ಜನಶ್ರೀ ಚಾನಲ್ಲಿಗೆ ಪಬ್ಲಿಕ್ ಟಿವಿ ರಂಗಾ

By Shami

Public TV Ranganath
ಪತ್ರಕರ್ತ ಎಚ್ ಆರ್ ರಂಗನಾಥ್ ಎಲ್ಲಿ ಹೋದರು ಎಂಬ ಪ್ರಶ್ನೆಗೆ ಉತ್ತರ ಪಬ್ಲಿಕ್ ಟಿವಿ. ಇದೇ ತಿಂಗಳ 26ರಂದು ಅವರ ಹೊಸ ಚಾನಲ್ ಬಿಡುಗಡೆ ಆಗಲಿದೆ. ಆದರೆ, ಇತ್ತೀಚಿನ ಮಾಹಿತಿಯಂತೆ ರಂಗ ಜನಶ್ರೀ ಚಾನಲ್ ಗೆ ಹೋಗಿದ್ದಾರೆ.

ಹೌದು, ಜನಶ್ರೀಗೆ ರಂಗನಾಥ್ ಬಂದಿರುವುದು ನಿಜ. ಈ ಭೇಟಿ ಕೇವಲ ಸ್ಟುಡಿಯೋ ನೋಡಲಿಕ್ಕೆ ಎನ್ನುತ್ತಾರೆ ಜನಶ್ರೀ ಸಿಬ್ಬಂದಿ. ಪಬ್ಲಿಕ್ ಟಿವಿಯನ್ನು ರಂಗನಾಥ್ ಕನ್ನಡದ ನಂಬರ್ 1 ಚಾನಲ್ ಮಾಡಲು ಹೊರಟಿದ್ದಾರೆ ಎನ್ನುವುದಂತೂ ಸತ್ಯ. ಇದಕ್ಕಾಗಿ ಬಲಿಷ್ಠ ತಂಡವನ್ನು ಕಟ್ಟುತ್ತಿರುವುದೂ ಅಷ್ಟೇ ನಿಜ.

ಆದರೆ ಅವರು ಜನಶ್ರೀಗೆ ಯಾಕೆ ಹೋಗಿದ್ದರು ಎನ್ನುವುದು ಅಷ್ಟೇ ಕುತೂಹಲ. ಇವೆಲ್ಲದರ ಮಧ್ಯೆಯೇ, ಬೇರೆಬೇರೆ ಚಾನಲ್ಲುಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಟುಡಿಯೋ, ಸೆಟ್ ಅಪ್ ಕಾರ್ಯವೈಖರಿ ಬಗ್ಗೆ ಆದಷ್ಟೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ನಮ್ಮ ಕಿರುತೆರೆ ಮೂಲಗಳು ಹೇಳಿವೆ.

ಒಂದು ಚಾನಲ್ ಆರಂಭವಾದರೆ ಅವರು ನಮಗೆ ಪ್ರತಿಸ್ಪರ್ಧಿಗಳು, ನಮಗೆ ಟಿಆರ್‌ಪಿ ಕಡಿಮೆ ಆಗುತ್ತದೆ ಎನ್ನುವ ಕಾಲಘಟ್ಟದಲ್ಲಿ ರಂಗನಾಥ್ ಅವರ ಸ್ಟುಡಿಯೋ ರೌಂಡ್ ಅಪ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಹೀಗೆ, ಎಲ್ಲರೂ ಸೇರಿ ಸ್ಪರ್ಧಿಗಳಂತೆ ಕೆಲಸ ಮಾಡುವುದನ್ನು ಬಿಟ್ಟು ಜನರಿಗಾಗಿ ಕೆಲಸ ಮಾಡಿ, ತನ್ಮೂಲಕ ಉತ್ತಮ ಸಮಾಜ ಕಟ್ಟಲು ಒಟ್ಟಾಗಿ ದುಡಿಯಬಹುದು, ಅಲ್ಲವೇ?

More from Filmibeat

English summary
Chairman and Managing director of Public TV, Journalist H R Ranganath pays visit to Janashree Channel, why?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X