Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಧಿ ಕಥೆ ಹೇಳಿ..'ಕಾಂತಾರ'ದ ದಾಖಲೆಯನ್ನೂ ಮುರಿಯಲಿ ಎಂದ ಕಮಲ್ ಹಾಸನ್!
'ಕಾಂತಾರ' ಸಿನಿಮಾದ ಜ್ವರ ಇನ್ನೂ ಕಡಿಮೆ ಆದಂತೆ ಕಾಣುತ್ತಿಲ್ಲ.ಥಿಯೇಟರ್ಗೆ ಬಂದು, ಥಿಯೇಟರ್ನಿಂದ ಓಟಿಟಿಗೆ ಬಂದು, ಓಟಿಟಿಯಿಂದ ಟಿವಿಗೆ ಲಗ್ಗೆ ಇಟ್ಟರೂ ಕಾಂತಾರ ಜಪ ಎಲ್ಲೆಡೆ ಆಗುತ್ತಲೇ ಇದೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ 'ಕಾಂತಾರ' ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಇನ್ನೊಂದು ರಿಷಬ್ ಶೆಟ್ಟಿ ಕೂಡ ಕಮಲ್ ಹಾಸನ್ ಫೋನ್ ಮಾಡಿ ವಿಶ್ ಮಾಡಿದ್ದರ ಬಗ್ಗೆ ಹೇಳಿದ್ದರು.ಈಗ ಅವರು ಬರೆದಿರೋ ಪತ್ರವನ್ನು ಫ್ರೇಮ್ ಹಾಕಿಸಿ, ಆ ಫೋಟೊವನ್ನೇ ಟ್ವೀಟ್ ಮಾಡಿದ್ದಾರೆ.
'ರಿಷಬ್ ಶೆಟ್ಟಿ ಕಂಡ್ರೆ ನನಗೆ ಅಸೂಯೆ': ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಹೀಗಂದಿದ್ಯಾಕೆ?
ಜನವರಿ 3, 2023ರಂದು ಕಮಲ್ ಹಾಸನ್ ರಿಷಬ್ ಶೆಟ್ಟಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ರಿಷಬ್ ಶೆಟ್ಟಿ ಈಗ ರಿವೀಲ್ ಮಾಡಿದ್ದಾರೆ. ಕಮಲ್ ಹಾಸನ್, ರಿಷನ್ ಶೆಟ್ಟಿಗೆ ಬರೆದ ಪತ್ರದ ಸಾರಾಂಶ ಹೀಗಿದೆ.
ಇದು ಪ್ರಶಂಸೆಯ ಪತ್ರ
"ಇದು ನಿಮ್ಮ 'ಕಾಂತಾರ' ಸಿನಿಮಾಗಾಗಿ ತಡವಾಗಿ ಬರೆದ ಪ್ರಶಂಸೆಯ ಪತ್ರ.ನಾನು ಸಿನಿಮಾ ನೋಡಿದ ರಾತ್ರಿಯೇ ಈ ಪತ್ರವನ್ನು ಬರೆಯಬೇಕಿತ್ತು.ನಾನು ಹಾಗೆ ಮಾಡಿದ್ದರೆ, ಆ ಪತ್ರ ಏನೂ ಹೇಳದೆ ಹೋಗಬಹುದಿತ್ತು.ಕಾಂತಾರದಂತಹ ಸಿನಿಮಾ ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಸಿನಿಮಾ ಸದಾ ನಿಮ್ಮಲ್ಲಿ ಅರಳುತ್ತದೆ."
