Don't Miss!
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ಸ್ಮಾರಕ ಹೋರಾಟಕ್ಕೆ ಕೈಜೋಡಿಸಲು ಅಭಿಮಾನಿಗಳಿಗೆ ಕರೆ ನೀಡಿದ ಸುದೀಪ್
ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಹೋರಾಟಕ್ಕೆ ಕಿಚ್ಚ ಸುದೀಪ್ ಪೂರ್ಣ ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅಭಿಮಾನಿ ಸಂಘಟನೆಗಳಿಗೆ ಈ ಹೋರಾಟಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.
ನವೆಂಬರ್ 1 ರಂದು ಡಾ ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣು ಸ್ಮಾರಕ ವಿಚಾರವಾಗಿ ಚಳುವಳಿ ನಡೆಯಲಿದೆ. ಈ ಹೋರಾಟಕ್ಕೆ ನಾನು ಕಾರಣಾಂತರಗಳಿಂದ ಭಾಗಿಯಾಗಲು ಸಾಧ್ಯವಾಗಲಿಲ್ಲ. ಹೈದ್ರಾಬಾದ್ ನಲ್ಲಿ ಶೂಟಿಂಗ್ ಮಾಡುತ್ತಿದ್ದೇನೆ, ಬಿಟ್ಟು ಬರಲು ಆಗಿಲ್ಲ. ದಯವಿಟ್ಟು ನನ್ನ ಅಭಿಮಾನಿಗಳು ಈ ಹೋರಾಟದಲ್ಲಿ ಭಾಗವಹಿಸಿ ಎಂದು ಕೇಳಿಕೊಂಡಿದ್ದಾರೆ.
ವಿಷ್ಣುದಾದಾ ಜೊತೆ ಬಾಂಧವ್ಯ ಬೆಸೆದಿದ್ದು ಹೇಗೆಂದು ಹೇಳಿಕೊಂಡ ಸುದೀಪ್
'ಇದು ಬಹಳ ಮಹತ್ವವಾದ ಕಾರ್ಯ. ಇದರಲ್ಲಿ ಫಲಿತಾಂಶ ಬರಲೇಬೇಕು. ನಿಮ್ಮಲ್ಲರ ಸಹಕಾರ ಇರಲಿ. ಈ ಚಳವಳಿ ಯಶಸ್ವಿಯಾಗಲಿ. ಆದಷ್ಟೂ ಬೇಗ ಸರ್ಕಾರ ಇದನ್ನ ಬಗೆಹರಿಸಿಲಿ, ನಿಮಗೆ ನ್ಯಾಯ ಸಿಗಲಿ. ಶಾಂತಿಯುವ ಹೋರಾಟವಿರಲಿ' ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.
ವಿಷ್ಣು ಸ್ಮಾರಕ ವಿಚಾರಕ್ಕೆ ನಾವೇ ಮುಂದೆ ನಿಲ್ಲುತ್ತೇವೆ ಎಂದ ಶಿವಣ್ಣ
ಕನ್ನಡ ಚಿತ್ರರಂಗದ ನಟರು ಕೈಜೋಡಿಸಿದರೇ ಖಂಡಿತಾ ವಿಷ್ಣು ಸ್ಮಾರಕ ನಿರ್ಮಾಣ ಕೆಲಸ ಆಗುತ್ತೆ ಎಂಬ ಭಾವನೆ ಸಾಮಾನ್ಯ ಜನರಲ್ಲಿದೆ. ಆದ್ರೆ, ಪರೋಕ್ಷವಾಗಿ ಸ್ಮಾರಕ ನಿರ್ಮಾಣಕ್ಕೆ ಬೆಂಬಲ ನೀಡುವ ಕಲಾವಿದರು, ಮುಂದಾಳತ್ವ ವಹಿಸಿ ಮುಂದೆ ಬಂದಿದ್ದು ಕಡಿಮೆ.
ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಸುದೀಪ್ ಈ ಸಾಂಗ್ ಹಾಡ್ತಾರೆ ಯಾಕೆ.?
ಇನ್ನು ವಿಷ್ಣು ಸ್ಮಾರಕ ವಿಚಾರದಲ್ಲಿ ನಟ ಸುದೀಪ್ ಆಗಾಗ ಮಾತನಾಡಿ ಅಭಿಮಾನಿಗಳಿಗೆ ಧೈರ್ಯ ಮತ್ತು ಸ್ಫೂರ್ತಿ ತುಂಬುತ್ತಿದ್ದಾರೆ. ಬಹುಶಃ ಇದನ್ನೆಲ್ಲಾ ನೋಡಿದ್ರೆ, ಆದಷ್ಟೂ ಬೇಗ ಈ ಸಮಸ್ಯೆ ಬಗೆಹರಿದು ಸಾಹಸ ಸಿಂಹನ ಸ್ಮಾರಕ ಆರಂಭವಾಗುತ್ತೆ ಎಂಬ ಭರವಸೆ ಮೂಡುತ್ತಿದೆ.