Don't Miss!
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ಮುಗಿಯುತ್ತಲೇ ದಿವ್ಯಾ ಉರುಡುಗ ವಿರುದ್ಧ ಅಸೂಯೆ ಹೊರಹಾಕಿದ ಪ್ರಶಾಂತ್ ಸಂಬರ್ಗಿ
ಎರಡು ಬಾರಿ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಪ್ರಶಾಂತ್ ಸಂಬರ್ಗಿ ವ್ಯಕ್ತಿತ್ವದ ಬಗ್ಗೆ ಬಿಗ್ಬಾಸ್ ಮನೆಯಲ್ಲಿ ಹಾಗೂ ಹೊರಗಡೆ ಬಹಳ ಭಿನ್ನ-ಭಿನ್ನ ಅಭಿಪ್ರಾಯಗಳಿವೆ.
ಬಿಗ್ಬಾಸ್ ಮನೆಯಲ್ಲಿ ಪ್ರಶಾಂತ್ ಒಬ್ಬ ಕುತಂತ್ರಿ, ಚಾಣಾಕ್ಷ, ಜಗಳಕೋರ, ಸ್ವಹಿತಾಸಕ್ತಿಯಷ್ಟೆ ಬಯಸುವವ ಎಂಬಿತ್ಯಾದಿ ಅಭಿಪ್ರಾಯಗಳಿವೆ. ಬಿಗ್ಬಾಸ್ ಮನೆಯ ಹೊರಗೂ ಸಹ ತುಸು ಅದೇ ವ್ಯಕ್ತಿತ್ವವೇ ಎನ್ನಲಾಗುತ್ತದೆ. ಆದರೆ ಹೊರಗೆ ಅವರು ಹಿಂದುಪರ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.
ಅದಕ್ಕೆ ಸಾಕ್ಷಿಯಂತೆ, ಕಳೆದ ಬಾರಿ ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಪ್ರಶಾಂತ್ ಸಂಬರ್ಗಿ ಹಲವು ಸಹ ಸ್ಪರ್ಧಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದರು. ದಿವ್ಯಾ ಉರುಡುಗ ಬಗ್ಗೆಯೂ ಹಗುರವಾಗಿ ಮಾತನಾಡಿದ್ದರು. ಈಗ ಮತ್ತೆ ಅದನ್ನೇ ಮುಂದುವರೆಸಿದ್ದಾರೆ.
ದಿವ್ಯಾ ವಿರುದ್ಧ ಅಸೂಯೆ ಹೊರಹಾಕಿದರೇ ಪ್ರಶಾಂತ್ ಸಂಬರ್ಗಿ?
ಬಿಗ್ಬಾಸ್ 09 ರಲ್ಲಿ ಪ್ರವೀಣರ ಕೋಟಾದಲ್ಲಿ ಬಿಗ್ಬಾಸ್ನಲ್ಲಿ ಭಾಗವಹಿಸಿದ್ದ ಪ್ರಶಾಂತ್ ಸಂಬರ್ಗಿ 77 ದಿನಗಳ ಕಾಲ ಮನೆಯಲ್ಲಿದ್ದು ಬಳಿಕ ಎಲಿಮಿನೇಟ್ ಆಗಿದ್ದರು. ಆದರೆ ಈ ಹಿಂದಿನ ಸೀಸನ್ನಲ್ಲಿಯೂ ಅವರ ಸಹಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ ಈ ಬಾರಿಯೂ ಪ್ರಶಾಂತ್ರ ಸಹ ಸ್ಪರ್ಧಿಯಾಗಿದ್ದರಲ್ಲದೆ ಫಿನಾಲೆ ವರೆಗೂ ಬಂದಿದ್ದರು. ಇದೀಗ ಬಿಗ್ಬಾಸ್ ಮುಗಿದ ಮೇಲೆ ಈ ಬಗ್ಗೆ ಫೇಸ್ಬುಕ್ನಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಪ್ರಶಾಂತ್ ಸಂಬರ್ಗಿ, ದಿವ್ಯಾ ಉರುಡುಗ ವಿರುದ್ಧ ಮತ್ತೊಮ್ಮೆ ತಮ್ಮ ಅಸೂಯೆ ಹೊರಹಾಕಿದ್ದಾರೆ.
