ವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ
*ಜಯಂತಿ
ಹೊಸಬರ ಅಬ್ಬರ ಎಷ್ಟರಮಟ್ಟಿಗೆ ಎದ್ದು ಕಾಣಿಸಿತೊ, ವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ. ಅತ್ತುಕರೆಯುವುದರಿಂದ ಹಿಡಿದು ಜಗಳ ಕೊಲೆಯವರೆಗೆ ಹಲವು ಕಹಿ ಘಟನೆಗಳಿಗೆ 2008 ಸಾಕ್ಷಿಯಾಯಿತು.
ಸೃಜನಶೀಲತೆಯ ಸುಲಿಗೆ

ಅಳುವಿನ ಗಂಗಾ ಕಾವೇರಿ

ಹೊಸ ಹುಡುಗಿ ಅಂಕಿತಾ ಕಣ್ಣೀರು ಸುರಿಸಿದ ಮತ್ತೊಬ್ಬ ನಟಿ. ಆಕೆ ಕಣ್ಣೀರು ಸುರಿಸಿದ್ದು ನಿರುದ್ಯೋಗಿ ಚಿತ್ರದ ಸೆಟ್ನಲ್ಲಿ. ಫೋಟೊ ಸೆಷನ್ನಲ್ಲಿ ನಾಯಕನನ್ನು ಅಪ್ಪಿಕೊಳ್ಳಲು ಹಿಂಜರಿಯುತ್ತಿದ್ದ ಹುಡುಗಿಯನ್ನು ನಿರ್ದೇಶಕ ನಾಗ್ ಹುಣಸೋಡ್ ಸಿನಿಮಾದಿಂದಲೇ ಹೊರಕಳಿಸಿದಾಗ ಅಂಕಿತಾ ಕಣ್ಣೀರು ಹಾಕಿದರು.
ಅಪಸ್ವರ

ರಕ್ತಕಣ್ಣೀರು!
ಮಾದೇಶ ಚಿತ್ರದ ನಿರ್ಮಾಪಕ ಮೋಜಿನ ನಶೆಯಲ್ಲಿ ತನ್ನ ಗೆಳೆಯನಿಗೇ ಗುಂಡಿಕ್ಕಿ ಕೊಂದ. ಪಾಪ, ಆ ಹುಡುಗನಿಗೆ ಮದುವೆ ನಿಶ್ಚಯವಾಗಿತ್ತು! ಮತ್ತೊಂದು ಕೊಲೆ ಮುಂಬಯಿಯಲ್ಲಿ ನಡೆಯಿತು. ಈ ಪ್ರಕರಣದಲ್ಲಿ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಮೋನಿಕಾ ಸಿಲುಕಿಕೊಂಡರು. ನಿರ್ಮಾಪಕ-ನಟ ಮದನ್ ಪಟೇಲ್ ಸಿನಿಮಾ ಛಾಯಾಗ್ರಾಹಕರೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದರೂ, ಆ ಪ್ರಕರಣ ಸಾಕಷ್ಟು ಸುದ್ದಿಯಾಗಲಿಲ್ಲ.
ಇಂದ್ರಜಿತ್ ಖೇಣಿ!

ಶಿವಣ್ಣ ಮೀಮಾಂಸೆ
ಸಿನಿಮಾ ನೋಡಿ ಯಾರು ಉದ್ಧಾರವಾಗಿದ್ದಾರೆ ಎನ್ನುವ ಮಾತನ್ನು ಸಮರ್ಥಿಸುವಂತೆ ನಟ ಶಿವರಾಜ್ಕುಮಾರ್ ಸಿನಿಮಾ ನೋಡಿ ಏನನ್ನಾದರೂ ಕಲಿಯುವ ಕಾಲ ಮುಗಿಯಿತು ಎಂದು ಹೇಳುವ ಮೂಲಕ ಪೇಚಿಗೆ ಸಿಕ್ಕಿಕೊಂಡರು. ಮಾದೇಶ ಚಿತ್ರದಲ್ಲಿನ ಹಿಂಸೆಯ ದೃಶ್ಯಗಳನ್ನು ಸಮರ್ಥಿಸಿಕೊಂಡ, ಕಲಾವಿದರಿಗೆ ಸಾಮಾಜಿಕ ಬದ್ಧತೆ ಇರಬೇಕಾಗಿಲ್ಲ ಎಂದ ಶಿವಣ್ಣನ ಮೇಲೆ ಸಾತ್ವಿಕರು ಸಿಟ್ಟಾದರು. ಅವರಿಗೆಲ್ಲ ರಾಜಕುಮಾರ್ ನೆನಪಾಗಿದ್ದರು.
ಕಚಕಚ ಕತ್ತರಿ

ಗೋವಾ ಚಿತ್ರೋತ್ಸವದಲ್ಲಿ ಆತಿಥ್ಯ ಸರಿಯಾಗಿಲ್ಲವೆಂದು ಹಿರಿಯ ನಟಿ ಬಿ.ಸರೋಜಾದೇವಿ ಮುನಿಸಿಕೊಂಡದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ನಟಿ ವರ್ಷಾ ನಡುವಿನ ಪ್ರೇಮ ವದಂತಿ, 'ವೀರ ಮದಕರಿ" ಶೀರ್ಷಿಕೆ ವಿರುದ್ಧ ಕಥೆಗಾರ ಬಿ.ಎಲ್.ವೇಣು ದನಿ ಎತ್ತಿದ್ದು ವರ್ಷದ ಕಿರಿಕಿರಿಗಳಲ್ಲಿ ಎದ್ದುಕಾಣುವ ಸ್ವಾರಸ್ಯಗಳು.


Click it and Unblock the Notifications











