Don't Miss!
- News ‘ಕಾಂಗ್ರೆಸ್ ಡೇಂಜರ್’ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ವಿಜಯ್ ರಾಘವೇಂದ್ರಗಿದ್ದ ಒಂದು ಆಸೆ ಈಡೇರಲೇ ಇಲ್ಲ.!
ವಿಜಯ್ ರಾಘವೇಂದ್ರ... ಉತ್ತಮ ನಟ ಮಾತ್ರ ಅಲ್ಲ, ಅಷ್ಟೇ ಉತ್ತಮ ಗಾಯಕ ಕೂಡ ಹೌದು. 'ಸೇವಂತಿ ಸೇವಂತಿ' ಚಿತ್ರದಲ್ಲಿ ಗಾನಸುಧೆ ಹರಿಸಿರುವ ವಿಜಯ್ ರಾಘವೇಂದ್ರ ರವರಿಗೆ ಒಂದಾಸೆ ಇತ್ತು. ಆದ್ರೆ, ಅದು ಈಡೇರಲೇ ಇಲ್ಲ.!
ಉತ್ತಮ ದನಿ ಹೊಂದಿರುವ ನಟ ವಿಜಯ್ ರಾಘವೇಂದ್ರಗೆ 'ಸೇವಂತಿ ಸೇವಂತಿ' ಚಿತ್ರದಲ್ಲಿ ಹಾಡುವ ಅವಕಾಶ ಲಭಿಸಿತು. ತಾವು ದನಿಗೂಡಿಸಿದ ಮೊದಲ ಟ್ರ್ಯಾಕ್ ನ ಮೊದಲು ಅಣ್ಣಾವ್ರು ಡಾ.ರಾಜ್ ಕುಮಾರ್ ಗೆ ಕೇಳಿಸಬೇಕು ಎಂಬುದೇ ವಿಜಯ್ ರಾಘವೇಂದ್ರ ಇಚ್ಛೆ ಆಗಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಯಾಕಂದ್ರೆ, ಟ್ರ್ಯಾಕ್ ಸಿದ್ಧವಾಗುವಷ್ಟರಲ್ಲಿ ಡಾ.ರಾಜ್ ಕುಮಾರ್ ಕೊನೆಯುಸಿರೆಳೆದಿದ್ದರು.
ವಿಜಯ್ ರಾಘವೇಂದ್ರ ಜೊತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಅಪ್ಪು, ಶಿವಣ್ಣ
''ನಾನು ಹಾಡುವುದೆಂದರೆ ಅವರಿಗೆ ಇಷ್ಟ. 'ಸೇವಂತಿ ಸೇವಂತಿ' ಸಿನಿಮಾದಲ್ಲಿ ಮೊದಲ ಬಾರಿಗೆ ಹಾಡಿದೆ. ಅದನ್ನ ಅವರಿಗೆ ಮೊದಲು ಕೇಳಿಸಬೇಕು ಅಂತ ತುಂಬಾ ಆಸೆ ಇತ್ತು. ಆದರೆ ಆ ಅವಕಾಶ ಸಿಗಲೇ ಇಲ್ಲ. ಅದೇ ಸಮಯಕ್ಕೆ ಅವರು ತೀರಿಕೊಂಡರು. ನನ್ನ ಜೀವನದಲ್ಲಿ ಈಡೇರದ ಒಂದು ಆಸೆ ಅಂದ್ರೆ ಅದೇ'' ಎಂದು ನಟ ವಿಜಯ್ ರಾಘವೇಂದ್ರ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಸಂದರ್ಶನ: ಹುಟ್ಟುಹಬ್ಬ ಸಂಭ್ರಮದಲ್ಲಿ 'ಚಿನ್ನಾರಿ ಮುತ್ತ' ಹಂಚಿಕೊಂಡ ಕನಸುಗಳು..
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ವಿಜಯ್ ರಾಘವೇಂದ್ರ, ''ಶಿವರಾಜ್ ಕುಮಾರ್ ಜೊತೆ 'ರಿಷಿ' ಅಂತ ಒಂದು ಸಿನಿಮಾ ಮಾಡಿದೆ. ಅದು ಬಹಳ ಒಳ್ಳೆಯ ಸಿನಿಮಾ. ಇವತ್ತು ನನ್ನ ಲುಕ್ ಚೇಂಜ್ ಓವರ್ ಆಗಲು ಕಾರಣ 'ರಿಷಿ' ಸಿನಿಮಾ ಹಾಗೂ ನಿರ್ದೇಶಕ ಪ್ರಕಾಶ್. 'ರಿಷಿ' ಸಿನಿಮಾ ನೋಡಿಕೊಂಡು ಬಂದು ಬಹಳ ಚೆನ್ನಾಗಿ ಮಾಡಿದ್ದೀಯಾ ಅಂತ ಅಪ್ಪಾಜಿ (ಡಾ.ರಾಜ್ ಕುಮಾರ್) ಹೇಳಿದರು. ನನಗೆ ಅದೇ ಖುಷಿ'' ಎಂದು ಅಣ್ಣಾವ್ರನ್ನ ನೆನೆದರು.