'ದೇವರಿಲ್ಲಿ ತಾಯಿಯಂತೆ ವರ್ತಿಸುತ್ತಾಳೆ'
"ನನ್ನೊಳಗೆ ದೇವರು ಎಂಬುವುದಿಲ್ಲ.ಆದರೂ ದೇವರ ಮೇಲೆ ನಂಬಿಕೆ ಇಟ್ಟವರನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ.ನಮ್ಮ ಪುರಾಣಗಳಲ್ಲಿ ಹೇಳಿರುವಂತೆ ದೇವರುಗಳಲ್ಲಿ ಕರುಣೆಯ ಕೊರತೆಯಿದೆ ಎಂಬುವುದನ್ನು ನಿಜವಾಗಿಯೂ ನಂಬುತ್ತೇನೆ.ನಾವು ದ್ರಾವಿಡರಾಗಿ ಮಾತೃ ಪ್ರಧಾನ ಸಮಾಜವನ್ನು ಹೊಂದಿದ್ದೇವೆ. ನಿಮ್ಮ ಸಿನಿಮಾದ ಕೊನೆ ದೃಶ್ಯ ಕೂಡ ಅದೇನೆ. ಅಲ್ಲಿ ದೇವರು ಆರಂಭದಲ್ಲಿ ತಂದೆಯಂತಿದ್ದದ್ದು ಕೊನೆಯಲ್ಲಿ ತಾಯಿಯಂತೆ ವರ್ತಿಸುತ್ತದೆ."
ಗಾಂಧೀಜಿಯ ಕಥೆ ಹೇಳಿದ ಕಮಲ್ ಹಾಸನ್
ಗಾಂಧೀಜಿಯ ಅಭಿಮಾನಿಯೊಬ್ಬ(ನನ್ನಂತೆ) ವರ್ಣಿಸಿದ ಘಟನೆ ಹೀಗಿದೆ. ಯಾರೋ ಒಬ್ಬರು ಗಾಂಧೀಜಿಯನ್ನು ಹೀಗೆ ಕೇಳುತ್ತಾರೆ." ಜನರು ನಿಮ್ಮನ್ನು ಫಾದರ್ ಆಫ್ ನೇಷನ್ ಎಂದು ಕರೆಯುತ್ತಾರೆ. ನಿಮ್ಮ ಮುಂದಿನ ಗುರಿಯೇನು? ಆಗ ಗಾಂಧೀಜಿ ಹೀಗೆ ಪ್ರತಿಕ್ರಿಯೆ ನೀಡಿದ್ದರು."ನಾನು ಈ ದೇಶದ ತಾಯಿ ಆಗಬೇಕು. ತಾಯಿ ಒಬ್ಬಳಿಂದ ಮಾತ್ರ ಸಹಾನುಭೂತಿ ತೋರಿಸಲು ಸಾಧ್ಯ.ನೀವು ಮಾತಾಡಿದ ತಂದೆಯ ಬಳಿ ಹಲವು ಕೊರತೆಗಳಿವೆ." ಎಂದು ಗಾಂಧೀಜಿ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.
'ಕಾಂತಾರ' ದಾಖಲೆ ಮುರಿಯಲಿ
"ಎಂ ಟಿ ವಾಸುದೇವನ್ ನಾಯರ್ ಅವರ ನಿರ್ಮಲ್ಯಂ ಸಿನಿಮಾವನ್ನು ನೀವು ನೋಡಿರಬಹುದು. ಆ ಕ್ಲಾಸಿಕ್ ಸಿನಿಮಾ ಶೇಡ್ ನಿಮ್ಮ ಸಿನಿಮಾದಲ್ಲಿದೆ. ನಾನು ನಿಮ್ಮ ಬಳಿ ಫೋನ್ನಲ್ಲಿ ಹೇಳಿದಂತೆ, ನಿಮ್ಮ ಮುಂದಿನ ಸಿನಿಮಾ ಮೂಲಕ 'ಕಾಂತಾರ'ದ ದಾಖಲೆಗಳನ್ನೂ ಮುರಿದು ಹಾಕಿ." ಎಂದು ಕಮಲ್ ಹಾಸನ್ ಪತ್ರದಲ್ಲಿ ಬರೆದಿದ್ದಾರೆ.