Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಉಪ್ಪು ಹುಳಿ ಖಾರ': ರುಚಿ ಹೆಚ್ಚಿಸಲು ಗ್ಲಾಮರ್ ಗೊಂಬೆ ಎಂಟ್ರಿ..!
ಸ್ಯಾಂಡಲ್ ವುಡ್ ನ ಖ್ಯಾತ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಆಕ್ಷನ್ ಕಟ್ ಹೇಳುತ್ತಿರುವ 'ಉಪ್ಪು ಹುಳಿ ಖಾರ' ಚಿತ್ರ ಆಗಾಗ ರುಚಿ ತಪ್ಪಿ ಸೆಪ್ಟೆಂಬರ್ 5 ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಇನ್ನೂ ಸಹ ಶೂಟಿಂಗ್ ಹಂತದಲ್ಲೇ ಇದೆ. ಈ ಸಿನಿಮಾದ ರುಚಿ ಹೆಚ್ಚಿಸಲು ಈಗ ಇಮ್ರಾನ್ ಸರ್ದಾರಿಯಾ ಕನ್ನಡದ ಗ್ಲಾಮರ್ ಗೊಂಬೆ ಒಬ್ಬರನ್ನು ಸೇರ್ಪಡೆ ಮಾಡಿದ್ದಾರೆ.[ಮಾಲಾಶ್ರೀ 'ಉಪ್ಪು-ಹುಳಿ-ಖಾರ' ಚಿತ್ರದ ಶೂಟಿಂಗ್ ಮತ್ತೆ ನಿಂತ್ಹೋಯ್ತು.!]
ಹೌದು 'ಉಪ್ಪು ಉಳಿ ಖಾರ' ಸಿನಿಮಾ ತಂಡದ ಕಡೆಯಿಂದ ಬಂದ ಇತ್ತೀಚಿನ ಮಾಹಿತಿ ಪ್ರಕಾರ ಸಿನಿಮಾದ ರುಚಿ ಹೆಚ್ಚಿಸಲು ಇಮ್ರಾನ್ ಗ್ಲಾಮರ್ ಗೊಂಬೆ ರಾಗಿಣಿ ದ್ವಿವೇದಿ ರವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮೂರು ಶ್ರೀ ಗಳು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ರಾಗಿಣಿ ಎನ್ ಮಾಡೋದಿಕ್ಕೆ ಬಂದ್ರು ಇಲ್ಲಿದೆ ನೋಡಿ ಮಾಹಿತಿ.[ಇಮ್ರಾನ್ 'ಉಪ್ಪು-ಹುಳಿ'ಗೆ 'ಖಾರ' ಹಾಕಲಿರುವ ಹೊಸ ಹೀರೋ ಯಾರು.?]
'ಉಪ್ಪು ಹುಳಿ ಖಾರ' ದಲ್ಲಿ ರಾಗಿಣಿ ಪಾತ್ರವೇನು?
ಇಮ್ರಾನ್ ಸರ್ದಾರಿಯಾ ಆಕ್ಷನ್ ಕಟ್ ಹೇಳುತ್ತಿರುವ 'ಉಪ್ಪು ಹುಳಿ ಖಾರ' ಚಿತ್ರದಲ್ಲಿ ರಾಗಿಣಿ ದ್ವಿವೇದಿ ರವರು ಹಾವು ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.['ಮಶಿನ್' ಜೊತೆ ಬಿಟೌನ್ ನಲ್ಲಿ ಪತ್ತೆಯಾದ ಇಮ್ರಾನ್ ಸರ್ದಾರಿಯಾ]
ಇಮ್ರಾನ್ ಹೇಳಿದ್ದೇನು?
ಈಗಾಗಲೇ ರಾಗಿಣಿ ಹಾಗೂ ಇಮ್ರಾನ್ ಸರ್ದಾರಿಯಾ ರವರ ಕಾಂಬಿನೇಷನ್ ನಲ್ಲಿ ಹಲವು ಸಾಂಗ್ ಗಳು ಈ ವರೆಗೆ ಹಿಟ್ ಆಗಿವೆ. ಆದ್ದರಿಂದ ಇಮ್ರಾನ್ ತಮ್ಮ ನಿರ್ದೇಶನದ 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿ ವಿಶೇಷವಾಗಿ ರಾಗಿಣಿ ರವರನ್ನು ತೋರಿಸಲು ಡಿಸೈಡ್ ಮಾಡಿ ಅಪ್ರೋಚ್ ಮಾಡಿದ್ದಾರೆ. ಸಿನಿಮಾದಲ್ಲಿ ರಾಗಿಣಿ ಏನ್ ಮಾಡ್ತಾರೆ? ಮುಂದೆ ಓದಿ..
ರಾಗಿಣಿ ದ್ವಿವೇದಿ
ಹೌದು, ರಾಗಿಣಿ ದ್ವಿವೇದಿ ರವರು 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿ ನಾಗರಹಾವಿನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮೊದಲು ಇಮ್ರಾನ್ ಈ ಪಾತ್ರದ ಬಗ್ಗೆ ಹೇಳಿದ ತಕ್ಷಣ ಗ್ಲಾಮರ್ ಗೊಂಬೆ ಸಿಕ್ಕಾಪಟ್ಟೆ ವರಿ ಮಾಡ್ಕೋಂಡಿದ್ರಂತೆ. ನಂತರ ಒಂದು ದಿನ ಹಾವಿನ ಪಾತ್ರ ತರಬೇತಿ ಪಡೆದು, ಮೂರು ದಿನಗಳ ಕಾಲ ಚಿತ್ರ ಶೂಟಿಂಗ್ ಮಾಡಲಾಯಿತು. ರಾಗಿಣಿ ಸ್ನೇಕ್ ಡ್ಯಾನ್ಸ್ ಮಾಡುವುದು ಸಿನಿಮಾದಲ್ಲಿಯೇ ಹೈಲೆಂಟ್ ಆಗಿದೆ ಎಂದು ಇಮ್ರಾನ್ ಹೇಳಿದ್ದಾರೆ.
ಉಪ್ಪು ಹುಳಿ ಖಾರ
'ಉಪ್ಪು ಹುಳಿ ಖಾರ' ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ನಟಿ ಅನುಶ್ರೀ ಮತ್ತು ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಅವರು ಕೂಡ ಮುಖ್ಯ ನಾಯಕಿಯರಾಗಿ ಮಿಂಚಿದ್ದಾರೆ. ಈಗ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ವಿಶೇಷ ಪಾತ್ರದಲ್ಲಿ ನಾಲ್ಕನೇ ಸ್ತ್ರಿ ಆಗಿ ರಾಗಿಣಿ ರವರು ಕಾಣಿಸಿಕೊಳ್ಳುತ್ತಿದ್ದಾರೆ.