Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನಾನು ಕೂಡ 'ಕೆಜಿಎಫ್' ನಿರ್ಮಾಪಕ.. ಸ್ಟಾರ್ ಆಗುವುದಕ್ಕೆ ಮೊದಲೇ ನಾನು ಸೂಪರ್ಸ್ಟಾರ್"-ಯಶ್
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ಈ ವರ್ಷದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಕೆಜಿಎಫ್ 2' ಮೊದಲ ಸ್ಥಾನದಲ್ಲಿದೆ. ಆದರೆ, ಸಿನಿಮಾ ರಿಲೀಸ್ ಆಗಿ ಏಳೆಂಟು ತಿಂಗಳುಗಳೇ ಆದರೂ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ.
'ಕೆಜಿಎಫ್ 2' ಸಕ್ಸಸ್ ಕಂಡ ಬಳಿಕ ಯಶ್ ಹೆಚ್ಚು ಸಂದರ್ಶನಗಳನ್ನೂ ನೀಡಿಲ್ಲ. ಹೊಸ ಸಿನಿಮಾ ಬಗ್ಗೆ ಹೇಳಿಯೂ ಇಲ್ಲ. ಇನ್ನೇನು 2022 ಮುಗಿಯುತ್ತಿರುವ ವೇಳೆ ಯಶ್ ಸಂದರ್ಶನ ನೀಡಿದ್ದಾರೆ. ಫಿಲ್ಮ್ ಕಂಪಾನಿಯನ್ಗೆ ಜೊತೆ ಕೆಲವು ಗುಟ್ಟುಗಳನ್ನು ಬಿಚ್ಚಿದ್ದಾರೆ.
ಕಾಲ್
ಮಾಡಿ
ಬಯ್ದಿದ್ದೆ;
ತನ್ನ
ಬಗ್ಗೆ
ಇಲ್ಲದ್ದನ್ನು
ಹೇಳಿ
ಬಿಟ್ಟಿ
ಕ್ರೆಡಿಟ್
ತೆಗೆದುಕೊಂಡವನ
ಬಗ್ಗೆ
ಯಶ್
ಮಾತು!
ಈ ಸಂದರ್ಶನದಲ್ಲಿ ಯಶ್ 'ಕೆಜಿಎಫ್ 2' ಸಿನಿಮಾ ಬಗ್ಗೆ, ಮುಂದಿನ ಪ್ರಾಜೆಕ್ಟ್ ಬಗ್ಗೆ, ಚಿತ್ರರಂಗದಲ್ಲಾಗುತ್ತಿರುವ ಬದಲಾವಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ರಾಕಿಂಗ್ ಸ್ಟಾರ್ ಯಶ್ ಮುಂದಿನ ಹೆಜ್ಜೆ ಏನು? 'ಕೆಜಿಎಫ್ 2' ಬಗ್ಗೆ ಇದೇ ಮೊದಲ ಬಾರಿಗೆ ಗುಟ್ಟು ಬಿಚ್ಚಿಟ್ಟಿದ್ದಾರೆ.

ನಾನು 'ಕೆಜಿಎಫ್' ನಿರ್ಮಾಪಕ ಕೂಡ ಹೌದು
'ಕೆಜಿಎಫ್ 2' ಸಿನಿಮಾ ಬಗ್ಗೆ ಯಶ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ "ನಾನು ಕೂಡ ಕೆಜಿಎಫ್ ಸಿನಿಮಾದ ನಿರ್ಮಾಪಕ" ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನಾನು ಯಾವತ್ತೂ ಹಣಕ್ಕಾಗಿ ಕೆಲಸ ಮಾಡಿಲ್ಲ. ಆದರೆ ನಾನು ಹಣಕ್ಕೆ ಬೆಲೆ ಕೊಡುತ್ತೇನೆ. ನಾನು ಕೆಜಿಎಫ್ ಸಿನಿಮಾ ನಿರ್ಮಾಪಕ ಕೂಡ ಹೌದು. ಕೇವಲ ನಟ ಅಷ್ಟೇ ಅಲ್ಲ. ಹೀಗಾಗಿ ನನಗೆ ಹಣದ ಬೆಲೆ ಏನು ಅಂತ ಗೊತ್ತು. ಆದರೆ ಹಣ ನನ್ನನ್ನು ಖುಷಿ ಪಡಿಸುವುದಿಲ್ಲ. ಮುಂದಿನಿ ನಿಲ್ದಾಣಕ್ಕೆ ಹೋಗುವುದಕ್ಕೆ ಹಣ ಅನ್ನೋದು ಒಂದು ಪವರ್ ಇದ್ದಂತೆ." ಎಂದಿದ್ದಾರೆ.

ನಾನು 'ಕೆಜಿಎಫ್'ನಲ್ಲೇ ಮುಳುಗಿಲ್ಲ
"ನೀವು ಕೇವಲ ನಿಮ್ಮ ಭೂತಕಾಲದ ಬಗ್ಗೆ ಮಾತಾಡಬೇಡಿ. ಅದು ಮುಗಿದ ಅಧ್ಯಾಯ. ನನಗೆ ಹಿಂದಿನದನ್ನು ಮಾತಾಡುವುದಕ್ಕೆ ಇಷ್ಟವಿಲ್ಲ. 2014ರಲ್ಲಿ ನಾನು ಕೆಜಿಎಫ್ ಬಗ್ಗೆ ಕನಸುಕಂಡಿದ್ದೆ. ಆ ಬಳಿಕ ಕಾರ್ಯರೂಪ ತರುವುದಾಗಿತ್ತು. ಜೊತೆ ಅದನ್ನು ನಂಬುವ ಜನರನ್ನು ಸೇರಿಸುವುದಾಗಿತ್ತು. ನಾನು ಕೆಜಿಎಫ್ನಲ್ಲೇ ಮುಳುಗಿಲ್ಲ. ನಾನು ಬೇರೆ ಏನನ್ನೋ ಯೋಚನೆ ಮಾಡುತ್ತಿದ್ದೇನೆ. ಮುಂದೆ ಏನು ಮಾಡಬೇಕು? ಇಂತಹದ್ದೇ ಒಂದಿಷ್ಟು ಆಲೋಚನೆಗಳಿವೆ." ಎಂದು ಯಶ್ ಹೇಳಿದ್ದಾರೆ.

