Just In
Don't Miss!
- News
ಬಜೆಟ್ ಅಧಿಕವೇಶನ: ಒಂದು ರಾಷ್ಟ್ರ-ಒಂದು ಚುನಾವಣೆ ಚರ್ಚೆಗೆ ಬಲಿಯಾದ ಮೊದಲ ದಿನದ ಕಲಾಪ!
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂತೂ ಇಂತೂ ಶ್ರುತಿ ಪ್ರಕಾಶ್ ಆಸೆ ಈಡೇರಿತು.!
ಅಂತೂ ಇಂತೂ ಶ್ರುತಿ ಮೊಗದಲ್ಲಿ ಮಂದಹಾಸ ಮೂಡಿದೆ. 'ಬಿಗ್ ಬಾಸ್' ಮನೆಯೊಳಗೆ ತಮ್ಮ ತಂದೆ ಬಂದ ಕಾರಣ ಶ್ರುತಿ ಮುಖದಲ್ಲಿ ಕಳೆ ಬಂದಿದೆ. ಅಲ್ಲಿಗೆ, ಶ್ರುತಿ ಆಸೆ ಈಡೇರಿದೆ.
ಕಳೆದ ಎರಡ್ಮೂರು ವಾರಗಳಿಂದ ಶ್ರುತಿ ಕೊಂಚ ಸಪ್ಪೆ ಆಗಿದ್ದರು. ಕಾರಣ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹದಿಮೂರು ವಾರಗಳು ಕಳೆದರೂ, ತಮ್ಮ ಕುಟುಂಬದ ಕಡೆಯಿಂದ ಶ್ರುತಿಗಾಗಿ ಏನೂ ಲಭಿಸಿರಲಿಲ್ಲ.
ಪ್ರತಿ ವಾರ ಯಾರೇ ಕ್ಯಾಪ್ಟನ್ ಆದರೂ, ಅವರಿಗೆ ಅವರ ಕುಟುಂಬದ ಕಡೆಯಿಂದ ವಾಯ್ಸ್ ನೋಟ್ ಪ್ಲೇ ಆಗುತ್ತಿತ್ತು. ಒಂದು ವಾರ ಮಾತ್ರ ಯಾರ್ಯಾರು ನಾಮಿನೇಟ್ ಆಗಿದ್ದರೋ, ಅವರಿಗೆಲ್ಲ ಅವರವರ ಕುಟುಂಬದವರು ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಆದ್ರೆ, ದುರಾದೃಷ್ಟವಶಾತ್ ಅಂದು ಶ್ರುತಿ ನಾಮಿನೇಟ್ ಆಗಿರಲಿಲ್ಲ. ಹಾಗೇ, ಶ್ರುತಿ ಕ್ಯಾಪ್ಟನ್ ಆದಾಗಲೂ, 'ವಾಯ್ಸ್ ಮೆಸೇಜ್' ಭಾಗ್ಯ ಆಕೆಗೆ ಸಿಕ್ಕಿರಲಿಲ್ಲ.
'ಬಿಗ್ ಬಾಸ್' ಮನೆಯೊಳಗೆ ಶ್ರುತಿ ಕಾಲಿಡುವಾಗಲೂ, ಆಕೆಯ ಕುಟುಂಬದವರು ಹಾಜರ್ ಇರಲಿಲ್ಲ. ಕಳೆದ ವಾರ ಎಲ್ಲ ಸ್ಪರ್ಧಿಗಳ ಮನೆಯವರಿಗೆ 'ಬಿಗ್ ಬಾಸ್' ಮನೆಯೊಳಗೆ ಹೋಗುವ ಅವಕಾಶ ಕಲ್ಪಿಸಲಾಗಿತ್ತು. ಆದ್ರೆ, ಆಗಲೂ ಶ್ರುತಿ ಪ್ರಕಾಶ್ ಕುಟುಂಬ ಬರಲಿಲ್ಲ. ''ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯ ಆಗಲಿಲ್ಲ'' ಎಂದು ಶ್ರುತಿ ಸಹೋದರಿ ವಿಡಿಯೋ ಮೆಸೇಜ್ ಕಳುಹಿಸಿದ್ದರು.
ತಮ್ಮಿಂದ ಶೋನಲ್ಲಿ ಏನೋ ಸಮಸ್ಯೆ ಆಗಿರಬೇಕು, ಹೀಗಾಗಿ ಯಾರೂ ಬಂದಿಲ್ಲ ಎಂದು ಶ್ರುತಿ ಬೇಸರಗೊಂಡಿದ್ದರು. ಇದನ್ನೆಲ್ಲ ಗಮನಿಸಿದ ಮೇಲೆ ಶ್ರುತಿ ತಂದೆ ಪ್ರಕಾಶ್ ನಿನ್ನೆ 'ಬಿಗ್ ಬಾಸ್' ಮನೆಯೊಳಗೆ ಪ್ರತ್ಯಕ್ಷವಾಗಿದ್ದರು. ಶ್ರುತಿ ಜೊತೆಗೆ ಕೆಲ ಕಾಲ ಕಳೆದರು. ತಂದೆಯನ್ನ ನೋಡಿದ್ಮೇಲೆ ಶ್ರುತಿ ಖುಷಿ ಪಟ್ಟರು.