Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸಿದ್ಲಿಂಗು'ನ ಮೀರಿಸುವಂತಿದೆ 'ಲಂಬೋದರ' ಟ್ರೈಲರ್
Recommended Video
ಲೂಸ್ ಮಾದ ಯೋಗೇಶ್ ಅಭಿನಯಿಸಿದ್ದ 'ಸಿದ್ಲಿಂಗು' ಚಿತ್ರ ನೆನಪಿರಬಹುದು. ಆ ಚಿತ್ರದಲ್ಲಿ ಹದಿಹರೆಯದ ಹುಡುಗನಾಗಿ ಅಭಿನಯಿಸಿ ಯೋಗಿ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದರು. ಇದೀಗ, ಇಂತಹದ್ದೇ ಪಾತ್ರದಲ್ಲಿ ಮತ್ತೊಮ್ಮೆ ಬಂದಿರುವ ಲೂಸ್ 'ಸಿದ್ಲಿಂಗು' ಚಿತ್ರಕ್ಕಿಂತ ಮತ್ತಷ್ಟು ಬೋಲ್ಡ್ ಆಗಿ ನಟಿಸಿದ್ದಾರೆ. ಇದು ಪಡ್ಡೆ ಹುಡುಗರಿಗೆ ಕಿಕ್ ಹೆಚ್ಚಿಸಿದೆ.
ಹೌದು, ಯೋಗೇಶ್ ಅವರ 'ಲಂಬೋದರ' ಚಿತ್ರದ ಟ್ರೈಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಜೊತೆಗೆ ಯುವ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ರಿಲೀಸ್ ಆದ ನಾಲ್ಕು ದಿನಗಳಲ್ಲಿ ಸುಮಾರು 2.1 ಲಕ್ಷ ವೀಕ್ಷಕರು ಟ್ರೈಲರ್ ನೋಡಿದ್ದಾರೆ. ಸದಾ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರೆದುರು ಬರುವ ಯೋಗೇಶ್ ಈ ಚಿತ್ರದಲ್ಲೂ ಅಂತಹದ್ದೇ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಿದ್ದರೂ, ಯೋಗಿ ಬಗ್ಗೆ ಬೇಸರವಾಗಿರುವುದೇಕೆ.? ಮುಂದೆ ಓದಿ.....
ಯೋಗಿ ಫ್ಯಾನ್ಸ್ ಫುಲ್ ಹ್ಯಾಪಿ
'ಲಂಬೋದರ' ಚಿತ್ರದ ಟ್ರೈಲರ್ ನೋಡಿ ಬಹುತೇಕ ಯೋಗಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಾಮಿಡಿ, ಮನರಂಜನೆ ದೃಷ್ಟಿಯಿಂದ ಈ ಸಿನಿಮಾ ಸಕ್ಸಸ್ ಕಾಣಬಹುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ, ಈ ಸಿನಿಮಾ ಪಕ್ಕಾ ಯೂತ್ ಗಾಗಿಯೇ ಮಾಡಿದಂತಿದೆ.
ಬೇಸರ ಮಾಡಿಕೊಂಡವರು ಇದ್ದಾರೆ
ಮತ್ತೊಂದು ವರ್ಗ 'ಲಂಬೋದರ' ಟ್ರೈಲರ್ ಬಗ್ಗೆ ತೀರಾ ಬೇಸರ ವ್ಯಕ್ತಪಡಿಸಿದ್ದಾರೆ. ಲೂಸ್ ಮಾದ ಅವರ ಪಾತ್ರದ ಬಗ್ಗೆ ಮತ್ತು ಅವರ ಸಂಭಾಷಣೆಯ ಬಗ್ಗೆ ಕಿಡಿಕಾರಿದ್ದಾರೆ. ಯಾಕಂದ್ರೆ, ಈ ಟ್ರೈಲರ್ ನಲ್ಲಿ ತುಂಬಾ ಹಸಿಬಿಸಿಯ ಸಂಭಾಷಣೆಯನ್ನ ಬಳಸಲಾಗಿದೆ. ಇದರಿಂದ ಫ್ಯಾಮಿಲಿ ಆಡಿಯೆನ್ಸ್ ಬರುವ ಧೈರ್ಯ ಮಾಡುವುದಿಲ್ಲ ಎನ್ನುತ್ತಿದ್ದಾರೆ.
ಸಿನಿಮಾ ಬೇರೆ ಇದೆ
ಇದು ಟ್ರೈಲರ್ ಮಾತ್ರ. ಚಿತ್ರದಲ್ಲಿ ಬೇರೆನೇ ಇದೆ ಎಂಬುದು ಚಿತ್ರತಂಡದ ಧೈರ್ಯ. ಹಾಸ್ಯ ಪ್ರಧಾನ ಈ ಚಿತ್ರದಲ್ಲಿ ಯೋಗಿ ಅವರು ಶಾಲಾ ವಿದ್ಯಾರ್ಥಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಆ ವಯಸ್ಸಿನಲ್ಲಿ ಹುಡುಗರು ಹೇಗಿರುತ್ತಾರೆ ಎಂಬುದನ್ನ ಟ್ರೈಲರ್ ನಲ್ಲಿ ತೋರಿಸಲಾಗಿದೆ.
ಯೋಗಿ ಜೊತೆ ಆಕಾಂಕ್ಷ ನಟನೆ
ರಘುಶಾಸ್ತ್ರಿ(ರನ್ ಆಂಟೋನಿ), ಪ್ರಶಾಂತ್(ರಂಗನ ಸ್ಟೈಲ್) ಹಾಗೂ ಕೋಲಾರ ಸೀನ(ಜಸ್ಟ್ ಮದ್ವೇಲಿ) ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವವಿರುವ ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸುತ್ತಿರುವ ಈ ಚಿತ್ರಕ್ಕೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವಿದೆ. ಲೂಸ್ ಮಾದ ಯೋಗಿ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಆಕಾಂಕ್ಷ. ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಸಿದ್ದು ಮೂಲಿಮನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸದ್ಯದಲ್ಲೇ ಬಿಡುಗಡೆ
ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ಹಾಗೂ ಹರೀಶ್ ಗಿರಿಗೌಡ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ರಚಿಸಿದ್ದಾರೆ. ಕೆ.ಕೃಷ್ಣರಾಜ್ ಹಾಗೂ ಶೈಲೇಶ್ ರಾಜ್ ಸಂಭಾಷಣೆ ಬರೆದಿದ್ದಾರೆ.