Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಚ್ಚ ವೆಂಕಟ್ ಗೆ ಸುದೀಪ್ 'ಐ ಲವ್ ಯು' ಎಂದಾಗ...
ಕಿಚ್ಚ ಸುದೀಪ್ ಗುಡುಗಿದರು. ಹುಚ್ಚ ವೆಂಕಟ್ ವಿರುದ್ಧ ಕೆಂಡಮಂಡಲವಾದರು. ಗಾಯಕ ರವಿ ಮುರೂರು ಮೇಲೆ ಕೈ ಮಾಡಿದ್ದಕ್ಕೆ ಹುಚ್ಚ ವೆಂಕಟ್ ಮೇಲೆ ಸುದೀಪ್ ಹೌಹಾರಿದರು.
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕೆರಳುವ ಮುನ್ನ ಸಿಕ್ಕಾಪಟ್ಟೆ ಕೂಲ್ ಆಗಿದ್ದರು. ಹುಚ್ಚ ವೆಂಕಟ್ ಜೊತೆ ಜಾಲಿಯಾಗೇ ಮಾತನಾಡುತ್ತಿದ್ದರು. ಇನ್ ಫ್ಯಾಕ್ಟ್ ಹುಚ್ಚ ವೆಂಕಟ್ ಗೆ ಸುದೀಪ್ 'ಐ ಲವ್ ಯು ಮ್ಯಾನ್' ಅಂದಿದ್ರು.! [ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ]
ಊಟದ ವಿಚಾರವಾಗಿ 'ಬಿಗ್ ಬಾಸ್' ಮನೆಯಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಇದೇ ವಿಚಾರವಾಗಿ ಹುಚ್ಚ ವೆಂಕಟ್ ಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ ಹುಚ್ಚ ವೆಂಕಟ್ - ''ಎಷ್ಟು ಸಲಿ ಟೀ ಕುಡಿತೀನಿ ಅಂತ ಲೆಕ್ಕ ಹಾಕುವುದು ಬೇಜಾರಾಗುತ್ತೆ. ಮೊದಲ ವಾರ ಯಾವುದೇ ರಿಸ್ಟ್ರಿಕ್ಷನ್ ಇರ್ಲಿಲ್ಲ. ಆಗ ಸಮಸ್ಯೆ ಇರ್ಲಿಲ್ಲ. ಈಗ....ಮತ್ತೆ ಯಾಕೆ ಬಿಡಿ ಈ ವಿಷ್ಯ. ಬಿಟ್ಬಿಡಿ. ಜನ ನೋಡ್ತಿರ್ತಾರೆ. ಅವರೇ ತೀರ್ಮಾನ ಮಾಡ್ಲಿ. ನೀವು ಹೇಳಿದ ಮಾತು ಇಷ್ಟ ಆಯ್ತು ಸುದೀಪ್. ಥ್ಯಾಂಕ್ಸ್'' ಅಂತ ಹೇಳಿದರು. [ಕೆರಳಿದ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದ ಹುಚ್ಚ ವೆಂಕಟ್.!]
ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಹುಚ್ಚ ವೆಂಕಟ್ ನೀಡಿದ ಪ್ರತಿಕ್ರಿಯೆ ಸುದೀಪ್ ಗೆ ಇಷ್ಟವಾಯ್ತು. ಆದ ಕಾರಣ ''ಐ ಲವ್ ಯು ಮ್ಯಾನ್'' ಅಂದ್ರು. ಇದಾಗಿ ಕಣ್ಣು ಮಿಟುಕಿಸುವಷ್ಟರೊಳಗೆ ಆಗಬಾರದ್ದು ಆಗೇ ಹೋಯ್ತು.!