twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್‌ಡೌನ್ ನಿಯಮ ಪಾಲಿಸಿ ಸರಳ ವಿವಾಹದ ಮೂಲಕ ಮಾದರಿಯಾದ ನಟ

    |

    ಮಲಯಾಳಂ ಚಿತ್ರರಂಗದ ಪ್ರಶಸ್ತಿ ವಿಜೇತ ನಟ ಮಣಿಕಂದನ್ ಆಚಾರಿ ಕೇರಳದ ತ್ರಿಪುರಾಂತರದ ದೇವಸ್ಥಾನವೊಂದರಲ್ಲಿ ತಮ್ಮ ಗೆಳತಿ ಅಂಜಲಿ ಅವರನ್ನು ಭಾನುವಾರ ಮದುವೆಯಾಗಿದ್ದಾರೆ. ಆಡಂಬರ, ಹೆಚ್ಚು ಜನರಿಲ್ಲದೆ ಅತ್ಯಂತ ಸರಳ ರೀತಿಯಲ್ಲಿ ಅವರು ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ.

    Recommended Video

    ಗ್ಲ್ಯಾಮರ್ ಲುಕ್ ನಲ್ಲಿ ಜೂನಿಯರ್ ಪುಟ್ಟಗೌರಿ | Saniya | Junior Puttagowri | Then - Now

    ಮತ್ತೊಂದು ವಿಶೇಷವೆಂದರೆ ಮಣಿಕಂದನ್ ಮತ್ತು ಅಂಜಲಿ ಇಬ್ಬರೂ ತಮ್ಮ ಮದುವೆಗೆ ಬಳಸಲು ಕೂಡಿರಿಸಿದ್ದ ಹಣವನ್ನೆಲ್ಲ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಸಿಪಿಐಎಂನ ಶಾಸಕ ಎಂ. ಸ್ವರಾಜ್ ಅವರಿಗೆ ಈ ಹಣವನ್ನು ಅವರು ಹಸ್ತಾಂತರಿಸಿದ್ದಾರೆ.

    ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮಣಿಕಂದನ್, 2016ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತಾವು ನಟಿಸಿದ ಮೊದಲ ಚಿತ್ರ 'ಕಮ್ಮಟಿಪಾದ'ದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಮುಂದೆ ಓದಿ...

    ಸರಳವಾಗಿ ಮದುವೆ

    ಸರಳವಾಗಿ ಮದುವೆ

    ಮದುವೆ ಸಂದರ್ಭದಲ್ಲಿ ಮಣಿಕಂದನ್ ಮತ್ತು ಅಂಜಲಿ ಕುಟುಂಬದವರು ಲಾಕ್‌ಡೌನ್ ನಿಯಮಗಳು ಹಾಗೂ ಸಾಮಾಜಿಕ ಅಂತರದ ನಿಯಮ ಮತ್ತು ಶಿಷ್ಟಾಚಾರಗಳನ್ನು ಪಾಲಿಸಿದರು. ಆರು ತಿಂಗಳ ಹಿಂದೆಯೇ ಮದುವೆಯ ದಿನಾಂಕ ನಿಶ್ಚಯವಾಗಿತ್ತು. ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಅದನ್ನು ಮುಂದೂಡಲು ಅವರು ಬಯಸಿರಲಿಲ್ಲ. ಹೀಗಾಗಿ ಎರಡೂ ಕುಟುಂಬದ ಕೆಲವೇ ಮಂದಿಯ ಸಮ್ಮುಖದಲ್ಲಿ ಸರಳವಾಗಿ ದೇವಸ್ಥಾನದಲ್ಲಿ ಮದುವೆ ನೆರವೇರಿಸಲು ಸಮ್ಮತಿ ನೀಡಿದ್ದರು.

