Don't Miss!
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶ್ ಹಾಕಿದ ಸವಾಲಿಗೆ ಪಬ್ಲಿಕ್ ಟಿವಿಯ ಎಚ್.ಆರ್.ರಂಗನಾಥ್ ಏನಂತಾರೆ.?
ಕನ್ನಡ ನ್ಯೂಸ್ ಚಾನೆಲ್ ಗಳ ವಿರುದ್ಧ ಸಿಡಿದೆದ್ದು, ನಟ ಯಶ್ ಓಪನ್ ಚಾಲೆಂಜ್ ಮಾಡಿದ್ದು, ಅದನ್ನ ಎಚ್.ಆರ್.ರಂಗನಾಥ್ ಸಾರಥ್ಯದ ಪಬ್ಲಿಕ್ ಟಿವಿ ಸ್ವೀಕರಿಸಿದ್ದು, ಅದಕ್ಕೆ ಪ್ರತಿಯಾಗಿ 'ಶಹಬ್ಬಾಸ್ ಪಬ್ಲಿಕ್ ಟಿವಿ' ಎನ್ನುತ್ತಾ ಯಶ್ ವಿಡಿಯೋ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. [ಯಶ್ v/s ಕನ್ನಡ ಮಾಧ್ಯಮ: ಕಥೆ ಶುರು ಆಗಿದ್ದು ಎಲ್ಲಿಂದ?]
ನಿನ್ನೆ ಬೆಳಗ್ಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ''ಬರೀ ಕಾರ್ಯಕ್ರಮ ಮಾತ್ರ ಮಾಡೋದಲ್ಲ, ರೈತರ ಪರವಾಗಿ ಜಾಹೀರಾತು ಕೊಡಬೇಕು. ರೈತರ ಪರ ಅಭಿಯಾನ ಮಾಡಬೇಕು. ಅದೂ ಕೂಡ ಪ್ರೈಮ್ ಟೈಮ್ ನಲ್ಲಿ...ನೀವು ಇದಕ್ಕೆ ರೆಡಿ ಇದ್ರೆ, ರಂಗನಾಥ್ ಸರ್ ನನಗೆ ಭರವಸೆ ಕೊಟ್ಟರೆ ನಾನು ಬರ್ತೀನಿ'' ಅಂತ ಯಶ್ ಹೇಳಿದ್ದರು. [ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್]
ಇದನ್ನ ವೀಕ್ಷಿಸಿರುವ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ''ನಟ ಯಶ್ ಚರ್ಚೆಗೆ ಆಹ್ವಾನ ನೀಡಿರುವುದು ಒಳ್ಳೆಯ ಬೆಳವಣಿಗೆ. ಪ್ರಜಾಪ್ರಭುತ್ವದಲ್ಲಿ ಇಂತಹ ಚರ್ಚೆ ಅಗತ್ಯ. ಮಾಧ್ಯಮದವರು ಪ್ರಶ್ನಾತೀತರಲ್ಲ. ಯಾರದ್ದು ಸರಿ, ಯಾರದ್ದು ತಪ್ಪು ಅಂತ ಚರ್ಚೆ ನಡೆಯಲಿ. ಈ ಚರ್ಚೆಗೆ ಸಂಬಂಧಿಸಿದ ಕಾರ್ಯಕ್ರಮ ನಿರೂಪಕರಾಗಿ ಚಿತ್ರರಂಗ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಡದವರು ಕಾರ್ಯ ನಿರ್ವಹಿಸಲಿ. ಬೇಕಾದರೆ ಅಂಥವರನ್ನು ನಟ ಯಶ್ ರವರೇ ಆಯ್ಕೆ ಮಾಡಲಿ'' ಅಂತ ಹೇಳಿಕೆ ನೀಡಿದ್ದಾರೆ.