ಅದೃಷ್ಟದ ಆಧಾರದ ಮೇಲೆ ಬಂದ ದಿವ್ಯಾ: ಪ್ರಶಾಂತ್ ಸಂಬರ್ಗಿ
ಫಿನಾಲೆಯ ಹಿಂದಿನ ದಿನ ದಿವ್ಯಾ ಉರುಡುಗ ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿದ್ದನ್ನು ಟ್ರೋಲ್ ಪೇಜೊಂದು ಸಂಭ್ರಮಿಸಿದ್ದು, 'ದಿವ್ಯಾ ಉರುಡುಗ ಎಲಮಿನೇಟ್ ಆಗಿದ್ದಾರಂತೆ ಹಾಕ್ರೊ ಸ್ಟೆಪ್ಪು' ಎಂದು ಪೋಸ್ಟ್ ಹಾಕಿದ್ದಾರೆ. ಆ ಪೋಸ್ಟ್ ಅನ್ನು ಪ್ರಶಾಂತ್ ಸಂಬರ್ಗಿ ಹಂಚಿಕೊಂಡಿದ್ದು, ''ಈ ಬಗ್ಗೆ ಹೆಚ್ಚು ಹೆಚ್ಚೇನೂ ಇಲ್ಲ. ಬಿಬಿಕೆ09 ರಲ್ಲಿ ಅದೃಷ್ಟದ ಮೇಲೆ ಪ್ರಯಾಣ ಮಾಡಿದ ಬಿಗ್ಬಾಸ್ ಸ್ಪರ್ಧಿ'' ಎಂದಿದ್ದಾರೆ. ಆ ಮೂಲಕ ದಿವ್ಯಾ ಉರುಡುಗ ಕೇವಲ ಅದೃಷ್ಟದ ಬಲದಿಂದ ಫಿನಾಲೆಯ ವರೆಗೂ ಹೋಗಿದ್ದಾರೆ. ಅವರಿಗೆ ಪ್ರತಿಭೆ ಇರಲಿಲ್ಲ. ಬಿಗ್ಬಾಸ್ನಲ್ಲಿ ಶ್ರಮ ಪಡಲಿಲ್ಲ ಎಂದು ಪರೋಕ್ಷವಾಗಿ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
ಮೊದಲಿನಿಂದಲೂ ದಿವ್ಯಾ ವಿರುದ್ಧ ಆರೋಪ
ಪ್ರಶಾಂತ್ ಹಾಗೂ ದಿವ್ಯಾರ ನಡುವೆ ಎಲ್ಲವೂ ಸರಿಯಿರಲಿಲ್ಲ. ಕಳೆದ ಸೀಸನ್ ಮುಗಿದಾಗಲೂ ಪ್ರಶಾಂತ್ ಸಂಬರ್ಗಿ, ದಿವ್ಯಾ ಹಾಗೂ ಇತರರ ವಿರುದ್ಧ ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದರು. ಈ ಸೀಸನ್ನಲ್ಲಿ ಸಹ ಬಿಗ್ಬಾಸ್ ಒಳಗೆ ಇದ್ದಾಗಲೂ ಆಗಾಗ್ಗೆ ದಿವ್ಯಾ ಉರುಡುಗ ಬಗ್ಗೆ ತಕರಾರು ಎತ್ತುತ್ತಲೇ ಇದ್ದರು. ಅವರನ್ನು ನಾಮಿನೇಟ್ ಮಾಡುವುದು, ಕಳಪೆ ನೀಡುವುದು ನಡೆಯುತ್ತಲೇ ಇತ್ತು. ಇದು ದಿವ್ಯಾ ಬಗ್ಗೆ ಅವರ ಅಸಹಿಷ್ಣುತೆಯನ್ನು ತೋರಿಸುತ್ತಿತ್ತು. ಈಗ ಎಲ್ಲವೂ ಮತ್ತೊಮ್ಮೆ ಬಹಿರಂಗವಾಗಿದೆ.
ರೂಪೇಶ್ ಶೆಟ್ಟಿ ಚಾಂಪಿಯನ್
ಇನ್ನುಳಿದಂತೆ ಬಿಗ್ಬಾಸ್ ಸೀಸನ್ 09 ಡಿಸೆಂಬರ್ 1 ರ ಮಧ್ಯ ರಾತ್ರಿ ಮುಗಿದಿದ್ದು, ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಅವರು ಫೈನಲಿಸ್ಟ್ಗಳಾಗಿದ್ದರು. ಅಂತಿಮ ಜಯ ದೊರೆತಿದ್ದು ರೂಪೇಶ್ ಶೆಟ್ಟಿಗೆ. ಬಿಗ್ಬಾಸ್ ಒಟಿಟಿಯಲ್ಲಿಯೂ ರೂಪೇಶ್ ಶೆಟ್ಟಿ ಅವರೇ ಗೆದ್ದಿದ್ದರು. ದಿವ್ಯಾ ಉರುಡುಗ, ದೀಪಿಕಾ ದಾಸ್ ಅವರುಗಳು ಫಿನಾಲೆ ವಾರದ ವರೆಗೆ ಬಂದಿದ್ದರು. ಆದರೆ ಕೊನೆಯ ಹಂತದಲ್ಲಿ ದಿವ್ಯಾ ಹಾಗೂ ದೀಪಿಕಾ ಅವರುಗಳು ಮನೆಯಿಂದ ಹೊರನಡೆದರು.