Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಅಮೂಲ್ಯ ಗುಂಗಿನಲಿ ಬಸವರಾಜ್ ಬದುಕು ಬರ್ಬಾದ್
ಬಸವರಾಜ್ ಪಾಲಿಗೆ ಮಾತೆತ್ತಿದರೆ ಅಮೂಲ್ಯ, ಕೂತು ನಿಂತರೆ, ಊಟ ನಿದ್ದೆಯಲ್ಲಿ ಎಲ್ಲೆಲ್ಲೂ ಅಮೂಲ್ಯ ಆವರಿಸಿಕೊಂಡಿದ್ದಾರೆ. ಈತನನ್ನೇ ನಂಬಿಕೊಂಡು ಜೀವನಬಂಡಿ ಸಾಗಿಸುತ್ತಿರುವ ಕುಟುಂಬ ಏನು ಮಾಡುವುದೆಂದು ತೋಚದೆ ಕಂಗಾಲಾಗಿವೆ.
ಚಿತ್ರವನ್ನು ಮೂರು ಬಾರಿ ನೋಡಿದ ಬಸವರಾಜ್ ಬರಬರುತ್ತಾ ಅಮೂಲ್ಯಾ ಗುಂಗಿಗೆ ಒಳಗಾಗಿದ್ದಾನೆ. ಒಂದೆರಡು ದಿನಗಳ ನಂತರ ಸುಧಾರಿಸಿಕೊಳ್ಳ ಬಹುದು ಎನ್ನುವ ಕುಟುಂಬದ ನಂಬಿಕೆ ಹುಸಿಯಾಗಿದೆ. ದಿಕ್ಕೇ ತೋಚದ ಕುಟುಂಬದ ಗೋಳು ನೋಡಲಾಗದು. ಹಲವು ವರ್ಷಗಳಿಂದ ಬಸವರಾಜ್ ಕುಟುಂಬಕ್ಕೆ ಈ ನೋವಿನಿಂದ ಹೊರಬರಲಾಗುತ್ತಿಲ್ಲ.
ಶಿಸ್ತಿನಿಂದ ದುಡಿದು ಕುಟುಂಬದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದ ಬಸವರಾಜ್ ಪಾಲಿಗೆ ಚೆಲುವಿನಚಿತ್ತಾರದ ನಾಯಕಿ ಅಮೂಲ್ಯ ಈಗ ಸರ್ವಶ್ವ. ತಾಯಿ, ತಂಗಿ, ನೆಂಟರಿಷ್ಟರು, ಆಜುಬಾಜಿನವರು ಏನೇ ಮಾತಾಡಿದರೂ ಬಸವರಾಜ್ ಉತ್ತರ..ಅಮೂಲ್ಯ .. ಅಮೂಲ್ಯ..ಅಮೂಲ್ಯ.
ಈ ಚಿತ್ರ ಬಿಡುಗಡೆಯಾದಾಗ ಬಹಳಷ್ಟು ಪ್ರೇಮಿಗಳು ಮನೆಯಿಂದ ಪರಾರಿಯಾದ ಘಟನೆ ನಿಮಗೆ ಗೊತ್ತಿರುವ ವಿಚಾರ. ಆ ಪಟ್ಟಿಗೆ ಇದು ಮತ್ತೊಂದು ಸೇರ್ಪಡೆ, ಆದರೆ ಚಿತ್ರಕಥೆ ಬೇರೆಯಷ್ಟೇ. ಚಿತ್ರರಸಿಕರು ಚಿತ್ರವನ್ನು ಒಂದು ಮನೋರಂಜನೆಗಾಗಿ ನೋಡಿ ಅದರಲ್ಲಿರುವ ಒಳ್ಳೆತನವನ್ನು ತನ್ನದಾಗಿಸಿ ಕೊಂಡರೆ ಒಳ್ಳೆಯದಲ್ಲವೇ.. ಇಲ್ಲವಾದಲ್ಲಿ ಇಂತಹ ಇನ್ನಷ್ಟು ಲೇಖನ ನಾವು ಬರೆಯದೆ ಬೇರೆ ವಿಧಿಯಿಲ್ಲ.