳುತ್ತಾಳೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಹೆದರಬೇಡ ಎಂದು ಹೇಳುತ್ತಾಳೆ.

ಮತ್ತೆ ತಪ್ಪು ಮಾಡಲ್ಲ ಎಂದ ಮೀರಾ

ಮತ್ತೆ ತಪ್ಪು ಮಾಡಲ್ಲ ಎಂದ ಮೀರಾ

ಸಾವಿರಾರು ಮಂದಿಗೆ ಊಟ ಹಾಕಿದ ಸಂಸ್ಥೆ ಅದು. ಅದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಎಲ್ಲರಿಗೂ ಒಳ್ಳೆಯದೇ ಆಗುತ್ತದೆ. ಯಾವತ್ತೂ ಆ ಕಂಪನಿಯಿಂದ ಯಾರಿಗೂ ದ್ರೋಹ ಆಗುವುದಿಲ್ಲ ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿ ಸಮಾಧಾನ ಮಾಡಿಕೊಳ್ಳುವ ಮೀರಾ ಮತ್ತೆ ಈ ತಪ್ಪುಗಳನ್ನು ಮಾಡಲ್ಲ ಎಂದು ಹೇಳುತ್ತಾಳೆ. ನಾನೇ ಝೇಂಡೇ ಅನ್ನು ವಾಪಸ್ ಆಫೀಸಿಗೆ ಕರೆಸಿಕೊಂಡಿದ್ದು. ಆದರೆ ಹೀಗೆಲ್ಲಾ ನಡೆದು ಹೋಯ್ತು ಎಂದು ಹೇಳುತ್ತಾಳೆ. ಇನ್ನು ಶಾನುಭೋಗರು ಕೂಡ ಝೇಂಡೇ ಮಾಡಿದ ಕೆಲಸದ ಬಗ್ಗೆ ಪತ್ರ ಬರೆದಿರುತ್ತಾರೆ. ಇದನ್ನು ಶಾರದಾ ಓದುತ್ತಾರೆ.

ಮೀರಾ ಕಾಲೆಳೆದ ಮಾನ್ಸಿ

ಮೀರಾ ಕಾಲೆಳೆದ ಮಾನ್ಸಿ

ಇದೇ ವೇಳೆಗೆ ಹರ್ಷನಿಗೆ ಆಫೀಸಿನಿಂದ ಫೋನ್ ಬರುತ್ತದೆ. ಝೇಂಡೇ ಸರ್ ಬಂದಿದ್ದಾರೆ. ನಮಗೆಲ್ಲಾ ಬೈಯುತ್ತಿದ್ದಾರೆ. ಏನೇನೋ ಹೇಳುತ್ತಿದ್ದಾರೆ ಎಂದು ಹೇಳುತ್ತಾರೆ. ಕೂಡಲೇ ಆಫೀಸಿಗೆ ಬನ್ನಿ ಎಂದು ಕೇಳಿಕೊಳ್ಳುತ್ತಾರೆ. ಆಗ ಹರ್ಷ ಮತ್ತು ಅನು ಇಬ್ಬರೂ ಆಫೀಸಿಗೆ ಹೊರಡುತ್ತಾರೆ. ಇವರ ಜೊತೆಗೆ ಮೀರಾ ಕೂಡ ಹೋಗುತ್ತಾಳೆ. ಮೀರಾಳನ್ನು ತಡೆಯುವ ಮಾನ್ಸಿ ಕಾಲೆಳೆಯುತ್ತಾಳೆ. ಈ ಮನೆಯಲ್ಲಿ ಇಷ್ಟು ವರ್ಷ ನಡೆದ ನಾಟಕಕ್ಕಿಂತ ಇವತ್ತು ನೀನು ಕಾಲಿಗೆ ಬಿದ್ದು ಆಡಿದ ಮಾತುಗಳು ಸೂಪರ್ ಎಂದು ಹೇಳುತ್ತಾಳೆ. ಮಾನ್ಸಿ ಮಾತುಗಳಿಗೆ ಏನೂ ಹೇಳದೆ ಮೀರಾ ಹೊರಟು ಬಿಡುತ್ತಾಳೆ.

