Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಹೇಳಿರುವ ಸತ್ಯಗಳೇನು?
ಅಂತೂ ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಘಳಿಗೆ ಬಂದೇ ಬಿಟ್ಟಿದೆ. ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗವಹಿಸಿದ್ದಾರೆ.
ಈಗಾಗಲೇ ಕಾರ್ಯಕ್ರಮದ ಚಿತ್ರೀಕರಣ ಮುಗಿದದ್ದು, ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ದರ್ಶನ್ ಜೀವನಚರಿತ್ರೆ ಅನಾವರಣವಾಗಲಿದೆ. [ರಿಯಾಲಿಟಿ ಶೋಗೆ ಬರಲ್ಲ ಅಂದಿದ್ದ ದರ್ಶನ್ ವೀಕೆಂಡ್ ಗೆ ಬಂದ್ರು]
ಎಷ್ಟೋ ಮಂದಿಗೆ ಗೊತ್ತಿಲ್ಲದ ದರ್ಶನ್ ರವರ ನೋವು-ನಲಿವಿನ ಸಂಗತಿ, ದರ್ಶನ್ ಬೆಳೆದು ಬಂದ ಹಾದಿ, ದರ್ಶನ್ ರವರ ಇಷ್ಟ-ಕಷ್ಟಗಳು ಈ ವಾರದ 'ವೀಕೆಂಡ್ ವಿತ್ ರಮೇಶ್' ವಿಶೇಷ. ಮುಂದೆ ಓದಿ....
|
ಮಿಮಿಕ್ರಿ ಮಾಡುವುದರಲ್ಲಿ ದರ್ಶನ್ ನಿಸ್ಸೀಮ!
ಕಾರ್ಟೂನ್ ಗಳಿಗೆ ಮಿಮಿಕ್ರಿ ಮಾಡುವುದರಲ್ಲಿ ದರ್ಶನ್ ನಿಸ್ಸೀಮರು ಅನ್ನೋದು ನಿಮಗೆ ಗೊತ್ತಾ? ಗೊತ್ತಿಲ್ಲ ಅಂದ್ರೆ, ಮೊದಲು ಈ ವಿಡಿಯೋ ನೋಡಿ....
|
ರಿಯಾಲಿಟಿ ಶೋಗೆ ಬರಲ್ಲ ಅಂದಿದ್ದ ದರ್ಶನ್!
ರೈತರ ಸರಣಿ ಆತ್ಮಹತ್ಯೆಯಿಂದ ನೊಂದಿರುವ ದರ್ಶನ್, ಒಂದು ಲಕ್ಷ ರೂಪಾಯಿಯನ್ನ ರೈತರ ಕುಟುಂಬಕ್ಕೆ ನೀಡಿದರೆ ಮಾತ್ರ ತಾವು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತೇನೆ ಅಂತ ಈ ಹಿಂದೆ ಟ್ವೀಟ್ ಮಾಡಿದ್ದರು. ಇದೀಗ ದರ್ಶನ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
|
ಅಪ್ಪನಿಗೆ ಹೊಡೆಯುವಾಗ ದರ್ಶನ್ ಏನ್ ಮಾಡ್ತಿದ್ರು ಗೊತ್ತಾ?
ಎಲ್ಲರಿಗೂ ಗೊತ್ತಿರುವ ಹಾಗೆ, ಕನ್ನಡ ಚಿತ್ರರಂಗದ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್, ದರ್ಶನ್ ರವರ ತಂದೆ. ಸಿನಿಮಾದಲ್ಲಿ ತೂಗುದೀಪ ಶ್ರೀನಿವಾಸ್ ಹೀರೋಗಳಿಂದ ಏಟು ತಿನ್ನುವಾಗ ದರ್ಶನ್ ರವರ ಪ್ರತಿಕ್ರಿಯೆ ಹೇಗಿರ್ತಿತ್ತು ಅಂತ ತಿಳ್ಕೋಬೇಕಾದ್ರೆ ಈ ವಿಡಿಯೋ ನೋಡಿ....
|
ಎಲ್ಲಾ ಕನ್ನಡಿಗರ ಭಿಕ್ಷೆ
''ಫ್ಲೂಕ್ ನಲ್ಲಿ ಹೀರೋ ಆದವನು ನಾನು. ಕಲಾವಿದ ಆಗ್ತೀನಿ, ನಾಲ್ಕು ಏಟು ತಿಂದರೆ ವಿಲನ್ ಆದರೂ ಆಗ್ತೀನಿ ಒಟ್ನಲ್ಲಿ ಸಿನಿಮಾದಲ್ಲಿರ್ತೀನಿ ಅಂದುಕೊಂಡು ಬಂದಿದ್ದು. ನಾನು ಈ ಮಟ್ಟಕ್ಕೆ ಬಂದಿರುವುದು ಎಲ್ಲಾ ಕನ್ನಡಿಗರು ಹಾಕಿರುವ ಭಿಕ್ಷೆ'' ಅಂತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ....
ತಾಯಿ ಮೀನಾ ತೂಗುದೀಪ
ದರ್ಶನ್ ಬೆಳೆದು ಬಂದ ಹಾದಿ ಬಗ್ಗೆ ತಾಯಿ ಮೀನಾ ತೂಗುದೀಪ ಮನಬಿಚ್ಚಿ ಮಾತನಾಡಿದ್ದಾರೆ.
ವಿ.ಹರಿಕೃಷ್ಣ
ದರ್ಶನ್ ರವರ ಇತ್ತೀಚಿನ ಚಿತ್ರಗಳಿಗೆ ಸಂಗೀತ ನೀಡುತ್ತಾ ಬಂದಿರುವ ವಿ.ಹರಿಕೃಷ್ಣ ಕೂಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಗಾಯಕ ಹೇಮಂತ್ ಕುಮಾರ್
ಗಾಯಕ ಹೇಮಂತ್ ಮತ್ತು ದರ್ಶನ್ ರವರ ಗೆಳೆತನ ಕೂಡ ಈ ವಾರದ 'ವೀಕೆಂಡ್ ವಿತ್ ರಮೇಶ್' ಹೈಲೈಟ್.
ಕ್ರಿಕೆಟ್ ಅಂದ್ರೆ ಇಷ್ಟನಾ?
ಸಿಸಿಎಲ್ ನಲ್ಲಿ ದರ್ಶನ್ ಆಟವಾಡುವುದನ್ನ ನೋಡಿದ್ದೀರಾ.! ಆದ್ರೆ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಕ್ರಿಕೆಟ್ ಪ್ರೇಮದ ಬಗ್ಗೆ ಒಂದು ಸೀಕ್ರೆಟ್ ಕೂಡ ಬಹಿರಂಗವಾಗಲಿದೆ.
ಆಪ್ತ ಸ್ನೇಹಿತ ಬುಲೆಟ್ ಪ್ರಕಾಶ್
ದರ್ಶನ್ ರವರ ಅತ್ಯಾಪ್ತ ಬುಲೆಟ್ ಪ್ರಕಾಶ್ ಕೂಡ ದರ್ಶನ್ ವಿಶೇಷ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಮಿಸ್ ಮಾಡ್ಬೇಡಿ....
'ವೀಕೆಂಡ್ ವಿತ್ ರಮೇಶ್' ದರ್ಶನ್ ವಿಶೇಷ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.