Don't Miss!
- News ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೂಜಾಗಾಂಧಿಗೆ ಸೂಕ್ತ ಕನ್ನಡ ವರ ಬೇಕಾಗಿದೆ
ಪಂಜಾಜಿನ ಭಲ್ಲೆ ಭಲ್ಲೆ ಬೆಡಗಿ ಪೂಜಾ ಕನ್ನಡ ವಂಶದ ಸರಗಮಪದನಿಸ ಹುಡುಗನೊಬ್ಬನನ್ನು ವರಿಸುವ ಸುದ್ದಿ ಕೇಳಿದ ಅನೇಕ ಹುಡುಗರು ಚಕಿತರಾಗಿದ್ದಾರೆ. ಆದರೆ, ದುಖಃದ ಸಂಗತಿ ಎಂದರೆ ಪೂಜಾ ತಮ್ಮ ಜಾತಕವನ್ನಾಗಲೀ ಅಥವಾ ಕಾಂಟ್ಯಾಕ್ಟ್ ವಿಳಾಸವನ್ನಾಗಲೀ ಬಹಿರಂಗಪಡಿಸಿಲ್ಲ.
ಟಿವಿ9 ನ ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪೂಜಾಗಾಂಧಿ, ನಾನು ರಾಜಕೀಯಕ್ಕೆ ಸೇರಿದ್ದು ( ಜನತಾದಳ, ಸೆಕ್ಯುಲರ್) ಯಾವುದೇ ಲಾಭ ಉದ್ದೇಶ ಇಟ್ಟು ಕೊಂಡಲ್ಲ. ಮಾಜಿ ಪ್ರಧಾನಿ ದೇವೇಗೌಡ ನನಗೆ ರೋಲ್ ಮಾಡೆಲ್. ಯಾವುದೇ ಸಪೋರ್ಟ್ ಇಲ್ಲದೆ ಅವರು ದೇಶದ ಪ್ರಧಾನಿಯಾಗಿದ್ದು ನನಗೆ ಹೆಮ್ಮೆ ಎನಿಸುತ್ತದೆ. ಅವರ ರೈತರ ಪರ ಕಾಳಜಿ ಮೆಚ್ಚುವಂತದ್ದು ಎಂದು ಮಣ್ಣಿನಮಗನನ್ನು ಮನಸಾರೆ ಹೊಗಳಿದರು.
ನಾನು ಹುಟ್ಟಿ ಬೆಳೆದದ್ದು ಪಂಜಾಬ್ ನಲ್ಲಿ ಆದರೆ ನಾನು ಮತ್ತೆ ಪಂಜಾಬ್ ಗೆ ಹೋಗುವ ಪ್ರಮೇಯವೇ ಇಲ್ಲ. ನನ್ನ ತಂದೆತಾಯಿವರನ್ನು ಇಲ್ಲೇ ಕರೆಸಿ ಕೊಂಡಿದ್ದೇನೆ. ನನ್ನ ಮುಂದಿನ ಉಸಿರು ಕರ್ನಾಟಕದಲ್ಲೇ ಎಂದಿದ್ದಾರೆ.
ನಾನು ಜಾತ್ಯಾತೀತ ಜನತಾದಳ ಪಕ್ಷದ ಯಾವುದೇ ನಿರ್ಣಯಕ್ಕೆ ಬದ್ದನಾಗಿದ್ದೇನೆ. ಪಕ್ಷದ ಮುಖಂಡರು ನೀಡುವ ಯಾವುದೇ ಜನಪರ ಕೆಲಸಕ್ಕೆ ನಾನು ನನ್ನನ್ನು ಅರ್ಪಿಸ ಕೊಳ್ಳುತ್ತೇನೆ. ಬರುವ ತಿಂಗಳು ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುವ ಪಕ್ಷದ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ ಎಂದು ಪೂಜಾಗಾಂಧಿ ಘೋಷಿಸಿದರು.