ಜೋಗ್ತವ್ವ ಹೇಳಿದ್ದೇನು..?

ಜೋಗ್ತವ್ವ ಹೇಳಿದ್ದೇನು..?

ಹರ್ಷ, ಅನು ಮತ್ತು ಮೀರಾ ಆಫೀಸಿಗೆ ಬಂದು ಮಾತನಾಡುತ್ತಾರೆ. ಸೀದಾ ಝೇಂಡೇ ರೂಮಿಗೆ ಹೋಗುತ್ತಾರೆ. ಕ್ಯಾಬಿನ್‌ನಲ್ಲಿ ಝೇಂಡೇ ಎಲ್ಲರಿಗೂ ಬೈಯುತ್ತಿರುತ್ತಾನೆ. ಬರುವ ಮೊದಲು ರಿಕ್ವೆಸ್ಟ್ ಮಾಡಬೇಕು ಎಂಬುದು ಗೊತ್ತಿಲ್ಲವಾ ಎಂದು ಜೋರು ಮಾಡುತ್ತಿರುತ್ತಾನೆ. ಇತ್ತ ಶಾರದಾ ಅವರಿಗೆ ಫೋನ್ ಒಂದು ಬರುತ್ತದೆ. ಅದರಿಂದ ಬೇಸರ ಮಾಡಿಕೊಂಡು ದೇವಸ್ಥಾನಕ್ಕೆ ಹೋಗಿರುತ್ತಾರೆ. ತಾವು ಕೇಳಿದ ಸುದ್ದಿ ನಿಜವೇ ಎಂದು ಕೇಳಿದಾಗ ಅಲ್ಲಿಗೆ ಜೋಗ್ತವ್ವ ಬರುತ್ತಾಳೆ. ಜೋಗ್ತವ್ವ ನೀನು ಕೇಳಿದ್ದೆಲ್ಲಾ ನಿಜ. ಈಗ ನಿನ್ನ ಮಕ್ಕಳ ಜೊತೆ ಇರು ಹೋಗು. ಅವರಿಗೆ ನಿನ್ನ ಅವಶ್ಯಕತೆ ಇದೆ ಎಂದು ಹೇಳುತ್ತಾಳೆ.

ತಬ್ಬಿಬ್ಬಾದ ಝೇಂಡೇ

ತಬ್ಬಿಬ್ಬಾದ ಝೇಂಡೇ

ಶಾರದಾ ಹೂವಿನ ಬೊಕ್ಕೆ ಹಿಡಿದು ಆಫೀಸಿಗೆ ಬರುತ್ತಾಳೆ. ಝೇಂಡೇ ಅನ್ನು ಹೀಗಾ ವೆಲ್ಕಂ ಮಾಡುವುದು ಎಂದು ಛೇಡಿಸುತ್ತಾ, ಝೇಂಡೇಗೆ ವಿಶ್ ಮಾಡುತ್ತಾಳೆ. ಶಾರದಾ ದೇವಿ ನಡವಳಿಕೆಯನ್ನು ಕಂಡು ಎಲ್ಲರೂ ಶಾಕ್ ಆಗುತ್ತಾರೆ. ಝೇಂಡೇಗೆ ಮುಜುಗರವಾಗುತ್ತದೆ. ಶಾರದಾ ಬೊಕ್ಕೆ ಕೊಡಲು ಬಂದಾಗ ಝೇಂಡೇ ತಬ್ಬಿಬ್ಬಾಗುತ್ತಾನೆ. ಶಾರದಾ ದೇವಿಗೆ ಆರ್ಯ ಬದುಕಿರುವ ಸತ್ಯ ಗೊತ್ತಾಗಿರಬೇಕು. ಅದಕ್ಕೆ ಹೀಗೆ ನಡೆದುಕೊಳ್ಳುತ್ತಿರಬಹುದು ಎಂದು ಊಹಿಸಲಾಗಿದೆ.

More from Filmibeat

English summary
Jothe Jotheyali Serial 02nd January Episode Written Update. jhende comes to office and takes charge. Sharada comes and encourages jhende.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X