Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಮೆಡಿಯನ್ ಜಸ್ಪಾಲ್ ಭಟ್ಟಿ ದುರಂತ ಸಾವು
ಕಳೆದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಜಲಂಧರ್ ನಲ್ಲಿ ಜಸ್ಪಾಲ್ ಭಟ್ಟಿ ಅವರಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡ ಭಟ್ಟಿ ಅವರು ಸಾವನ್ನಪ್ಪಿದ್ದಾರೆ ಎಂದು ಅವರ ಸಹಚರ ವಿನೋದ್ ಶರ್ಮ ಅವರ ಹೇಳಿದ್ದಾರೆ.
ಪಂಜಾಬಿ ಚಿತ್ರ ' ಪವರ್ ಕಟ್' ಪ್ರಚಾರಕ್ಕಾಗಿ ಭಟಿಂಡಾದಿಂದ ಜಲಂಧರ್ ಕಡೆಗೆ ಹೋಗುತ್ತಿದ್ದರು. ಕಾರನ್ನು ಜಸ್ಪಾಲ್ ಭಟ್ಟಿ ಅವರ ಪುತ್ರ ಜಸ್ ರಾಜ್ ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಜಸ್ಪಾಲ್ ಭಟ್ಟಿ ಪುತ್ರ ಜಸ್ ರಾಜ್, ಚಿತ್ರದ ನಾಯಕಿ ಸುರಿಲ್ ಗೌತಮ್ ಹಾಗೂ ವಿನೋದ್ ಶರ್ಮ ಅವರಿಗೆ ತೀವ್ರ ಗಾಯ ಉಂಟಾಗಿದ್ದು ಜಲಂಧರ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಅಂತ್ಯಕ್ರಿಯೆ ಗುರುವಾರ ಸಂಜೆ ಅಥವಾ ಶುಕ್ರವಾರ ನಡೆಯುವ ಸಾಧ್ಯತೆಯಿದೆ ಎಂದು ಕುಟುಂಬದ ಮೂಲಗಳು ಹೇಳಿದೆ.
ಜಸ್ಪಾಲ್ ಭಟ್ಟಿ ಅವರು ಪತ್ನಿ ಸವಿತಾಅ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪಂಚಿಂಗ್ ಡೈಲಾಗ್ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಜನರಿಗೆ ತಲುಪಿಸುತ್ತಾ, ಸರ್ಕಾರಗಳ ನೀತಿಗಳನ್ನು 'ಪನ್' ಮೂಲಕ ತಿವಿಯುತ್ತಿದ್ದ ಜಸ್ಪಾಲ್ ಭಟ್ಟಿ ದೂರದರ್ಶನ ಜನಪ್ರಿಯ ಕಲಾವಿದರಾಗಿದ್ದರು.
ಹಲವು
ಚಿತ್ರಗಳನ್ನು
ನಟಿಸಿದ್ದ
ಜಸ್ಪಾಲ್
ಅವರು
ನಟ,
ನಿರ್ದೇಶಕ,
ಸಂಭಾಷಣೆಕಾರರಾಗಿ
ಜನಪ್ರಿಯತೆ
ಗಳಿಸಿದ್ದರು.
ಈಗ
ಚಾಲ್ತಿಯಲ್ಲಿರುವ
ಕಾಮೆಡಿ
ಶೋ,
ರಿಯಾಲಿಟಿ
ಟಾಕ್
ಶೋ
ಗಳ
ಪರಿಕಲ್ಪನೆಯನ್ನು
ಮೊದಲ
ಬಾರಿಗೆ
ಸಮರ್ಥವಾಗಿ
ದೂರದರ್ಶನ
ಮೂಲಕ
ವೀಕ್ಷಕರಿಗೆ
ಪರಿಚಯಿಸಿದ್ದು
ಜಸ್ಪಾಲ್
ಭಟ್ಟಿ
ಎಂದರೆ
ತಪ್ಪಾಗಲಾರದು.
ಫ್ಲಾಪ್
ಶೋ:
90ರ
ದಶಕದಲ್ಲಿ
ದೂರದರ್ಶನದಲ್ಲಿ
ಫ್ಲಾಪ್
ಶೋ
ಹಾಗೂ
ಉಲ್ಟಾ
ಪಲ್ಟಾ
ಸರಣಿ
ಮೂಲಕ
ಜನಪ್ರಿಯತೆ
ಗಳಿಸಿದ
ಜಸ್ಪಾಲ್
ಭಟ್ಟಿ
ಮೂಲತಃ
ಅಮೃತ
ಸರ್
ನ
ರಜಪೂತ್
ಪರಿವಾರದವರು.
ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಪದವಿ ಗಳಿಸಿದರೂ ಭಟ್ಟಿ ಮಾತ್ರ ತನ್ನೊಳಗಿನ ಕಲಾವಿದನನ್ನು ಮರೆಯಲಿಲ್ಲ.
ಕಾಲೇಜು ದಿನಗಳಲ್ಲಿ ನಾನ್ಸೆಸ್ ಕ್ಲಬ್ ಎಂಬ ಬೀದಿ ನಾಟಕ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಸಮಾಜದ ಭ್ರಷ್ಟಾಚಾರ ವಿರುದ್ಧ ನಗೆ ಚಾಟಿ ಬೀಸುತ್ತಿದ್ದ ಭಟ್ಟಿ, ಕಾರ್ಟೂನಿಸ್ಟ್ ಕೂಡಾ.
ಕೋಯಿ ಮೇರೆ ದಿಲ್ ಸೆ ಪೂಂಚೆ, ಫನಾ ಮುಂತಾದ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಜಸ್ಪಾಲ್, ಪಂಜಾಬಿ ಚಿತ್ರಗಳ ಬೆಳವಣಿಗೆಯಲ್ಲೂ ಕೈಯಾಡಿಸಿದ್ದರು. ಸಬ್ ಟಿವಿಯ ಕಾಮೆಡಿ ಕ ಕಿಂಗ್ ಕೌನ್ ಸರಣಿಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.
ಸ್ಟಾರ್ ಪ್ಲಸ್ ನ 'ನಚ್ ಬಲಿಯೆ' ಶೋನಲ್ಲಿ ಪತ್ನಿ ಸವಿತಾ ಜೊತೆ ಕುಣಿದು ನಲಿದಿದ್ದರು. ಈ ದಂಪತಿಗಳು ಮೊಹಾಲಿಯಲ್ಲಿ 'ಜೋಕ್ ಫ್ಯಾಕ್ಟರಿ' ಎಂಬ ತರಬೇತಿ ಶಾಲೆ ಆರಂಭಿಸಿದ್ದರು.
ಇತ್ತೀಚೆಗೆ ಬೆಲೆ ಏರಿಕೆ, ಭ್ರೂಣ ಹತ್ಯೆ ವಿರುದ್ಧ ಜಸ್ಪಾಲ್ ಭಟ್ಟಿ ಅವರು ಸಮರ ಸಾರಿದ್ದರು. ಹಾಸ್ಯವನ್ನು ಸಮರ್ಥವಾಗಿ ಬಳಸಿಕೊಂಡು ಟಿವಿ ಮಾಧ್ಯಮದ ಮೂಲಕ ವೀಕ್ಷಕರಿಗೆ ಒಂದಿಷ್ಟು ಮನರಂಜನೆ ಹಾಗೂ ಅರಿವು ಮೂಡಿಸುತ್ತಿದ್ದ ಭಟ್ಟಿ ಸಾವು ತುಂಬಲಾರದ ನಷ್ಟವಾಗಿದೆ.