'ಹೆಚ್ಚು ಸಿನಿಮಾ ಮಾಡು ಅಂತ ಸಲಹೆ ಕೊಡ್ತಾರೆ'
"ನನಗೆ ಸುಮಾರು ಜನರು ಹೇಳುತ್ತಿದ್ದಾರೆ. ಏನು ಮಾಡುತ್ತಿದ್ದೀಯಾ? ಇದೇ ಟೈಂ. ನೀನು ಸಿನಿಮಾಗಳನ್ನು ಒಪ್ಪಿಕೊಳ್ಳಬೇಕು. ನಾನು ನನ್ನ ಲೈಫ್ನಲ್ಲಿ ಅಂತಹದ್ದು ಏನನ್ನೂ ಮಾಡಿಲ್ಲ. ಆರಂಭದ ದಿನಗಳಲ್ಲಿ ಒಂದರ ಹಿಂದೊಂದು ಸಿನಿಮಾ ಮಾಡಿದ್ದೆ. ಉತ್ತರ ಕರ್ನಾಟಕದ ಸಿನಿಮಾ, ನಿರ್ದೇಶಕರ ಸಿನಿಮಾ, ನಿರ್ಮಾಪಕರ ಸಿನಿಮಾ ಅಂತ ಮಾಡಿದ್ದೆ. ಆದರೆ, ಒಮ್ಮೆ ನೀವು ಇವೆಲ್ಲವನ್ನು ದಾಟಿ ಬಂದ ಮೇಲೆ ಒಬ್ಬ ನಟನಾಗಿ ಘನತೆಯನ್ನು ಕಾಪಾಡಿಕೊಳ್ಳಬೇಕು."

'ಸ್ಟಾರ್ ಆಗುವುದಕ್ಕೆ ಮೊದಲ ಸೂಪರ್ಸ್ಟಾರ್ ಆಗಿದ್ದೆ'
"ನೀನು ಸ್ಟಾರ್ ಆಗಿದ್ದೀಯ ಹೇಗೆ ಅನಿಸುತ್ತಿದೆ ಅಂತ ಕೆಲವರು ಕೇಳುತ್ತಾರೆ. ಅವರಿಗೆ ನಾನು ಮೊದಲೇ ಸೂಪರ್ಸ್ಟಾರ್ ಆಗಿದ್ದೆ. ಜನರು ಅದನ್ನು ಒಪ್ಪಿಕೊಳ್ಳಲು ಸಮಯ ತೆಗೆದುಕೊಂಡರು ಎಂದು ಹೇಳುತ್ತಿದೆ. ಸಿನಿಮಾ ಕೂಡ ನಂಬಿಕೆ. ನಾನು ಹೆಚ್ಚೇನು ಯೋಚನೆ ಮಾಡುವುದಿಲ್ಲ. ನಾನು ಜನರನ್ನು ರೋಚಕ ರೈಡ್ಗೆ ಕರೆದುಕೊಂಡು ಹೋಗುತ್ತೇನೆ. ಆಮೇಲೆ ಕರೆದುಕೊಂಡು ಬಿಡುತ್ತೇನೆ ಅಷ್ಟೇ."

'ಕೆಜಿಎಫ್ ಮಾಡಿದ್ದು ಚಿತ್ರರಂಗಗೋಸ್ಕರ '
"ಒಂದು ಕೆಜಿಎಫ್ ಕನ್ನಡ ಚಿತ್ರರಂಗವನ್ನು ಬದಲಿಸಲು ಸಾಧ್ಯವಿಲ್ಲ. ನಾವು ಯಾಕೆ ಕೆಜಿಎಫ್ ಸಿನಿಮಾ ಮಾಡಿದ್ವಿ. ಬೇರೆಯವರ ಬಗ್ಗೆ ಗೊತ್ತಿಲ್ಲ. ನನ್ನ ಚಿತ್ರರಂಗಗೋಸ್ಕರ ನಾನು ಈ ಸಿನಿಮಾವನ್ನು ಮಾಡಿದ್ದೇನೆ. ಕಾಂತಾರ ಸಿನಿಮಾ ಗೆದ್ದಾಗ ನಾನು ತುಂಬಾನೇ ಖುಷಿ ಪಟ್ಟಿದ್ದೆ. ರಿಷಬ್ ಶೆಟ್ಟಿಗೆ ಈ ಯಶಸ್ಸು ದಕ್ಕಲೇಬೇಕು. ನೀವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ನೋಡ್ಬೇಕು. ಅದ್ಭುತ ಸಿನಿಮಾ. ಇವತ್ತು ಆ ಸಿನಿಮಾವನ್ನು ರಿಲೀಸ್ ಮಾಡಿದ್ದರೆ, ದೊಡ್ಡ ಮಟ್ಟಕ್ಕೆ ರೀಚ್ ಆಗುತ್ತಿತ್ತು." ಎಂದು ಯಶ್ ಸಂದರ್ಶನದಲ್ಲಿ ಹೇಳಿದ್ದಾರೆ.