    ಅದ್ಧೂರಿಯಾಗದಿದ್ದಕ್ಕೆ ಬೇಸರವಿಲ್ಲ

    ಅದ್ಧೂರಿಯಾಗದಿದ್ದಕ್ಕೆ ಬೇಸರವಿಲ್ಲ

    ಮದುವೆಯ ಬಳಿಕ ಮಾತನಾಡಿದ ಮಣಿಕಂದನ್, 'ನಾವು ಕೊರೊನಾ ವೈರಸ್ ಹಾವಳಿಯನ್ನು ನಿಯಂತ್ರಿಸುವುದರಲ್ಲಿ ಯಶಸ್ವಿಯಾಗುತ್ತೇವೆ, ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿರುವುದಕ್ಕೆ ನಮಗೆ ಖುಷಿಯಿದೆ. ನಮ್ಮ ಮದುವೆ ಅದ್ಧೂರಿಯಾಗಿ ನಡೆಯಲಿಲ್ಲ ಎನ್ನುವುದು ನಮಗೆ ಬೇಸರವನ್ನೇನೂ ಮೂಡಿಸಿಲ್ಲ' ಎಂದಿದ್ದಾರೆ.

    ಕೊರೊನಾ ಕಾರಣಕ್ಕೆ ಮದುವೆ ಮುಂದೂಡಿದ ಖಡಕ್ ಲುಕ್‌ನ ಖಳನಟಕೊರೊನಾ ಕಾರಣಕ್ಕೆ ಮದುವೆ ಮುಂದೂಡಿದ ಖಡಕ್ ಲುಕ್‌ನ ಖಳನಟ

    ದೇವಸ್ಥಾನದಲ್ಲಿ ಆದ ಭೇಟಿ

    ದೇವಸ್ಥಾನದಲ್ಲಿ ಆದ ಭೇಟಿ

    ಮಣಿಕಂದನ್ ಮತ್ತು ಮರಾಡು ಪ್ರದೇಶದ ಅಂಜಲಿ ಇಬ್ಬರೂ ಒಂದೂವರೆ ವರ್ಷದ ಹಿಂದೆ ದೇವಸ್ಥಾನವೊಂದರ ಉತ್ಸವದಲ್ಲಿ ಭೇಟಿಯಾಗಿದ್ದರು. ಹಾಗೆಯೇ ಪ್ರೀತಿಯಲ್ಲಿ ಬಿದ್ದರು. ಅವರ ಪ್ರೀತಿಗೆ ಮನೆಯವರ ಆಶೀರ್ವಾದವೂ ಸಿಕ್ಕಿತು. ಅದೀಗ ಮದುವೆಯ ಅಂಕಿತ ಪಡೆದುಕೊಂಡಿದೆ.

    ಮೆಗಾಸ್ಟಾರ್ ಕುಟುಂಬದ ಅಳಿಯ ಆಗುತ್ತಾರಾ ಪ್ರಭಾಸ್: ನಿಹಾರಿಕಾ ಹೇಳಿದ್ದೇನು?ಮೆಗಾಸ್ಟಾರ್ ಕುಟುಂಬದ ಅಳಿಯ ಆಗುತ್ತಾರಾ ಪ್ರಭಾಸ್: ನಿಹಾರಿಕಾ ಹೇಳಿದ್ದೇನು?

    ಇದು ಸಂಭ್ರಮಿಸುವ ಸಮಯವಲ್ಲ

    ಇದು ಸಂಭ್ರಮಿಸುವ ಸಮಯವಲ್ಲ

    'ಮದುವೆಯನ್ನು ಮುಂದೂಡದೆ ಈ ವೇಳೆಯೇ ನಡೆಸುವ ನಿರ್ಧಾರವನ್ನು ಎಲ್ಲರೂ ಸೇರಿ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಸಂತೋಷವಿದೆ' ಎಂದು ಅಂಜಲಿ ಹೇಳಿದ್ದಾರೆ. 'ಇದು ಸಂಭ್ರಮ ಪಡುವ ಸಮಯವಲ್ಲ. ಏಕೆಂದರೆ ಇಡೀ ಜಗತ್ತು ಸಂಕಷ್ಟದಲ್ಲಿದೆ. ನಾವು ಯಾವಾಗ ಬೇಕಾದರೂ ಸಂಭ್ರಮಾಚರಣೆ ಮಾಡಬಹುದು' ಎಂದು ಮಣಿಕಂದನ್ ತಿಳಿಸಿದ್ದಾರೆ.

    English summary
    Malayalam actor Manikandan Achari ties knot with girlfriend Anjali during lockdown in a temple and donates money to Kerala CM fund.
    Sunday, April 26, 2020, 19:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X