Don't Miss!
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೌರಿಬಿದನೂರು ಸೀತಾರಾಮ್ ಹೊಸ ಧಾರಾವಾಹಿ
ಇದೇ ಜೂನ್ 4ನೇ ತಾರೀಖು ಬೆಳಗ್ಗೆ 10 ಗಂಟೆಗೆ ಹೊಸ ಧಾರಾವಾಹಿಯ ಚಿತ್ರೀಕರಣ ಆರಂಭವಾಗಲಿದೆ. ಈಟಿವಿ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಜೂನ್ ತಿಂಗಳಾಂತ್ಯಕ್ಕೆ ರಾತ್ರಿ 9.30ರ ಸ್ಲಾಟ್ ನಲ್ಲಿ ಪ್ರಸಾರವಾಗಲಿದೆ.
ಈ ಹಿಂದೆ ಸೀತಾರಾಮ್ ಅವರು ಮಾಯಾಮೃಗ, ಮನ್ವಂತರ, ಮುಕ್ತ ಹಾಗೂ ಮುಕ್ತ ಮುಕ್ತ ಧಾರಾವಾಹಿಗಳ ಮೂಲಕ ಮನೆಮಾತಾದವರು. ಮಧ್ಯಮವರ್ಗದವರ ನೋವು ನಲಿವುಗಳೇ ಅವರ ಧಾರಾವಾಹಿಗಳ ಕಥಾವಸ್ತು. ಮುಕ್ತ ಮುಕ್ತ ಧಾರಾವಾಹಿಯಂತೂ ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿದ್ದು ದಾಖಲೆ ಎಂದೇ ಹೇಳಬೇಕು.
"ಇವರು ಲಾಯರ್ ಆಗಿ ಸಂಪಾದನೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಕೋಟ್ ಹಾಕಿಕೊಂಡೇ ಹೆಸರು, ದುಡ್ಡು ಎರಡನ್ನೂ ಸಂಪಾದನೆ ಮಾಡಿದರು" ಎಂಬ ಡೈಲಾಗ್ ಇತ್ತೀಚೆಗೆ ತೆರೆಕಂಡ ಮಠ ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಲ್ಲಿ ಬರುತ್ತದೆ. ಈ ಬಾರಿಯೂ ಲಾಯರ್ ಕೋಟ್ ಆಗುತ್ತಿದ್ದಾರಾ ಇಲ್ಲವೇ ಎಂಬ ಮಾಹಿತಿ ಸದ್ಯಕ್ಕಿಲ್ಲ.
ಈ ಧಾರಾವಾಹಿಯ ಮುಖ್ಯಪಾತ್ರದಲ್ಲಿ ಟಿ.ಎನ್.ಸೀತಾರಾಮ್, ಸುಂದರ್ ರಾಜ್, ಶ್ರೀನಿವಾಸ ಪ್ರಭು, ಸುಧಾ ಬೆಳವಾಡಿ, ಸುರೇಂದ್ರ ನಾಥ್, ಜಯಲಕ್ಷ್ಮಿ ಪಾಟೀಲ್, ನಾಗರಾಜ ಮೂರ್ತಿ, ರಶ್ಮಿ ಹರಿಪ್ರಸಾದ್, ಸುಷ್ಮಾ ಭಾರದ್ವಾಜ್, ನರೇಶ್, ಶಶಿಕುಮಾರ್, ಗೌರವ್, ದಿವ್ಯಾ, ಜಯದೇವ್, ವರ್ಷಾ, ಸುನಿಲ್, ರವಿಕಶ್ಯಪ್, ಸುರಭಿ ವಸಿಷ್ಠ, ಶಶಾಂಕ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)